IMG 20230812 WA0008

ಪಾವಗಡ : ರಸ್ತೆ ಅಪಘಾತ: ವಿದ್ಯಾರ್ಥಿಗಳ ಸಾವು…!

DISTRICT NEWS ತುಮಕೂರು

ರಸ್ತೆ ಅಪಘಾತ: ವಿದ್ಯಾರ್ಥಿಗಳ ಸಾವು
‌ಪಾವಗಡ :  ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಡಮಲಕುಂಟೆ ಗ್ರಾಮದ ಸಮೀಪ ನಡೆದಿದೆ.

ಆಂಧ್ರಪ್ರದೇಶದ ರೊದ್ದಂ ಮಂಡಲಂ ನ ಚಿನ್ನಿಕೊಡಿಪಲ್ಲಿ ಎಂಬ ಗ್ರಾಮದ ವಿದ್ಯಾರ್ಥಿಗಳಾದ ಈಶ್ವರ್(15) ಜಶ್ವಂತ್(15) ರಾಮು(18) ದ್ವಿಚಕ್ರ ವಾಹನದಲ್ಲಿ ಪಾವಗಡದ ಶನಿ ಮಹಾತ್ಮ ದೇವಸ್ಥಾನಕ್ಕೆ ಬರುವ ವೇಳೆ ಪಾವಗಡ ದಿಂದ ರೊದ್ದಂ ಕಡೆ ಬರುತ್ತಿದ್ದ ಬೊಲೆರೋ ವಾಹನಕ್ಕೆ ಕಡಮಲಕುಂಟೆ ಕ್ರಾಸ್ ಬಳಿ ಮುಖಮುಖಿ ಡಿಕ್ಕಿಯಾಗಿ ಈಶ್ವರ್ ಮತ್ತು ಜಸ್ವಂತ್ ಸ್ಥಳದಲ್ಲಿಯೇ ಮೃತಪಟ್ಟಿದ್ದು,

ವಿಷಯ ತಿಳಿದ ಸಾರ್ವಜನಿಕರು ತಕ್ಷಣ ಆಂಬುಲೆನ್ಸ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಆಂಬುಲೆನ್ಸ್ ಮೂಲಕ ಗಾಯಾಳು ರಾಮುನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾವಗಡ ಪಟ್ಟಣದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ.