WhatsApp Image 2022 10 17 at 6.19.10 PM 1

ಮಧುಗಿರಿ:ಬಾಳೆಗೊನೆ ಕದ್ದು- ಮಸಣ ಸೇರಿದ ಯುವಕ….!

DISTRICT NEWS ತುಮಕೂರು

ಮಧುಗಿರಿ: . ಸೆಪ್ಟೆಂಬರ್ 29 ರಂದು ಐ. ಡಿ. ಹಳ್ಳಿ ಗ್ರಾಮದ. ವಾಸಿ. ಪುರುಷೋತಮ್ ಪ್ರಸಾದ್ ಬಿನ್ ಬಸಪ್ಪ. ಎಂಬ ಯುವಕ. ಎರಡು. ಗೊನೆ ಬಾಳೆ. ಕಾಯಿ ಕಡಿದಿದ್ದಾನೆ ಏಂದು ಚನ್ನಾಗಿ ಹೊಡೆದ ತೋಟದ ಮಾಲೀಕ. ರಾಮಚಂದ್ರಪ್ಪ. ಬಾಲಾಜಿ. ರೆಡ್ಡಿ. ಹಾಗೂ. ಇತರರು.ತಳಿಸಿ ಕೊಡಗೇನಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಾರೆ.

WhatsApp Image 2022 10 17 at 6.18.32 PM

ಸ್ಥಳೀಯ ರಾಜಕೀಯ ಮುಖಂಡರ ಮಧ್ಯಸ್ಥಿಕೆ ಯಲ್ಲಿ ರಾಜಿ ಮಾಡಿಕೊಂಡು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರಾಜಿ ಮಾಡಿಕೊಂಡುಹೋಗಿದ್ದರಿಂದ ಯಾವದೇ ದೂರು‌ ಪೋಲಿಸ್ ಠಾಣೆಯಲ್ಲಿ‌ ದಾಖಲಾಗುವುದಿಲ್ಲ. ನಂತರ ಪುರುಷೋತಮ್ ಪ್ರಸಾದ್ ಆಸ್ಪತ್ರೆ ಗೆ ದಾಖಲಾಗುತ್ತಾನೆ.

ಸ್ಥಳೀಯ ಆಸ್ಪತ್ರೆ ಗಳ ಚಿಕಿತ್ಸೆ ಫಲಕಾರಿಯಾಗದೇ ಇಂದು ಜಿಲ್ಲಾಸ್ಪತ್ರೆಯಲ್ಲಿ ಮೃತನಾಗಿದ್ದು ನಮಗೆ ಸರ್ವಣೀಯರಿಂದ ಬಹಳ ಅನ್ಯಾಯವಾಗಿದೆ ಎಂದು ಮೃತ ವ್ಯಕ್ತಿಯ ತಂದೆ ಬಸಪ್ಪ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮಗನ ಶವ ಕಂಡು ತಮ್ಮ ಆಕ್ರಂದನ ಹೊರ ಹಾಕಿದ್ದಾರೆ.

ಕೆಲ ಸಂಘಟನೆಗಳು ಪೋಲಿಸರ ಮೇಲೆ ಮತ್ತೆ ‌ಕೆಲವರು ತೋಟದ ಮಾಲೀಕರು ಹೊಡೆದಿದ್ದರಿಂದ ಪುರುಷೋತಮ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸುತ್ತಿದ್ದಾರೆ.

ಸ್ಥಳೀಯ ಮೂಲಗಳ ಪ್ರಕಾರ ಪುರುಷೋತಮ್ ಆರೋಗ್ಯ ದ ಸಮಸ್ಯೆ ಇತ್ತು ಮತ್ತು ಹೆಚ್ಚಾಗಿ ಮಧ್ಯಪಾನ ವ್ಯಸನಿಯಾಗಿದ್ದ ಎನ್ನಲಾಗಿದೆ.

ಪೋಲೀಸರ ಮೂಲಗಳ ಪ್ರಕಾರ

ಕೊಡಿಗೆಹಳ್ಳಿ ಪೋಲೀಸ್ ಠಾಣೆಯಲ್ಲಿ ಸಂಪೂರ್ಣ ವಾಗಿ C.C ಕ್ಯಾಮರಾ ಅಳವಡಿಸಿದ್ದು ಈ ಘಟನೆ ಎಲ್ಲಾ ಚಿತ್ರಿತ ವಾಗಿದೆ. ಪೋಲಿಸ್ ಠಾಣೆಯಲ್ಲಿ ಪುರುಷೋತಮ್ ನ್ನು‌ ಯಾರು ಥಳಿಸಿಲ್ಲ ಎಂಬ ಮಾಹಿತಿ ಪೋಲೀಸ್ ಮೂಲಗಳಿಂದ ತಿಳಿದು ಬಂದಿದೆ

ಅವರೇ ಬಂದು ರಾಜಿ ಮಾಡಿಕೊಂಡು ಹೋಗಿದ್ದರು. ಆತ ಸಾವನ್ನಪ್ಪಿದ್ದು ತೋಟದ ಮಾಲಿಕ ರ ಮೇಲೆ‌ ಪ್ರಕರಣ ದಾಖಲಿಸಲಾಗುತ್ತಿದೆ ಎನ್ನಲಾಗಿದೆ.

ಈ ಪ್ರಕರಣ ದ ಬಗೆಗಿನ ಆರೋಪಗಳಿಗೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ವಷ್ಟೆ ಉತ್ತರ ಸಿಗಲಿದೆ.

ವರದಿ: ಲಕ್ಷೀಪತಿ ದೊಡ್ಡ ಯಲ್ಕೂರ್