IMG 20200813 WA0074

ಪಾವಗಡ: ಹಾಲು ಉತ್ಪಾದಕರ ಸಂಘ ಕ್ಕೆ ದೇಣಿಗೆ….!

DISTRICT NEWS ತುಮಕೂರು

 

ಹಾಲು ಉತ್ಪಾದಕರ ಸಂಘ ಕ್ಕೆ ದೇಣಿಗೆ….!

ಪಾವಗಡ : ತಾಲ್ಲೂಕಿನ ಸಾಸಲಕುಂಟೆ ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.ಬಿಸಿ. ಟ್ರಸ್ಟ್‌ ಧರ್ಮಸ್ಥಳ ವಿಭಾಗದ ವತಿಯಿಂದ 75000 ಮೊತ್ತದ ಡಿಡಿಯನ್ನು ಹಾಲು ಉತ್ಪಾದಕರ ಸಹಕಾರ ಸಮಿತಿಗೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ
ನಂಜುಂಡಿ.ಆರ್ ರವರು ವಿತರಣೆ ಮಾಡಿದರು.
ನಂತರ ಪ್ರತಿಕ್ರಿಯಿಸಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ನಾಲ್ಕು ದಶಕಗಳಿಂದಲೂ ತಮ್ಮ ನಿಸ್ವಾರ್ಥ ಸೇವಾ ಭಾವನೆಯ ಕಾಳಜಿ ಕಾರ್ಯಗಳನ್ನ ಮಾಡಿಕೊಂಡು ಬರುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಜನರನ್ನ ಆರ್ಥಿಕ,ಶೈಕ್ಷಣಿಕ,ಸಾಮಾಜಿಕವಾಗಿ ಕಲ್ಯಾಣಗೊಳಿಸುವುದು ಸಂಸ್ಥೆಯ ಮುಖ್ಯ ಧ್ಯೆಯೆಯಾಗಿದೆ ಎಂದರು. ಈಗಾಗಲೇ ಪಾವಗಡ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಆರಂಭವಾದ ಸಂಸ್ಥೆಯ ಸೇವಾ ಅಭಿವೃದ್ಧಿ ಯೋಜನೆಗಳ ಕಾರ್ಯ ಜನಾನುಕೂಲವಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಸದಾಶಿವ,ಕಾರ್ಯದರ್ಶಿ ಎಸ್.ಎಸ್.ಕೆ ಜಯರಾಮ್,ವಲಯ ಮೇಲ್ವಿಚಾರಕ ಮೂರ್ತಿ ಸೇರಿದಂತೆ ಸಮಿತಿ ಸದಸ್ಯರಿದ್ದರು.

ವರದಿ: ನವೀನ್ ಕಿಲಾರ್ಲಹಳ್ಳಿ