Y.N ಹೊಸಕೋಟೆ ಯಲ್ಲಿ ಪ್ರಕರಣ ಬೇದಿಸಿದ ಆರಕ್ಷಕರು….
ಪಾವಗಡ: ತಾಲ್ಲೂಕಿನ ವೈ ಎನ್ ಹೊಸಕೋಟೆ ಯ ಪಟ್ಟಣದಲ್ಲೆ ವಾಸ ವಾಗಿದ್ದ ತೊಗಟವೀರ ಜನಾಂಗದ 32 ವರ್ಷದ ನಾಗರಾಜು ಮತ್ತು 50 ವರ್ಷದ ಶ್ರೀನಿವಾಸ್ ಖೋಟಾ ನೋಟು ಗಳನ್ನು ದಸ್ತಾವೇಜು ಉಪಕರಣಗಳಿಂದ ಮುದ್ರಿಸಿ ಸಾರ್ವಜನಿಕರಿಗೆ ಚಲಾವಣೆ ಮಾಡುತ್ತಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ
ಆರೋಪಿಗಳು ತಮ್ಮ ಮನೆಯ ಮೇಲಿರುವ ಕೊಠಡಿಯಲ್ಲಿ ಮುದ್ರಿಸಿ ಸಾರ್ವಜನಿಕ ರಿಗೆ ಮೋಸವಾಗಿ ಚಲಾವಣೆಗೆ ಸಜ್ಜಾಗಿರುವ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ 500 ಮುಖ ಬೆಲೆಯ 248 ಹಾಗೂ 200 ಮುಖ ಬೆಲೆಯ 10 ನೋಟು ಮತ್ತು ಖೋಟಾ ನೋಟು ಮುದ್ರಿಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣ ಪತ್ತೆ ಹಚ್ಚಲು ಶ್ರಮಿಸಿದ ಪೋಲಿಸ್ ಸಿಬ್ಬಂದಿಗೆ ತುಮಕೂರು ಪೋಲಿಸ್ ಅಧೀಕ್ಷಕರಾದ ಡಾ.ಕೆ ವಂಶಿಕೃಷ್ಣ ಅಭಿನಂದಿಸಿದ್ದಾರೆ