IMG 20200529 125137

ಶೂಟಿಂಗ್ ಗೆ ಅವಕಾಶ ನೀಡಿ ಎಂದು ಸಿಎಂ ಗೆ ಮನವಿ ಸಲ್ಲಿಸಿದ ಸಿನಿಮಾ ಮಂದಿ ..!

FILM NEWS

ಲಾಕ್ ಡೌನ್ ನಿಂದ ಸ್ಥಗಿತ ಕೊಂಡಿರುವ ಚಲಚಿತ್ರ   ಶೂಟಿಂಗ್ ಗೆ ಅವಕಾಶ ನೀಡಿ ಎಂದು ಸಿಎಂ ಗೆ ಮನವಿ ಸಲ್ಲಿಸಿದ ಸಿನಿಮಾ ಮಂದಿ

ಬೆಂಗಳೂರು ಮೇ 29:- ಕೋವಿಡ್ 19 ಲಾಕ್ ಡೌನ್ ನಿಂದ ಸಂಪೂರ್ಣ ಬಂದ್ ಆಗಿರುವ ಚಿತ್ತರಂಗದ ಚಟುವಟಿಕೆ ಪುನರ್ ಆರಂಭಿಸಲು ಅನುಮತಿ ನೀಡಬೇಕೆಂದು ಮುಖ್ಯಮಂತ್ತಿ ಬಿ ಎಸ್ ಯಡಿಯೂರಪ್ಪ ನವರನ್ನು ಬೆಂಗಳೂರೂನಲ್ಲಿ ಚಿತ್ರರಂಗದ ಪ್ರಮುಖರು ಭೇಟಿ ಮಾಡಿ ಮನವಿ ಸಲ್ಲಿಸಿದರು.IMG 20200529 125129

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನಿಲ್ ಪುರಾಣಿಕ್ ನೇತೃತ್ವದಲ್ಲಿ ದ ಚಿತ್ರರಂಗ ನಿಯೋಗವು ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್ ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಚಿತ್ರರಂಗ ಮಂದಿ ತಿಳಿಸಿದ್ದಾರೆ.