423ef19d f6a6 49d1 849a 4a81a02ae7cd

ಕನ್ನಡಿಗರನ್ನು ಕನ್ನಡನಾಡಿಗೆ ಕರೆ ತನ್ನಿ: ಡಿಕೆಶಿ

STATE

ಬೆಂಗಳೂರು ಮೇ ೯: ಹೊರ ರಾಜ್ಯಗಳಲ್ಲಿ ಹಾಗೂ ರಾಜ್ಯದ ಗಡಿಯಲ್ಲಿ ಸಿಲುಕಿರುವ ಕನ್ನಡಿಗರನ್ನು ದಯವಿಟ್ಟು ವಾಪಸ್ ಕರೆ ತನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಬೇರೆ ರಾಜ್ಯಗಳಲ್ಲಿ ಸಿಲುಕಿ ಕರ್ನಾಟಕಕ್ಕೆ ವಾಪಸ್ಸಾಗಲು ತವಕಿಸುತ್ತಿರುವ ನಮ್ಮ ರಾಜ್ಯದ ಜನರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ವಿಚಾರವಾಗಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿರುವ ಕೆಪಿಸಿಸಿ ಅಧ್ಯಕ್ಷರು, ಹೇಳಿದ್ದಿಷ್ಟು… ‘ಮಾನ್ಯ ಮುಖ್ಯಮಂತ್ರಿಗಳೇ, ನಮ್ಮ ಹಾಗೂ ನಿಮ್ಮ ಅಣ್ಣ ತಮ್ಮಂದಿರು ಹೊರ ರಾಜ್ಯಗಳಲ್ಲಿ, ಗಡಿ ಭಾಗಗಳಲ್ಲಿ ಸಿಲುಕಿದ್ದಾರೆ. ಅವರು ತಮ್ಮ ತಾಯ್ನಾಡಿಗೆ ಮರಳಬೇಕು ಎಂಬ ಇಚ್ಛೆ ಹೊಂದಿದ್ದಾರೆ. ತಮ್ಮ ಮನೆಗೆ ಮರಳಲು ಲಕ್ಷಾಂತರ ಮಂದಿ ಅರ್ಜಿ ಹಾಕಿದ್ದಾರೆ. ಆದರೆ ಇವರನ್ನು ಕರೆತರಲು ಯಾವುದೇ ಅಧಿಕಾರಿ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಹೊರಗಡೆ ಇರುವ ಕನ್ನಡಿಗರನ್ನು ನಮ್ಮ ರಾಜ್ಯಕ್ಕೆ ಕರೆ ತರಲು ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ