1645495896375 IMG 20220221 WA0067

ಪಾವಗಡ:ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳಿಂದ ಪ್ರತಿಭಟನೆ.         

DISTRICT NEWS ತುಮಕೂರು


ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳಿಂದ ಪ್ರತಿಭಟನೆ.                 

ಪಾವಗಡ. ಶಿವಮೊಗ್ಗದಲ್ಲಿ ಬಜರಂಗದಳದ ಹರ್ಷನ ಕಗ್ಗೊಲೆ ಖಂಡಿಸಿ, ಇಂದು ಪಾವಗಡದಲ್ಲಿ ತಾಲೂಕು ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳಿಂದ ಶನಿಮಹಾತ್ಮ ವೃತದಿಂದ ತಾಲೂಕು ಕಚೇರಿಯವರೆಗೆ ತೆರಳಿ ಪ್ರತಿಭಟನೆ ಮಾಡಲಾಯಿತು . ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ್ ಸುಮನ್ ಮಾತನಾಡುತ್ತಾ, ಹರ್ಷ ಕೊಲೆಯ ಹಿಂದೆ SDPI ,PFI,CFI ಸಂಘಟನೆಗಳ ಕೈವಾಡವಿದೆ ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು ಹಾಗೂ, ಹರ್ಷ ರವರ ಕುಟುಂಬಕ್ಕೆ  ಸರ್ಕಾರ 50 ಲಕ್ಷ ರೂ ಪರಿಹಾರ ನೀಡಬೇಕೆಂದರು. ನಂತರ ಶ್ರೀರಾಮಸೇನೆಯ ಸಂಚಾಲಕ ರಾಮಾಂಜಿ ಮಾತನಾಡುತ್ತಾ,  ಹಿಜಾಬ್ ವಿಚಾರ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ಮಧ್ಯಂತರ ಆದೇಶದ ಮೇರೆಗೆ ಶಾಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಎಂಬ ನಿಯಮವಿದ್ದು,        ಕೆಲವು ಮುಸ್ಲಿಂ ಸಂಘಟನೆಗಳ ಕುಮ್ಮಕ್ಕಿನಿಂದ  ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.   ಹರ್ಷನ ಮರಣಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಬೇಕು, ಎಂದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸಂಚಾಲಕ ರಾಮಾಂಜಿ, ಬಜರಂಗದಳದ ತಾಲೂಕು ಸಂಚಾಲಕ ವೆಂಕಟಾಪುರದ ಸುಮನ್ , ವಿನೋದ್ ,ಶ್ರೀನಾಥ್ ,ನಾಗೇಶ್ , ಅಲಕುಂದಿರಾಜ್, ರಾಕೇಶ್, ವಿನೋದ್, ಮಂಜುನಾಥ್, ರವಿ, ಹರ್ಷ ಮುಂತಾದವರು ಹಾಜರಿದ್ದರು.

ವರದಿ:ಶ್ರೀನಿವಾಸುಲು ಎ