IMG 20230907 WA0016

ಪಾವಗಡ: ಪರಿಹಾರ ಕೊಡಿಸುವಂತೆ ಮನವಿ….!

DISTRICT NEWS ತುಮಕೂರು

ಪರಿಹಾರ ಕೊಡಿಸುವಂತೆ ಮನವಿ.
ಪಾವಗಡ : ಪಟ್ಟಣದ ನಿವಾಸಿಯಾದ ನಾಗಮಣಿ ಸುಮಾರು 32 ವರ್ಷಗಳಿಂದ ಪಟ್ಟಣದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಿದ್ದು, ಯಾವುದೇ ನೋಟಿಸ್ ಮುನ್ಸೂಚನೆ ನೀಡಿದೆ ಏಕಾಏಕಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ನಾಗಮಣಿ ಆರೋಪಿಸಿ,
ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.
ತಕ್ಷಣ ಸ್ಪಂದಿಸಿದ ತಹಶೀಲ್ದಾರ್ ವರದರಾಜು ಮನವಿ ಪತ್ರ ಸ್ಪೀಕರಿಸಿದ 15 ದಿನದ ಒಳಗೆ ಇದರ ಬಗ್ಗೆ ವಿಚಾರಣೆ ಮಾಡಿ ನಾಗಮಣಿ ಅವರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು, ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ಡಿಜೆಸ್ ನಾರಾಯಣಪ್ಪ ,ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದ ಹಳೆ ಸಿಬ್ಬಂದಿಗಳಾದ ನಾಗಮಣಿ, ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಮಲ್ಲಿಕಾರ್ಜುನ, ವೆಂಕಟ್ ನಾಯ್ಡು, ಬಾಲಕೃಷ್ಣ, ನಂದೀಶ್ ಕುಮಾರ್, ಜಂಶೀರ್, ಹೇಮಂತ್ ಕುಮಾರ್, ಪವನ್ ಕುಮಾರ, ಮಂಜುನಾಥ್, ಅನಿಲ್ ಕುಮಾರ್ ಉಪಸ್ಥಿತರಿದ್ದರು.