9795b7b1 bd06 4e5c ac4a c2cf955c706c

ಪಾವಗಡ : ಸರ್ಕಾರಿ ಜಾಮೀನು ಒತ್ತುವರಿ-ಪರಿಶೀಲನೆ….!

DISTRICT NEWS ತುಮಕೂರು

ಜೆ.ಅಚ್ಚಮ್ಮನಹಳ್ಳಿ ಗ್ರಾಮಕ್ಕೆ ಉಪ ವಿಭಾಗ ಅಧಿಕಾರಿ ಬೇಟಿ ಪರಿಶೀಲನೆ

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೆ.ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಸರ್ವೆ ನಂ 26 ಸರ್ಕಾರಿ ಜಮೀನು ಒತ್ತುವರಿ ಆಗಿದೆ ಎಂದು ಲೋಕಯುಕ್ತ ಕಛೇರಿ ದೂರು ಬಂದ ಹಿನ್ನಲೆಯಲ್ಲಿ ಇಂದು ಮಧುಗಿರಿ ಉಪ ವಿಭಾಗ ಅಧಿಕಾರಿ ರೀಶಿ ಆನಂದ್ ಅವರು ಸ್ಥಳ ಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳ ಪರಿಶೀಲನೆಯ ನಂತರ ಮಾದ್ಯಮ ಗಳೊಂದಿಗೆ ಮಾತನಾಡಿದ ಅವರು ಜೆ.ಅಚ್ಚಮ್ಮನಹಳ್ಳಿ ಗ್ರಾಮದ ಸರ್ಕಾರಿ ಸರ್ವೆ ನಂ 26ರಲ್ಲಿ ಒತ್ತುವರಿ ಆಗಿದೆ ಎಂದು ಲೋಕಯುಕ್ತ ಕಛೇರಿಯಲ್ಲಿ ದೂರು ದಾಖಲಾಗಿದ್ದು ಇದರ ಬಗ್ಗೆ ಉಪಲೋಕಾಯುಕ್ತರು ವರದಿ ಕೇಳಿರುತ್ತಾರೆ ಆದ್ದರಿಂದ ನಾವು ಇಂದು ಪರಿಶೀಲಿಸಿದೆವು. ಈ ಬಗ್ಗೆ ಪಾವಗಡ ತಹಶಿಲ್ದಾರ್ .ಮತ್ತು ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಹಾಗೂ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಪೂರ್ಣ ವರದಿ ನೀಡಲು ತಿಳಿಸಿದ್ದೆನೆ ಎಂದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಸುಜಾತ, ಕಂದಾಯ ನಿರೀಕ್ಷಕರಾದ ಕಿರಣ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಅಮ್ಜದ್ ಖಾನ್, ಪುನೀತ್ ಕುಮಾರ್, ದಿಲವರ್, ದಿಲೀಪ್ ಕುಮಾರ್, ರಘುವೀರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಶೇಖರಯ್ಯ ಹಾಗೂ ಮುಂತಾದವರು ಹಾಜರಿದ್ದರು.

ವರದಿ- ನಂದೀಶ್‌ ನಾಯ್ಕ