IMG 20201128 WA0010

ರಾಜ್ಯ ‌ಸರ್ಕಾರದ ಜನ ವಿರೋಧ ನೀತಿ ‘ ಕೈ’ ಪ್ರತಿಭಟನೆ…!

STATE POLATICAL

ಇಂದು ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮೌರ್ಯ ಸರ್ಕಲ್ ಬಳಿ ಇರುವ ಗಾಂಧಿ ಪ್ರತಿಮೆಯ ಮುಂದೆ ರಾಜ್ಯ ‌ಸರ್ಕಾರದ ಜನ ವಿರೋಧ ನೀತಿಯಾದ ವಿದ್ಯುತ್ ದರ ಏರಿಕೆ, ನೀರಿ ದರ ಹೆಚ್ಚಳ ಹಾಗೂ ಆಸ್ತಿ ತೆರಿಗೆ ಏರಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು

ಈ ಪ್ರತಿಭಟನೆಯಲ್ಲಿ ಕೆಪಿಸಿಸಿ‌ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ತಿನ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕರಾದ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಎಂ ನಾರಾಯಣಸ್ವಾಮಿ, ಮಾಜಿ‌ ಸಂಸದರಾದ ಉಗ್ರಪ್ಪ ಮೂರು ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ರಾಜಕುಮಾರ್, ಜಿ ಶೇಖರ್, ಜಿ. ಕೃಷ್ಣಪ್ಪ ಸೇರಿ ಹಲವರು ಭಾಗಿಯಾಗಿದ್ದರು.