IMG 20221125 WA0062

ಪಾವಗಡ:ಎಲ್ಲಾ ಸಮುದಾಯಗಳ ಏಳಿಕೆಗಾಗಿ ಶ್ರಮಿಸಿ…!

DISTRICT NEWS ತುಮಕೂರು

ಎಲ್ಲಾ ಸಮುದಾಯಗಳ ಏಳಿಕೆಗಾಗಿ ಶ್ರಮಿಸಿ.  ಕೆ .ಎನ್ ರಾಜಣ್ಣ                                     

ಪಾವಗಡ : ಸಮುದಾಯದಲ್ಲಿರುವ ಎಲ್ಲಾ ಜನರು ಕೇವಲ ತಮ್ಮ ತಮ್ಮ ಜನಾಂಗಕ್ಕೆ ಸೀಮಿತವಾಗದೆ, ಎಲ್ಲಾ ಸಮುದಾಯಗಳ ಅಭಿವೃದ್ಧಿಗೋಸ್ಕರ ಶ್ರಮವಹಿಸಿದ್ದಾಗ ಮಾತ್ರ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದು

 ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಕೆ. ಎನ್ ರಾಜಣ್ಣನವರು ತಿಳಿಸಿದರು.

ತಾಲ್ಲೂಕಿನ  ಸಿ.ಕೆ ಪುರ ಗ್ರಾಮದಲ್ಲಿ ಶುಕ್ರವಾರ   ವಾಲ್ಮೀಕಿ ಸಮುದಾಯದವರು ಆಯೋಜಿಸಿದ್ದ   ಶ್ರೀ ಮಹರ್ಷಿ ವಾಲ್ಮೀಕಿ ಪುಸ್ಥಳಿ ಪ್ರತಿಷ್ಠಾಪನೆ ಹಾಗೂ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.           

ನಾವು ಮಾಡುವಂತಹ ಸಮಾಜಮುಖಿ ಕೆಲಸಗಳಿಂದ ಜನರ ಮನಸ್ಸಿನಲ್ಲಿ ಯಾವಾಗಲೂ ಹಚ್ಚಳಿಯದೇ ಇರಬಹುದು ಆದರಿಂದ ನಾವು ನಿಸ್ವಾರ್ಥವಾಗಿ ಕೆಲಸಗಳನ್ನು ಮಾಡಬೇಕು ಎಂದರು.    

ನಮ್ಮ ಸಹಕಾರಿ ಸಂಘಗಳಲ್ಲಿ ಅನೇಕ ಜನಪರ ಯೋಜನೆಗಳಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಹಕಾರಿ ಸಂಘಗಳಲ್ಲಿ ಸದಸ್ಯರಾದರೆ ಸಾಕು ಅವರಿಗೆ ಯಶಸ್ವಿ ಯೋಜನೆಯ ಎಲ್ಲಾ ಸವಲತ್ತುಗಳು ದೊರೆಯುತ್ತವೆ ಎಂದು ತಿಳಿಸಿದರು

ನಂತರ ಶಾಸಕರಾದ ವೆಂಕಟರಮಣಪ್ಪ ಮಾತನಾಡಿ ವಾಲ್ಮೀಕಿ ಮಹರ್ಷಿಗಳು ಕೇವಲ ಒಂದು ಜಾತಿಗೆ,  ಸೀಮಿತರಾದವರಲ್ಲ 

ಇವರ ತತ್ವ ಸಿದ್ಧಾಂತಗಳು  ಎಲ್ಲ ಜಾತಿ  ಸಮುದಾಯಗಳಿಗೂ ಸಹ ಆದರ್ಶವಾಗಿವೆ ಎಂದರು.                                                       

  ಈ ಸಂದರ್ಭದಲ್ಲಿ  ನೌಕರರ ಘಟಕ ವಾಲ್ಮೀಕಿ ನಾಯಕ ಮಹಾಸಭಾ ಹಾಗೂ 2021ರ ಶ್ರೀ ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕೆ ಸಿ ನಾಗರಾಜು , ನಿಕಟ ಪೂರ್ವ ಬಿಬಿಎಂಪಿ ಸದಸ್ಯರು ಕೆ ನರಸಿಂಹ ನಾಯಕ, ಡಿಸಿಸಿ ಬ್ಯಾಂಕ್ ಸೀನಪ್ಪ ,  ಸಿಕೆಪುರ ಗೋಪಾಲ್ ರಾವ್, ಆನಂದ ರಾವ್, ಬಿಂದು ಮಾಧವ ರಾವ್, ಯಾರಪ್ಪ , ಕೊತೊರು ಹನುಮಂತರಾಯಪ್ಪ , ಕೊಂಡಪ್ಪ , ವಾಲ್ಮೀಕಿ ಜಾಗೃತಿ ವೇದಿಕೆಯ  ಲೋಕೇಶ್ ಪಾಳೆಗಾರ್, ಚಿತ್ತಗನಹಳ್ಳಿ ಚಂದ್ರು , ಓಂಕಾರ ನಾಯಕ್ ಹಾಗೂ ನಿಮ್ಮ ಮುಂತಾದ ಉಪಸ್ಥಿತರಿದ್ದರು.

ವರದಿ :ಶ್ರೀನಿವಾಸಲು ಎ