20230628 230556

ರೈತರಿಗೆ ವಿಶಿಷ್ಟ ಪ್ಯಾಕೇಜ್ ಘೋಷಣೆ….!

BUSINESS NATIONAL National - ಕನ್ನಡ

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

azadi ka amrit mahotsav
g20-india-2023

ರೈತರಿಗೆ ವಿಶಿಷ್ಟ ಪ್ಯಾಕೇಜ್ ಘೋಷಣೆ


ರೈತರ ಯೋಗಕ್ಷೇಮವನ್ನು ಹೆಚ್ಚಿಸಲು, ಮಣ್ಣಿನ ಉತ್ಪಾದಕತೆಯನ್ನು ಪುನಶ್ಚೇತನಗೊಳಿಸಲು ಮತ್ತು ಆಹಾರ ಭದ್ರತೆ ಮತ್ತು ಪರಿಸರ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಿಸಿಇಎ ಹಲವು ಯೋಜನೆಗಳನ್ನು ಅನುಮೋದಿಸಿದೆ

ಸಿಸಿಇಎ ಯುರಿಯಾ ಸಬ್ಸಿಡಿ ಯೋಜನೆಯ ಮುಂದುವರಿಕೆಯನ್ನು ಅನುಮೋದಿಸಿದೆ; 3 ವರ್ಷಗಳವರೆಗೆ (2022-23 ರಿಂದ 2024-25) ಯೂರಿಯಾ ಸಬ್ಸಿಡಿಗಾಗಿ 3,68,676.7 ಕೋಟಿ ರೂ. ಒದಗಿಸಲಾಗುವುದು

ತ್ಯಾಜ್ಯದಿಂದ ಸಂಪತ್ತು ಮಾದರಿಯ ಮಾರುಕಟ್ಟೆ ಅಭಿವೃದ್ಧಿ ಸಹಾಯ (ಎಂಡಿಎ) ಯೋಜನೆಗೆ 1451 ಕೋಟಿ ರೂ.ಅನುಮೋದನೆ; ಗೋಬರ್ಧನ್ ಘಟಕಗಳ ತ್ಯಾಜ್ಯ ಮತ್ತು ಸಾವಯವ ಗೊಬ್ಬರವನ್ನು ಮಣ್ಣನ್ನು ಸಮೃದ್ಧಗೊಳಿಸಲು ಮತ್ತು ಪರಿಸರವನ್ನು ಸುರಕ್ಷಿತ ಮತ್ತು ಸ್ವಚ್ಛವಾಗಿಡಲು ಬಳಸಲಾಗುವುದು

ಮಣ್ಣಿನ ಸಲ್ಫರ್ ಕೊರತೆಯನ್ನು ನಿವಾರಿಸಲು ಮತ್ತು ರೈತರ ಕೃಷಿ ವೆಚ್ಚವನ್ನು ಉಳಿಸಲು ಸಲ್ಫರ್ ಲೇಪಿತ ಯೂರಿಯಾ (ಯೂರಿಯಾ ಚಿನ್ನ) ಪರಿಚಯ

Posted On: 28 JUN 2023 3:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ) ರೈತರಿಗಾಗಿ ಒಟ್ಟು 3,70,128.7 ಕೋಟಿ ರೂ.ಗಳ ವಿನೂತನ ಯೋಜನೆಗಳ ವಿಶಿಷ್ಟ ಪ್ಯಾಕೇಜ್‌ಗೆ ಇಂದು ಅನುಮೋದನೆ ನೀಡಿದೆ. ಯೋಜನೆಗಳ ಪ್ಯಾಕೇಜ್‌ ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಮೂಲಕ ರೈತರ ಒಟ್ಟಾರೆ ಯೋಗಕ್ಷೇಮ ಮತ್ತು ಆರ್ಥಿಕ ಸುಧಾರಣೆಯನ್ನು ಕೇಂದ್ರೀಕರಿಸುತ್ತದೆ. ಈ ಉಪಕ್ರಮಗಳು ರೈತರ ಆದಾಯವನ್ನು ಹೆಚ್ಚಿಸುತ್ತವೆ, ಸಹಜ/ಸಾವಯವ ಕೃಷಿಯನ್ನು ಬಲಪಡಿಸುತ್ತವೆ, ಮಣ್ಣಿನ ಉತ್ಪಾದಕತೆಯನ್ನು ಪುನರುಜ್ಜೀವನಗೊಳಿಸುತ್ತವೆ ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸುತ್ತವೆ.

45 ಕೆಜಿ ಚೀಲದ ಯೂರಿಯಾವು ತೆರಿಗೆಗಳು ಮತ್ತು ಬೇವಿನ ಲೇಪನ ಶುಲ್ಕಗಳನ್ನು ಹೊರತುಪಡಿಸಿ, 242 ರೂ. ಬೆಲೆಯಲ್ಲಿಯೇ ರೈತರಿಗೆ ನಿರಂತರವಾಗಿ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಯೂರಿಯಾ ಸಬ್ಸಿಡಿ ಯೋಜನೆಯ ಮುಂದುವರಿಕೆಯನ್ನು ಸಿಸಿಇಎ ಅನುಮೋದಿಸಿತು. ಈ ಅನುಮೋದಿತ ಪ್ಯಾಕೇಜ್‌ನಲ್ಲಿ, ಮೂರು ವರ್ಷಗಳವರೆಗೆ (2022-23 ರಿಂದ 2024-25) ಯೂರಿಯಾ ಸಬ್ಸಿಡಿಗಾಗಿ 3,68,676.7 ಕೋಟಿ ರೂ. ಒದಗಿಸಲಾಗುವುದು. ಇದು 2023-24ರ ಮುಂಗಾರು ಹಂಗಾಮಿಗೆ ಇತ್ತೀಚೆಗೆ ಅನುಮೋದಿಸಲಾದ 38,000 ಕೋಟಿ ರೂ.ಗಳ ಪೋಷಕಾಂಶ ಆಧಾರಿತ ಸಬ್ಸಿಡಿಯನ್ನು ಹೊರತುಪಡಿಸಿದೆ. ರೈತರು ಯೂರಿಯಾ ಖರೀದಿಗೆ ಹೆಚ್ಚುವರಿ ಖರ್ಚು ಮಾಡಬೇಕಾಗಿಲ್ಲ ಮತ್ತು ಇದು ಅವರ ಕೃಷಿ ವೆಚ್ಚವನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. ಪ್ರಸ್ತುತ, ಪ್ರತಿ 45 ಕೆಜಿ ಚೀಲದ ಯೂರಿಯಾದ ಬೆಲೆ ರೂ 242 ಆಗಿದೆ (ಬೇವಿನ ಲೇಪನದ ಶುಲ್ಕಗಳು ಮತ್ತು ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ), ಆದರೆ ಚೀಲದ ನೈಜ ಬೆಲೆ ಸುಮಾರು ರೂ 2200. ಈ ಯೋಜನೆಗೆ ಬಜೆಟ್ ಬೆಂಬಲದ ಮೂಲಕ ಭಾರತ ಸರ್ಕಾರವು ಸಂಪೂರ್ಣವಾಗಿ ಹಣಕಾಸು ಒದಗಿಸುತ್ತಿದೆ. ಯೂರಿಯಾ ಸಬ್ಸಿಡಿ ಯೋಜನೆಯ ಮುಂದುವರಿಕೆಯು ಸ್ವಾವಲಂಬನೆಯ ಮಟ್ಟವನ್ನು ತಲುಪಲು ಯೂರಿಯಾದ ಸ್ಥಳೀಯ ಉತ್ಪಾದನೆಯನ್ನು ಗರಿಷ್ಠಗೊಳಿಸುತ್ತದೆ.

ನಿರಂತರವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಹೆಚ್ಚಿದ ಕಚ್ಚಾ ವಸ್ತುಗಳ ಬೆಲೆಗಳಿಂದಾಗಿ, ಗೊಬ್ಬರದ ಬೆಲೆಗಳು ವರ್ಷ ವರ್ಷವೂ ಜಾಗತಿಕವಾಗಿ ಬಹುಪಟ್ಟು ಹೆಚ್ಚಾಗುತ್ತಿವೆ. ಆದರೆ ಭಾರತ ಸರ್ಕಾರವು ರಸಗೊಬ್ಬರ ಸಬ್ಸಿಡಿಯನ್ನು ಹೆಚ್ಚಿಸುವ ಮೂಲಕ ತೀವ್ರವಾದ ರಸಗೊಬ್ಬರ ಬೆಲೆ ಏರಿಕೆಯಿಂದ ತನ್ನ ರೈತರನ್ನು ರಕ್ಷಿಸಿದೆ. ನಮ್ಮ ರೈತರನ್ನು ರಕ್ಷಿಸುವ ಪ್ರಯತ್ನದಲ್ಲಿ, ಭಾರತ ಸರ್ಕಾರವು ರಸಗೊಬ್ಬರ ಸಬ್ಸಿಡಿಯನ್ನು 2014-15 ರಲ್ಲಿ 73,067 ಕೋಟಿ ರೂ.ಗಳಿಂದ 2022-23 ರಲ್ಲಿ 2,54,799 ಕೋಟಿ ರೂ.ಗಳಿಗೆ ಹೆಚ್ಚಿಸಿದೆ.

ನ್ಯಾನೋ ಯೂರಿಯಾ ಪೂರಕ ವ್ಯವಸ್ಥೆಯನ್ನು ಬಲಪಡಿಸಲಾಗಿದೆ

2025-26 ರ ವೇಳೆಗೆ, 195 ಎಲ್‌ ಎಂ ಟಿ ಸಾಂಪ್ರದಾಯಿಕ ಯೂರಿಯಾಕ್ಕೆ ಸಮನಾಗಿರುವ 44 ಕೋಟಿ ಬಾಟಲಿಗಳ ಉತ್ಪಾದನಾ ಸಾಮರ್ಥ್ಯದ ಎಂಟು ನ್ಯಾನೋ ಯೂರಿಯಾ ಘಟಕಗಳನ್ನು ಆರಂಭಿಸಲಾಗುತ್ತದೆ. ನ್ಯಾನೊ ರಸಗೊಬ್ಬರವು ನಿಯಂತ್ರಿತ ರೀತಿಯಲ್ಲಿ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಹೆಚ್ಚಿನ ಪೋಷಕಾಂಶಗಳ ಬಳಕೆಯ ದಕ್ಷತೆಗೆ ಕೊಡುಗೆ ನೀಡುತ್ತದೆ ಮತ್ತು ರೈತರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ನ್ಯಾನೋ ಯೂರಿಯಾದ ಬಳಕೆಯು ಬೆಳೆ ಇಳುವರಿಯಲ್ಲಿ ಹೆಚ್ಚಳವನ್ನು ತೋರಿಸಿದೆ.

2025-26  ವೇಳೆಗೆ ದೇಶವು ಯೂರಿಯಾದಲ್ಲಿ ಆತ್ಮನಿರ್ಭರ ಆಗುವ ಹಾದಿಯಲ್ಲಿದೆ

ರಾಜಸ್ಥಾನದ ಕೋಟಾದಲ್ಲಿರುವ ಚಂಬಲ್ ಫರ್ಟಿ ಲಿಮಿಟೆಡ್‌ನಲ್ಲಿ 6 ಯೂರಿಯಾ ಉತ್ಪಾದನಾ ಘಟಕಗಳ ಸ್ಥಾಪನೆ ಮತ್ತು ಪುನಶ್ಚೇತನ, ಪಶ್ಚಿಮ ಬಂಗಾಳದ ಪನಗರ್ ನಲ್ಲಿರುವ  ಮ್ಯಾಟಿಕ್ಸ್ ಲಿಮಿಟೆಡ್. ತೆಲಂಗಾಣ ರಾಮಗುಂಡಂ, ಉತ್ತರ ಪ್ರದೇಶದ ಗೋರಖ್‌ಪುರ, ಜಾರ್ಖಂಡ್ ನ ಸಿಂಡ್ರಿ ಮತ್ತು ಬಿಹಾರದ ಬರೌನಿ ಘಟಕಗಳು 2018 ರಿಂದ ಯೂರಿಯಾ ಉತ್ಪಾದನೆ ಮತ್ತು ಲಭ್ಯತೆಯ ವಿಷಯದಲ್ಲಿ ದೇಶವನ್ನು ಆತ್ಮನಿರ್ಭರ್ ಮಾಡಲು ಸಹಾಯ ಮಾಡುತ್ತಿದೆ. ಯೂರಿಯಾದ ಸ್ಥಳೀಯ ಉತ್ಪಾದನೆಯು 2014-15ರಲ್ಲಿದ್ದ 225 ಎಲ್‌ಎಂಟಿಯಿಂದ 2021-22ರಲ್ಲಿ 250 ಎಲ್‌ಎಂಟಿಗಳಿಗೆ ಏರಿಕೆಯಾಗಿದೆ. 2022-23ರಲ್ಲಿ ಉತ್ಪಾದನಾ ಸಾಮರ್ಥ್ಯ 284 ಎಲ್‌ಎಂಟಿಗೆ ಏರಿಕೆಯಾಗಿದೆ. ನ್ಯಾನೋ ಯೂರಿಯಾ ಘಟಕಗಳ ಜೊತೆಗೆ ಇವುಗಳು ಯೂರಿಯಾದಲ್ಲಿನ ನಮ್ಮ ಪ್ರಸ್ತುತ ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತವೆ ಮತ್ತು ಅಂತಿಮವಾಗಿ 2025-26 ರ ವೇಳೆಗೆ ನಮ್ಮನ್ನು ಸ್ವಾವಲಂಬಿಯನ್ನಾಗಿ ಮಾಡುತ್ತವೆ.

ಭೂತಾಯಿಯ ಪುನಃಸ್ಥಾಪನೆಜಾಗೃತಿ ಮೂಡಿಸುವಿಕೆಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನ ಮಂತ್ರಿಯವರ ಕಾರ್ಯಕ್ರಮ (ಪಿಎಂ ಪ್ರಣಾಮ್)

ಭೂತಾಯಿ ಯಾವಾಗಲೂ ಮನುಕುಲಕ್ಕೆ ಸಾಕಷ್ಟು ಮೂಲಗಳನ್ನು ಒದಗಿಸಿದ್ದಾಳೆ. ರಾಸಾಯನಿಕ ಗೊಬ್ಬರಗಳ ಸಮತೋಲಿತ / ಸುಸ್ಥಿರ ಬಳಕೆಯನ್ನು ಉತ್ತೇಜಿಸಲು ಮತ್ತು ಕೃಷಿಯಲ್ಲಿ ಹೆಚ್ಚು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಸಹಜ / ಸಾವಯವ ಕೃಷಿ, ಪರ್ಯಾಯ ರಸಗೊಬ್ಬರಗಳು, ನ್ಯಾನೋ ರಸಗೊಬ್ಬರಗಳು ಮತ್ತು ಜೈವಿಕ ಗೊಬ್ಬರಗಳಂತಹ ನಾವೀನ್ಯತೆಗಳನ್ನು ಉತ್ತೇಜಿಸುವುದು ನಮ್ಮ ಭೂಮಿಯ ಫಲವತ್ತತೆಯನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಪರ್ಯಾಯ ರಸಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು “ಭೂ ತಾಯಿಯ ಮರುಸ್ಥಾಪನೆ, ಜಾಗೃತಿ ಮೂಡಿಸುವಿಕೆ, ಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನ ಮಂತ್ರಿಯವರ ಕಾರ್ಯಕ್ರಮ (ಪಿಎಂ ಪ್ರಣಾಮ್‌)” ಅನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

ಗೋಬರ್ಧನ್ ಘಟಕಗಳಿಂದ ಸಾವಯವ ಗೊಬ್ಬರಗಳನ್ನು ಉತ್ತೇಜಿಸಲು ಮಾರುಕಟ್ಟೆ ಅಭಿವೃದ್ಧಿ ಸಹಾಯ (ಎಂಡಿಎಯೋಜನೆಗೆ 1451.84 ಕೋಟಿ ರೂ.ಗಳನ್ನು ಅನುಮೋದಿಸಲಾಗಿದೆ

ಇಂದಿನ ಅನುಮೋದಿತ ಪ್ಯಾಕೇಜ್ ಮಾತೃಭೂಮಿಯ ಪುನಃಸ್ಥಾಪನೆ, ಪೋಷಣೆ ಮತ್ತು ಸುಧಾರಣೆಗಾಗಿ ವಿನೂತನ ಪ್ರೋತ್ಸಾಹಕ ಕಾರ್ಯವಿಧಾನವನ್ನು ಒಳಗೊಂಡಿದೆ. ಸಾವಯವ ಗೊಬ್ಬರಗಳ ಮಾರುಕಟ್ಟೆಯನ್ನು ಬೆಂಬಲಿಸಲು ಜೈವಿಕ ಅನಿಲದಿಂದ ಉಪ-ಉತ್ಪನ್ನವಾಗಿ ಉತ್ಪಾದಿಸಲಾದ ಹುದುಗಿಸಿದ ಸಾವಯವ ಗೊಬ್ಬರಗಳು (ಎಫ್‌ಒ ಎಂ)/ದ್ರವೀಕೃತ ಎಫ್‌ ಒ ಎಂ/ಫಾಸ್ಫೇಟ್ ಸಮೃದ್ಧ ಸಾವಯವ ಗೊಬ್ಬರ (PROM) ಗಳಿಗೆ ಪ್ರತಿ ಮೆಟ್ರಿಕ್‌ ಟನ್‌ ಗೆ ರೂ. 1500 ರೂಪದಲ್ಲಿ ಮಾರುಕಟ್ಟೆ ಅಭಿವೃದ್ಧಿ ಸಹಾಯ (ಎಂಡಿಎ) ಯೋಜನೆಯ ಗೊಬರ್ಧನ್ ಉಪಕ್ರಮದ ಅಡಿಯಲ್ಲಿ ಸ್ಥಾಪಿಸಲಾದ ಘಟಕಗಳು/ಕಂಪ್ರೆಸ್ಡ್ ಜೈವಿಕ ಅನಿಲ (ಸಿಬಿಜಿ) ಘಟಕಗಳಿಗೆ ನೀಡಲಾಗುವುದು.

ಅಂತಹ ಸಾವಯವ ಗೊಬ್ಬರಗಳನ್ನು ಭಾರತ್ ಬ್ರಾಂಡ್ FOM, LFOM ಮತ್ತು PROM ಹೆಸರಿನಲ್ಲಿ ಬ್ರಾಂಡ್ ಮಾಡಲಾಗುತ್ತದೆ. ಇದು ಒಂದೆಡೆ ಬೆಳೆ ಅವಶೇಷಗಳ ನಿರ್ವಹಣೆಯ ಸವಾಲು ಮತ್ತು ಬೆಳೆ ತ್ಯಾಜ್ಯ ಸುಡುವಿಕೆಯ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುತ್ತದೆ, ಪರಿಸರವನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ರೈತರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುತ್ತದೆ. ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಸಾವಯವ ಗೊಬ್ಬರಗಳು (FOM/LFOM/ PROM) ಸಿಗುತ್ತವೆ.

ಈ ಉಪಕ್ರಮವು ಈ ಬಿಜಿ/ಸಿಬಿಜಿ ಘಟಕಗಳ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಮರುಬಳಕೆ ಆರ್ಥಿಕತೆಯನ್ನು ಉತ್ತೇಜಿಸಲು ಗೋಬರ್ಧನ್ ಯೋಜನೆಯಡಿಯಲ್ಲಿ 500 ಹೊಸ ತ್ಯಾಜ್ಯದಿಂದ ಸಂಪತ್ತು ಘಟಕಗಳನ್ನು ಸ್ಥಾಪಿಸುವ ಬಜೆಟ್ ಘೋಷಣೆಯ ಅನುಷ್ಠಾನವನ್ನು ಸುಗಮಗೊಳಿಸುತ್ತದೆ.

ಸುಸ್ಥಿರ ಕೃಷಿ ಪದ್ಧತಿಯಾಗಿ ಸಹಜ ಕೃಷಿಯನ್ನು ಉತ್ತೇಜಿಸುವುದು ಮಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸುತ್ತದೆ ಮತ್ತು ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ. 425 ಕೆವಿಕೆಗಳು (ಕೃಷಿ ವಿಜ್ಞಾನ ಕೇಂದ್ರಗಳು) ಸಹಜ ಕೃಷಿ ಪದ್ಧತಿಗಳ ಪ್ರಾತ್ಯಕ್ಷಿಕೆಗಳನ್ನು ನೀಡಿವೆ ಮತ್ತು 6.80 ಲಕ್ಷ ರೈತರನ್ನು ಒಳಗೊಂಡ 6,777 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಬಿ ಎಸ್‌ ಸಿ ಮತ್ತು ಎಂ ಎಸ್‌ ಸಿ ಕೋರ್ಸ್ ನಲ್ಲಿ ಜುಲೈ-ಆಗಸ್ಟ್ 2023 ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಸಹಜ ಕೃಷಿಯ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲಾಗಿದೆ.

ಮಣ್ಣಿನ ಸಲ್ಫರ್ ಕೊರತೆಯನ್ನು ನಿವಾರಿಸಲು ಮತ್ತು ರೈತರ ಕೃಷಿ ವೆಚ್ಚವನ್ನು ಉಳಿಸಲು ಸಲ್ಫರ್ ಲೇಪಿತ ಯೂರಿಯಾ (ಯೂರಿಯಾ ಚಿನ್ನಪರಿಚಯ

ಪ್ಯಾಕೇಜ್‌ನ ಮತ್ತೊಂದು ಉಪಕ್ರಮವೆಂದರೆ ಸಲ್ಫರ್ ಲೇಪಿತ ಯೂರಿಯಾ (ಯೂರಿಯಾ ಚಿನ್ನ) ವನ್ನು ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಪ್ರಸ್ತುತ ಬಳಸುತ್ತಿರುವ ಬೇವು ಲೇಪಿತ ಯೂರಿಯಾಕ್ಕಿಂತ ಇದು ಹೆಚ್ಚು ಮಿತವ್ಯಯ ಮತ್ತು ಪರಿಣಾಮಕಾರಿಯಾಗಿದೆ. ಇದು ದೇಶದ ಮಣ್ಣಿನಲ್ಲಿ ಗಂಧಕದ ಕೊರತೆಯನ್ನು ನಿವಾರಿಸುತ್ತದೆ. ಇದು ರೈತರಿಗೆ ಕೃಷಿ ವೆಚ್ಚವನ್ನು ಉಳಿಸುತ್ತದೆ ಮತ್ತು ವರ್ಧಿತ ಉತ್ಪಾದನೆ ಮತ್ತು ಉತ್ಪಾದಕತೆಯೊಂದಿಗೆ ರೈತರ ಆದಾಯವನ್ನು ಹೆಚ್ಚಿಸುತ್ತದೆ.

ಒಂದು ಲಕ್ಷ ಮುಟ್ಟಿದ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು (ಪಿಎಂಕೆಎಸ್ಕೆ)

ದೇಶದಲ್ಲಿ ಈಗಾಗಲೇ ಸುಮಾರು ಒಂದು ಲಕ್ಷ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು (ಪಿಎಂಕೆಎಸ್‌ಕೆ) ಇವೆ. ರೈತರ ಅನುಕೂಲಕ್ಕಾಗಿ, ರೈತರ ಎಲ್ಲಾ ಅಗತ್ಯಗಳಿಗೆ ಒಂದು ನಿಲುಗಡೆ ಪರಿಹಾರವಾಗಿ ಕೃಷಿ ಸಂಬಂಧಿ ಪರಿಕರಗಳನ್ನು ಇಲ್ಲಿ ಒದಗಿಸಲಾಗುತ್ತಿದೆ.

ಪ್ರಯೋಜನಗಳು:

ಅನುಮೋದಿತ ಯೋಜನೆಗಳು ರಾಸಾಯನಿಕ ಗೊಬ್ಬರಗಳ ವಿವೇಚನಾಯುಕ್ತ ಬಳಕೆಗೆ ಸಹಾಯ ಮಾಡುತ್ತವೆ, ಇದರಿಂದಾಗಿ ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತವೆ. ಸಹಜಕ/ಸಾವಯವ ಕೃಷಿ, ನವೀನ ಮತ್ತು ಪರ್ಯಾಯ ಗೊಬ್ಬರಗಳಾದ ನ್ಯಾನೋ ರಸಗೊಬ್ಬರಗಳು ಮತ್ತು ಸಾವಯವ ಗೊಬ್ಬರಗಳನ್ನು ಉತ್ತೇಜಿಸುವುದು ನಮ್ಮ ಭೂಮಿ ತಾಯಿಯ ಫಲವತ್ತತೆಯನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತವೆ.

i.          ಸುಧಾರಿತ ಮಣ್ಣಿನ ಆರೋಗ್ಯವು ಹೆಚ್ಚಿದ ಪೋಷಕಾಂಶದ ದಕ್ಷತೆಗೆ ಕಾರಣವಾಗುತ್ತದೆ ಮತ್ತು ಮಣ್ಣು ಮತ್ತು ನೀರಿನ ಮಾಲಿನ್ಯದ ಕಡಿತದಿಂದಾಗಿ ಸುರಕ್ಷಿತ ವಾತಾವರಣ ಸೃಷ್ಟಿಯಾಗುತ್ತದೆ. ಸುರಕ್ಷಿತ ಮತ್ತು ಸ್ವಚ್ಛ ಪರಿಸರವು ಮಾನವನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ii          ಪರಾಲಿಯಂತಹ ಬೆಳೆ ಅವಶೇಷಗಳ ಉತ್ತಮ ಬಳಕೆಯು ವಾಯು ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ಸ್ವಚ್ಛತೆ ಮತ್ತು ಜೀವನ ಪರಿಸರವನ್ನು ಸುಧಾರಿಸುತ್ತದೆ ಮತ್ತು ತ್ಯಾಜ್ಯವನ್ನು ಸಂಪತ್ತನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.

iii         ರೈತರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ – ಅದೇ ಕೈಗೆಟುಕುವ ಬೆಲೆಯಲ್ಲಿ ಯೂರಿಯಾ ಲಭ್ಯವಾಗುವುದರಿಂದ ಅವರು ಹೆಚ್ಚುವರಿಯಾಗಿ ಏನನ್ನೂ ಪಾವತಿಸಬೇಕಾಗಿಲ್ಲ. ಸಾವಯವ ಗೊಬ್ಬರಗಳು (FOM/PROM) ಸಹ ಅಗ್ಗದ ಬೆಲೆಯಲ್ಲಿ ಲಭ್ಯವಿರುತ್ತವೆ. ಕಡಿಮೆ ಬೆಲೆಯ ನ್ಯಾನೋ ಯೂರಿಯಾ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮತ್ತು ಸಾವಯವ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಿದರೆ, ರೈತರಿಗೆ ಕೃಷಿ ವೆಚ್ಚವು ಕಡಿಮೆಯಾಗುತ್ತದೆ. ಆರೋಗ್ಯಕರ ಮಣ್ಣು ಮತ್ತು ನೀರಿನೊಂದಿಗೆ ಕಡಿಮೆ ಕೃಷಿ ವೆಚ್ಚವು ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಆದಾಯವನ್ನು ಪಡೆಯುತ್ತಾರೆ.