Screenshot 2022 09 26 22 35 01 532 com.google.android.apps .nbu .files

ಆನೇಕಲ್:ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ…!

DISTRICT NEWS ಬೆಂಗಳೂರು

ಆನೇಕಲ್: 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ, ಆನೇಕಲ್ ಸರ್ವೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಕೊರತೆ ಖಂಡಿಸಿ ಪ್ರತಿಭಟನೆ.
ಸಾರ್ವಜನಿಕ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಆಂಬುಲೆನ್ಸ್ ವ್ಯವಸ್ಥೆ, ಔಷಧಿಗಳು, ಆಸ್ಪತ್ರೆಯಲ್ಲಿ ನರ್ಸ್ ಕೊರತೆ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಕರ್ನಾಟಕ ರಿಪಬ್ಲಿಕನ್ ಸೇನಾ ಆನೇಕಲ್ ತಾಲೂಕು ಅಧ್ಯಕ್ಷ ಹೊಂಪಲಘಟ್ಟ ರವಿ ಹಾಗೂ ತಾಲೂಕು ಸಮಿತಿ ಕಾರ್ಯಕರ್ತರು ದಿನಾಂಕ 29-09 2022 ರಂದು ಸರ್ಕಾರಿ ಆಸ್ಪತ್ರೆ ಮುಂಭಾಗ ಜಿಗಣಿ ಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದರು.

ಕರ್ನಾಟಕ ರಿಪಬ್ಲಿಕನ್ ಸೇನಾ ತಾಲೂಕು ಅಧ್ಯಕ್ಷ ಹೊಂಪಲಘಟ್ಟ ರವಿ, ಗೌರವ ಅಧ್ಯಕ್ಷ ದೊಡ್ಡ ಹಾಗಡ್ಡೆ ಎಲ್ಲಪ್ಪ, ಉಪಾಧ್ಯಕ್ಷ ಜಾಲಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸಂಪಿಗೆ ನಾಗರಾಜ್, ಕಾರ್ಯದರ್ಶಿ ಅಣ್ಣಯ್ಯ ಬಹದ್ದೂರ್ ಪುರ, ಅಲ್ಪಸಂಖ್ಯಾತರ ಘಟಕ ಸಲಿಂ, ಕಾರ್ಮಿಕ ಘಟಕ ರಮೇಶ್, ಕಾರ್ಯದರ್ಶಿ ಶಿವರಾಜ್, ಪಟೇಲ್, ಸಂದೀಹಾ ಬೇಗಂ, ಶೇಕ್ ಅಬ್ದುಲ್ ಇದ್ದರು.

ವರದಿ: ಹರೀಶ್