IMG 20210425 WA0032

ಪಾವಗಡ:ಹೆಲ್ಪ್ ಸೊಸೈಟಿಯಿಂದ ಲಘು ಉಪಾಹಾರ ವಿತರಣೆ…!

DISTRICT NEWS ತುಮಕೂರು

 

ಹೆಲ್ಪ್ ಸೊಸೈಟಿಯಿಂದ ಲಘು ಉಪಾಹಾರ ವಿತರಣೆ.

ಲಾಕ್ ಡೌನ್ ಇರುವ ಕಾರಣ ಅಂಗಡಿ, ಹೋಟೆಲ್ ಗಳು ಮುಚ್ಚಿಸುವುದರಿಂದ ಪ್ರಯಾಣಿಕರಿಗೆ ಲಘು ಉಪಾಹಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಕೋವಿಡ್ 2ನೇ ಅಲೆಯಿಂದ ರಾಜ್ಯ ಸರ್ಕಾರವು ಲಾಕ್ ಡೌನ್ ಮಾಡಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಇಂದು ನಮ್ಮ ಸಂಘದಿಂದ ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಇರುವ ಪ್ರಯಾಣಿಕರಿಗೆ ಲಘು ಉಪಾಹಾರ ವಿತರಿಸಲಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾದ ಅನಿಲ್, ಆಟೋ ಸಂಘದ ಅಧ್ಯಕ್ಷರು ಬೇಕರಿ ನಾಗರಾಜ್ ಶಶಿಕಲಾ, ರಾಕೇಶ್ ಎಚ್ ಆರ್, ಅನಿಲ್, ಅಭಿಷೇಕ್, ಮೂರ್ತಿ, ಮಂಜುನಾಥ್ ಅನಿಲ್ ಕುಮಾರ್ ಯೋಗೀಶ್, ನರೇಶ್, ಬಾಬು ಮುಂತಾದವರು ಉಪಸ್ಥಿತರಿದ್ದರು.