IMG 20230929 WA0008

ಪಾವಗಡ : ಕಾವೇರಿ ಗಾಗಿ ಪ್ರತಿಭಟನೆ

DISTRICT NEWS ತುಮಕೂರು

ಕಾವೇರಿಗಾಗಿ ಪಾವಗಡದಲ್ಲಿ ಹೋರಾಟ….!

ಕೆ ಆರ್ ಎಸ್ ಡ್ಯಾಮ್ ನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಪಾವಗಡ ಪಟ್ಟಣದಲ್ಲಿ ತಾಲೂಕು ರೈತ ಸಂಘ ಹಸಿರು ಸೇನೆ, ಹೆಲ್ಪ್ ಸೊಸೈಟಿ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸೇನೆ, ಅಂಗನವಾಡಿ ಕಾರ್ಯಕರ್ತರ, ಸಿಪಿಎಂ ಪಕ್ಷದ ಜಯ ಕರ್ನಾಟಕ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಾವಗಡ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ

ಮೆರವಣಿಗೆಯ ನಂತರ ತಾಲೂಕು ಕಚೇರಿಯನ್ನು ಮೂತಿಗೆ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ

ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ಮಾತನಾಡಿ ಆಡಳಿತ ರೂಢ ಸರ್ಕಾರಗಳಿಂದ ರಾಜ್ಯಕ್ಕೆ ಮತ್ತು ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ, ನಮ್ಮ ನೀರು ಖಾಲಿಯಾಗಿ ನಾವು ಕಷ್ಟಕ್ಕೆ ಸಿಲ್ಕುವ ಪರಿಸ್ಥಿತಿ ಬಂದಿದ್ದರು ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ, ಮತ್ತು ಮೈಸೂರು ಕರ್ನಾಟಕ ಭಾಗದ ರೈತರಿಗೆ ಸಂಕಷ್ಟ ಉಂಟಾಗಿದೆ, ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ರಾಜ್ಯ ಸರ್ಕಾರಗಳು ಸೂಕ್ತ ರೀತಿಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ಬಿಸಿ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು,

ಈ ಸಂದರ್ಭದಲ್ಲಿ ಮುಖಂಡರಾದ ಕನ್ನಡ ಕೃಷ್ಣಮೂರ್ತಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ನಲಿಗಾನಹಳ್ಳಿ ಮಂಜುನಾಥ್, ಜಯ ಕರ್ನಾಟಕ ಸಂಘಟನೆಯ ಗೋವರ್ಧನ್, ಆಂಜನೇಯಲು, ಅಂಗನವಾಡಿ ಕಾರ್ಯಕರ್ತೆಯ ಮುಖ್ಯಸ್ಥೆ ಸುಶೀಲಮ್ಮ, ಕಾರ್ಮಿಕ ಮುಖಂಡ ರಾಮಕೃಷ್ಣ, ಕಿಸಾನ್ ಸಂಘದ ಕೃಷ್ಣರಾವ್, ಮುಖಂಡ ಗೋವಿಂದಪ್ಪ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳು ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.