IMG 20230706 WA0027

ಪಾವಗಡ :ಬೆಸ್ಕಾಂ ಸಹಾಯಕ ಕಿರಿಯ ಎಂಜಿನಿಯರ್ ಆತ್ಮಹತ್ಯೆ

DISTRICT NEWS ತುಮಕೂರು

ಬೆಸ್ಕಾಂ ಸಹಾಯಕ ಕಿರಿಯ ಎಂಜಿನಿಯರ್ ಆತ್ಮಹತ್ಯೆ

ಪಾವಗಡ: ಬೆಸ್ಕಾಂ ಇಂಜಿನಿಯರೂಬ್ಬರು ಪಟ್ಟಣದ ಖಾಸಗಿ ವಸತಿ ನಿಲಯ ದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ಪಟ್ಟಣದಲ್ಲಿ ಗುರುವಾರ  ಬೆಳಕಿಗೆ ಬಂದಿದೆ.ತಾಲೂಕಿನ ವೈ ಎನ್ ಹೊಸಕೋಟೆಯ ಎಸ್ ಮಂಜುನಾಥ(22) ಮೃತರೆಂದು ತಿಳಿದು ಬಂದಿದೆ. ಮಂಜುನಾಥ್ ಬೆಳ್ಳಂದೂರಿನ ಬೆಸ್ಕಾಂ ಪೂರ್ವ ವಿಭಾಗದಲ್ಲಿ ಸಹಾಯಕ ಕಿರಿಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಬೆಂಗಳೂರಿನಿಂದ ಪಟ್ಟಣಕ್ಕೆ ಬಂದಿದ್ದ ಇವರು ವೈ ಎನ್ ಹೊಸಕೋಟೆಗೆ ಹೋಗಲು ಬಸ್ ಗಳಿಲ್ಲ ಎಂದು ಹೇಳಿ ಬುಧವಾರ ರಾತ್ರಿ ಪಟ್ಟಣದ ಖಾಸಗಿ ವಸತಿ ಗೃಹದಲ್ಲಿ ಕೊಠಡಿಯನ್ನು ಪಡೆದಿದ್ದರೆಂದು ತಿಳಿದು ಬಂದಿದೆ.

  ಗುರುವಾರ ಬೆಳಿಗ್ಗೆ 8 ಗಂಟೆಯಾದರೂ ಕೊಠಡಿಯಿಂದ ಹೊರಬಾರದಿರುವುದರಿಂದ ಅನುಮಾನಗೊಂಡ ವಸತಿ ಗೃಹದ ಸಿಬ್ಬಂದಿ ಕಿಟಕಿಯಿಂದ ನೋಡಿದಾಗ ಫ್ಯಾನ್ ಗೆ ನೇಣು ಹಾಕಿಕೊಂಡಿರುವುದು ಗಮನಿಸಿ ತಕ್ಷಣ ಪಟ್ಟಣ ಠಾಣೆ ಪೊಲೀಸರಿಗೆ. ಸುದ್ದಿ ಮುಟ್ಟಿಸಿದ್ದಾರೆ.

ಮದುವೆ ವಿಚಾರದಲ್ಲಿ ಬೇಸರಗೊಂಡು ತನ್ನ ತಮ್ಮ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಮೃತರ ಅಣ್ಣ ದೂರಿನಲ್ಲಿ ತಿಳಿಸಿದ್ದರು. ಪಾವಗಡ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ.