IMG 20210810 WA0004

RDPR:ಕಾಮಗಾರಿ ಪರಶೀಲಿಸಿದ ಸಚಿವರು…

Genaral STATE

*RDPR ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಚಿವರಾಧ ಶ್ರೀ ಕೆ ಎಸ್. ಈಶ್ವರಪ್ಪ ಸಭೆ*

ಇಂದು ಬೆಳಿಗ್ಗೆ ವಿಧಾನಸೌಧದ ಮೂರನೇ ಮಹಡಿಯ 313ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ಮಾನ್ಯ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪರವರು ನಡೆಸಿದರು.
ಇಲಾಖೆ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಕುರಿತು ಮತ್ತು ಕಾಮಗಾರಿಗಳ ಪೂರ್ಣ ಮಾಡಲು ಇರುವ ಕಾಲಾವಧಿ ಮತ್ತು ತುರ್ತು ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕೂಡ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇಲಾಖೆಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾಮಗಾರಿಯೂ ಕೂಡ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು ಮತ್ತು ಗ್ರಾಮೀಣ ಭಾಗದ ಕಟ್ಟ ಕಡೆಯ ವ್ಯಕ್ತಿಗೂ ಇಲಾಖೆಯ ಯೋಜನೆ ತಲುಪುವಂತೆಯಾಗಬೇಕೆಂದು ತಿಳಿಸಿದರು.

IMG 20210810 WA0000

RDಹಿರಿಯ ಅಧಿಕಾರಿಗಳಾದ ಶ್ರೀ ಎಲ್ ಕೆ ಅತೀಕ್, ಶ್ರೀಮತಿ ಉಮಾಮಹದೇವನ, ಶ್ರೀ ಅನಿರುದ್ಧ ಶ್ರವಣ, ಡಾ.ಆರ್.ವಿಶಾಲ್, ಶ್ರೀಮತಿ ಪ್ರಿಯಾಂಕ ಮೇರಿ ಫ್ರಾನ್ಸ್ಸಿಸ್, ಶ್ರೀ ಪ್ರಭಾಕರ್ ಹಮಿಗಿ ಮತ್ತು ವಿಶೇಷಾಧಿಕಾರಿಯಾದ ಶ್ರೀ ಜಿ.ಜಯರಾಮ್ ಮತ್ತು ಆಪ್ತ ಕಾರ್ಯದರ್ಶಿಯಾದ ಶ್ರೀ ಸಿ ಎನ್ ಮಂಜುನಾಥ್ ರವರು ಭಾಗವಹಿಸಿದ್ದರು.