01b9b82f 7d95 4c73 a40f 35402a46fd5a

ಬೇಗೂರು: ಬಿಬಿಎಂಪಿ ಮಾಜಿ ಸದಸ್ಸ ಅಂಜನಪ್ಪ ಅವರ ಹುಟ್ಟುಹಬ್ಬ ಆಚರಣೆ

DISTRICT NEWS ಬೆಂಗಳೂರು

ಬೆಂಗಳೂರು ; ಬಿಬಿಎಂಪಿ ಮಾಜಿ ಸದಸ್ಯರಾದ ಅಂಜನಪ್ಪ ಅವರ ೫೩ ರನೇ ಹುಟ್ಟು ಹಬ್ಬವನ್ನು ಬಡವರಿಗೆ ಪುಡ್‌ ಕಿಟ್‌ ನೀಡುವ ಮೂಲಕ ವಿನೂತನವಾಗಿ ಅವರ ಅನುಪಸ್ಥಿಯಲಲ್ಲಿ ಅವರ ಸುಪುತ್ರ ಮೋಹನ್‌ ಹಾಗು ಅಭಿಮಾನಿಗಳು ಆಚರಿಸಿದರು.

ಕೊರೊನಾ ಸಂಕಷ್ಡವನ್ನು ಅರಿತ ಅಂಜನಪ್ಪನವರ ಸುಪುತ್ರ ಮೊಹನ್‌ ಬೇಗೂರು ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ ನ ಕಟ್ಟಡ ಕಾರ್ಮಿಕರನ್ನು,ಶ್ರಮಿಕ ವರ್ಗದವರನ್ನು ಗುರುತಿಸಿ ಅವರಿಗೆ ಪುಡ್‌ ಕಿಟ್‌ ಗಳನ್ನು ಇವರದೆ ಆದ ಬಿಲ್‌ ರೈಟ್‌ ಮತ್ತು ಸಂಕಲ್ಪ ತಂಡದೊಂದಿಗೆ ಸೇರಿ ಉಚಿತ ದಿನಸಿ ಕಿಟ್‌ ಮತ್ತು ಅನ್ನ ಸಂತರ್ಪಣೆಯನ್ನು ಮಾಡಿದರು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಯುವ ಕಾಂಗ್ರಸ್‌ ಕಾರ್ಯದರ್ಶಿ ದೀಪಿಕರೆಡ್ಡಿ ಭಾಗವಹಿಸಿದ್ದರು.