IMG 20231122 WA0000

ಪಾವಗಡ: ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರುಗ ಳಿಂದ ಮಕ್ಕಳ ದಿನಾಚರಣೆ….!

DISTRICT NEWS ತುಮಕೂರು

ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರುಗ ಳಿಂದ ವಿನೂತನವಾಗಿ ಮಕ್ಕಳ ದಿನಾಚರಣೆ”

ಪಾವಗಡ: ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯಲ್ಲಿ ಮಂಗಳವಾರ ದಂದು. ಶಾಲೆಯ ಎಲ್ಲಾ ಶಿಕ್ಷಕರುಗಳು ವಿನೂತನವಾಗಿ ವಿಶಿಷ್ಟವಾಗಿ ಅದ್ದೂರಿಯಾಗಿ ಆಚರಿಸಿದರು.

ವಿದ್ಯಾರ್ಥಿಗಳ ಸಹಕಾರದಿಂದ ಬಲೂನ್ ಡೆಕೋರೇಷ ನ್ ಮಾಡಿಸುವ ಮೂಲಕ ಭಾರತದ ಮೊದಲ ಪ್ರಧಾನ ಮಂತ್ರಿಗಳು ಮತ್ತು ಮಕ್ಕಳ ಪ್ರೇಮಿಯಾದ ಚಾಚಾ ನೆಹರು ಎಂದು ಪ್ರಖ್ಯಾತಿಯಾದ ಭಾರತ ರತ್ನ ಜವಾಹರ ಲಾಲ್ ನೆಹರು ರವರ 134 ನೇ ಜನ್ಮದಿನಾಚರಣೆ ಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಪ್ರಯುಕ್ತ ನೆಹರು ರವರಿಗೆ ಗೌರವವನ್ನು ಸೂಚಿಸಿಲು ಪುಷ್ಪಾರ್ಚನೆ ಯನ್ನು ಮತ್ತು ಪೂಜೆಯನ್ನು ನೆರವೇರಿ ಸುವ ಮೂಲಕ ಪ್ರಾರಂಭಿಸಲಾಯಿತು.

ಪೂರ್ಣಪ್ರಮಾಣ ದಲ್ಲಿ ಶಾಲಾ ಸಂಸತ್ತಿನ ಎಲ್ಲಾ ಪ್ರತಿನಿಧಿಗಳನ್ನು ಸಭೆಯಲ್ಲಿ ಕೂರಿಸಿ ಅವರುಗಳಿಂದಲೇ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.

ಶಿಕ್ಷಕರುಗಳಿಂದ ಪುಷ್ಪಗುಚ್ಚವನ್ನು ನೀಡಿ ಸ್ವಾಗತವನ್ನು ಕೋರಲಾಯಿತು ಮತ್ತು ನಂತರ ವಿದ್ಯಾರ್ಥಿಗಳಿಂದ ಜವಾಹರಲಾಲ್ ನೆಹರೂ ಬಗ್ಗೆ ಭಾಷಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದ ಹಿಂದಿನ ದಿನ ಶಿಕ್ಷಕರುಗಳಿಂದ ವಿದ್ಯಾರ್ಥಿಗಳಿಗೆ ಕೆಲವು ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು ಅದರಲ್ಲಿ ಪ್ರಮು ಖವಾಗಿ ಮ್ಯೂಜಿಕಲ್ ಚೇರ್, ಫೋಟೋ ಮೆಮೋರಿ ಟೆಸ್ಟ್ ಮತ್ತು ಪಾಸಿಂಗ್ ಬಾಲ್ ಎಂಬ ಆಟ ಸ್ಪರ್ಧೆಗಳನ್ನು ಆಯೋಜಿಸುವುದರ ಮೂಲಕ ಸಾರ್ಥಕವಾದ ಮಕ್ಕಳ ದಿನಾಚರಣೆಯನ್ನು ಆಚರಿಸಿ ಬಹುಮಾನಗಳನ್ನು ಕೊಡಲಾಯಿತು.


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ರೇಣುಕರಾಜ್ .ಜಿ.ಹೆಚ್ ರವರು ಮಾತನಾಡಿ ಮಕ್ಕಳ ದಿನಾಚರಣೆಯ ಮಹತ್ವ,ಹಿನ್ನೆಲೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಪ್ರಜೆಗಳಾಗಿ ರೂಪುಗೊಂಡು ತಂದೆತಾಯಿಗಳಿಗೆ ಕೀರ್ತಿಯನ್ನು ತನ್ನಿ ಎಂಬ ಕಿವಿ ಮಾತನ್ನು ಹೇಳಿದರು

ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಯಾದ ಗೋಪಿನಾಥ್ ರವರು ಕೊಡುಗೆಯಾಗಿ ನೀಡಿದ ಟೆಲಿಸ್ಕೋಪ್ ಅನ್ನು ಅವರ ತಂದೆ ತಾಯಿಗಳಿಂದ ಸ್ವೀಕರಿಸಿ ಅವರಿಗೆ ಸನ್ಮಾನವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾದ ಎಲ್ಲಾ ಶಿಕ್ಷಕರು ಗಳಿಗೆ,ಹಳೆಯ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ಕಾರ್ಯಕ್ರಮವನ್ನು ಮೋಹನ್ ಕುಮಾರ್ ರವರು ನಿರೂಪಿಸಿದರು,ಶ್ರೀಮತಿ ರಶ್ಮೀ.ಸಿ.ಎಸ್ ರವರು ಸ್ವಾಗತಿಸಿದರು, ಶ್ರೀ ಕುಮಾರ್ ಮೋಹನ್ ಕುಮಾರ್.ಜಿ.ಕೆ ರವರು ವಂದನಾರ್ಪಣೆ ಮಾಡಿದರು.
ಇಂತಹ ವಿನೂತನ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಗೋವಿಂದಪ್ಪ. ಡಿ.ಎನ್. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಗುರುರಾಜ್. ರವರು ಸಹಶಿಕ್ಷಕರಾದ ರೇಣುಕರಾಜ್. ಜಿ.ಹೆಚ್, ಹನುಮೇಶ್.ಎನ್,ಮೋಹನ್ ಕುಮಾರ್. ಜಿ.ಕೆ,ಅಭಿಷೇಕ್. ಎಂ.ವಿ,ಕುಮಾರ್,ರವರು ಶಿಕ್ಷಕಿಯರಾದ ಶ್ರೀಮತಿ ವಿಮಲಾ.ಆರ್, ರಶ್ಮೀ.ಸಿ.ಎಸ್ , ತೇಜಾವತಿ ಮತ್ತು ವಿದ್ಯಾರ್ಥಿ ಗಳು ಹಾಜರಿದ್ದರು.

ವರದಿ: ನಂದೀಶ ನಾಯಕ್