IMG 20201123 WA0004 1

ಪಾವಗಡ: ಮಗುವಿನ ಚಿಕಿತ್ಸೆಗೆ ಸಹಾಯ ಹಸ್ತ…..!

DISTRICT NEWS ತುಮಕೂರು

ಪಾವಗಡ ತಾಲೂಕು, ನಲ್ಲಿಗಾನಹಳ್ಳಿ ಗ್ರಾಮದ ಸುಮಾ ಮತ್ತು ರಾಮಾಂಜಿ ಯವರ ಮಗಳು 2 ವರ್ಷದ ಧರಣಿ ಗೆ ಅಕ್ಯೂಟ್ ಲಿಫೋಯ್ಡ್ ಲುಕೆಮಿಯಾ ರೋಗ ಹರಡಿದ್ದ ಪರಿಣಾಮ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಈ ಕುಟುಂಬ ಬಡತನದ ಜೀವನ ಸಾಗಿಸುತ್ತಿದ್ದನ್ನ ಮನಗಂಡ
ಹೆಲ್ಪ್ ಸೊಸೈಟಿ ಮಾನಮ್ ಶಶಿ ಕಿರಣ್ ಮತ್ತು ಸನ್ರೈಸ್ ಆಸ್ಪತ್ರೆ ಡಾಕ್ಟರ್ ಶ್ರೀಕಾಂತ್ ಪುವ್ವಾಡಿ ಯವರು ತಮ್ಮ ತಂದೆ ವೆಂಕಟೇಸುಲು ರವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಿರುವ ಪುಣ್ಯ ಕಾರ್ಯ ಮಾಡಿ ಪ್ರೇರಣೆಯಾಗಿದ್ದಾರೆ.

ಈ ಸಂದರ್ಭ ದಲ್ಲಿ ತಾಲ್ಲೂಕು ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ ಲೋಕೇಶ, ಖಂಜಾಚಿ ಟೈಲರ್ ನಾರಾಯಣಪ್ಪ ಇತರರು ಹಾಜರಿದ್ದರು.

ವರದಿ: ನವೀನ್ ಕಿಲಾರ್ಲಹಳ್ಳಿ