IMG 20220725 WA0051 1

ಪಾವಗಡ:ನಿಧಿಗಳ್ಳರ ಸೆರೆ.       

DISTRICT NEWS ತುಮಕೂರು

ನಿಧಿಗಳ್ಳರ ಸೆರೆ.                                                     ಪಾವಗಡ.. ನಿಧಿ ಆಸೆಗಾಗಿ ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಚೌಳಾಪುರದ ಆಂಜನೇಯ ಸ್ವಾಮಿ ವಿಗ್ರಹದ ಮುಂಭಾಗ ನಿಧಿಗಾಗಿ ಭೂಮಿ ಉತ್ಕನನ ಮಾಡಿರುವ ಘಟನೆ ಭಾನುವಾರ ರಾತ್ರಿ  ತಾಲೂಕಿನ ವೆಂಕಟಾಪುರ ಗ್ರಾಮದ ಚೌಳಾಪುರದ ಬಳಿ ನಡೆದಿದೆ

     

IMG 20220725 WA0050 1

ಆಂಧ್ರಪ್ರದೇಶದ  ವ್ಯಕ್ತಿಗಳಾದ ಮುರಳಿ ನಾಗರಾಜು ಚಿನ್ನ ರೆಡ್ಡಿ ವೆಂಕಟರಮಣಪ್ಪ ಸಾಯಿ ಮುರಳಿ ಬಂದಿತ ವ್ಯಕ್ತಿಗಳಾಗಿದ್ದು, ನಿಧಿ ಆಸೆಗಾಗಿ ದೇವಸ್ಥಾನದ ಬಳಿಬಂದು ಆಂಜನೇಯ ಸ್ವಾಮಿ ವಿಗ್ರಹದ ಮುಂಭಾಗ ಭೂಮಿ ಉತ್ಕನನ ಮಾಡುವ ವೇಳೆ ವೆಂಕಟಾಪುರದ ಗ್ರಾಮಸ್ಥರು ನಿಧಿಗಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.                                                    ನಿಧಿಗಾಗಿ ಒಟ್ಟು ಏಳು ಜನ ಬಂದಿದ್ದು , ಅದರಲ್ಲಿ ಇಬ್ಬರು ತಪ್ಪಿಸಿಕೊಂಡು ಹೋಗಿ, ಉಳಿದ ಐದು ಜನರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಪೋಲಿಸ್ ಮೂಲಗಳಿಂದ ತಿಳಿದು ಬಂದಿದ್ದು.                     

ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ .

ವರದಿ :ಶ್ರೀನಿವಾಸಲು ಎ