15 8 20 Grocery distribution 3

ಪಾವಗಡ: ದವಸ, ಧಾನ್ಯದ ಕಿಟ್ ವಿತರಣೆ…

ತುಮಕೂರು DISTRICT NEWS

ಭಾರತ ಸ್ವಾತಂತ್ರ್ಯ ಪಡೆದು ಎಪ್ಪತ್ತನಾಲ್ಕು ವರುಷವಾಗಿದೆ. ಎಲ್ಲೆಲ್ಲೂ ಸಡಗರ ಸಂಭ್ರಮ ಉಳಿದಿದೆ, ಆದರೆ ದುರದೃಷ್ಟವಶಾತ್ ಅತಿ ಬಡತನದಿಂದ ನೊಂದಿರುವ ಕೂಲಿ ಕಾರ್ಮಿಕರ ಜೀವನ ದುಸ್ತರವಾಗಿಯೇ ಉಳಿದಿದೆ. ಈ ದಿನ ಸುಮಾರು 35 ಜನ ಇಂತಹ ಬಂಧುಗಳಿಗೆ ಮತ್ತೊಮ್ಮೆ ದವಸ ಧಾನ್ಯದ ಚೀಲಗಳನ್ನು ನೀಡಿ ನಿಜ ಅರ್ಥದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.15 8 20 Grocery distribution 1

ಈ ಪವಿತ್ರ ಕಾರ್ಯಕ್ಕೆ ಸರ್ವ ರೀತಿಯಲ್ಲಿ ಸಹಕಾರ ನೀಡಿ ಜೊತೆಯಲ್ಲಿ ಭಾಗವಹಿಸಿದ ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ ವಿ.ಮಂಜುನಾಥ್ ರವರು ನೆರೆದ ಕೂಲಿ ಕಾರ್ಮಿಕರಿಗೆ ಸ್ವತಃ ದವಸ ಧಾನ್ಯದ ಚೀಲಗಳನ್ನು ವಿತರಿಸಿದರು. ಶ್ರೀ ಸ್ವಾಮಿ ಜಪಾನಂದಜೀ ರವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಆಪದ್ಭಾಂಧವರಂತೆ ಸದಾ ಅತೀ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಸಹಾಯ ಮಾಡುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ಇವರ ಸೇವಾಯಜ್ಞಕ್ಕೆ ತಮ್ಮ ಕೃತಜ್ಞತೆಯನ್ನು ಫಲಾನುಭವಿಗಳು ಅರ್ಪಿಸಿದರು