IMG 20230809 WA0012

ಪಾವಗಡ: ವಸತಿ ನಿಲಯಕ್ಕೆ ಶಾಸಕರ ಭೇಟಿ. ಪರಿಶೀಲನೆ ‌

DISTRICT NEWS ತುಮಕೂರು

ವಸತಿ ನಿಲಯಕ್ಕೆ ಶಾಸಕರ ಭೇಟಿ. ಪರಿಶೀಲನೆ ‌.

ಪಾವಗಡ : ಪಟ್ಟಣದ ಕುರುಬರಹಳ್ಳಿ ಗೇಟ್ ಬಳಿ ಇರುವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಬುಧುವಾರ ಶಾಸಕ ಹೆಚ್ ವಿ ವೆಂಕಟೇಶ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
  ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಕೇಳಿ ತಿಳಿದರು.
ವಸತಿ ನಿಲಯ ಕಾಲೇಜಿನಿಂದ ಬಹು ದೂರ ಇರುವುದರಿಂದ, ಕಾಲೇಜಿಗೆ ಹೋಗಲು , ಬರಲು ಸರಿಯಾದ ಬಸ್ ಅನುಕೂಲ ಇಲ್ಲವೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿರು.
 ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಶಾಸಕರು ಕೂಡಲೇ ಬಾಲಕಿಯರ ಮನವಿಗೆ ಸ್ಪಂದಿಸಿ ಸರ್ಕಾರಿ ಬಸ್ ಡಿಪೋ ಮ್ಯಾನೇಜರ್ ಮತ್ತು ಖಾಸಗಿ ಬಸ್ ಮಾಲೀಕರ ಬಳಿ ಮಾತನಾಡಿ ಹಾಸ್ಟೆಲ್ ಬಳಿ ಬಸ್ ನಿಲ್ಲಿಸುವಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
 ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ತೆಂಗಿನಕಾಯಿ ರವಿ, ಪಿ ಹೆಚ್ ರಾಜೇಶ್, ನಾಗರಾಜ್, ಹಾಸ್ಟೆಲ್ ವಾರ್ಡನ್ ಲಕ್ಷ್ಮವ್ವ ಹಾಜರಿದ್ದರು.