IMG 20240311 WA0019

ಪಾವಗಡ : ಬಿಜೆಪಿ ನೂತನ ಸಾರಥಿ ಪದಗ್ರಹಣ….!

DISTRICT NEWS ತುಮಕೂರು

ತಾಲ್ಲೂಕು ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷರ ಆಯ್ಕೆ.

ಪಾವಗಡ: ತಾಲ್ಲೂಕಿನ ಬಿಜೆಪಿ ಘಟಕಕ್ಕೆ ಸೋಮವಾರ ನೂತನ ಅಧ್ಯಕ್ಷರಾಗಿ ರಂಗಪ್ಪ ಆಯ್ಕೆಯಾಗಿದ್ದಾರೆ.
ಪಟ್ಟಣದ ನವನಿಧಿ ಕನ್ವೆನ್ಷನ್ ಹಾಲ್ ನಲ್ಲಿ ಪಕ್ಷದ ಧ್ವಜವನ್ನು ಜಿಲ್ಲಾಧ್ಯಕ್ಷರಿಂದ ಪಡೆಯುವ ಮೂಲಕ ತಾಲ್ಲೂಕಿನ ಬಿಜೆಪಿಯ ಅಧ್ಯಕ್ಷರ ಪದವಿಯನ್ನು ಸ್ವೀಕರಿಸಿದ್ದಾರೆ

ನಂತರ ಅವರು ಮಾತಾಡಿ, ಬಿಜೆಪಿ ಪಕ್ಷದಲ್ಲಿ ನಾನು ಎನ್ನುವುದನ್ನು ಬಿಟ್ಟು ನಾವು ಎಂಬ ಭಾವನೆಯಿಂದ ಕೆಲಸ ಮಾಡಿದರೆ ಮಾತ್ರವೇ ಉತ್ತಮವಾಗಿ ಪಕ್ಷ ಸಂಘಟನೆ ಮಾಡಲು ಸಾಧ್ಯ ಎಂದರು.

ಪ್ರತಿಯೊಬ್ಬ ಕಾರ್ಯಕರ್ತನು ಪಕ್ಷಕ್ಕೆ ಬೆನ್ನೆಲುಬಾಗಿರಬೇಕು ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಪರಿಶ್ರಮ ಅತ್ಯಗತ್ಯ, ದೇಶದಲ್ಲಿ ಎಲ್ಲರೂ ನೆಮ್ಮದಿ ಬದುಕು ಮತ್ತು ಭದ್ರತೆಯಿಂದ ಜೀವನ ಸಾಗಿಸಲು ಕಾರಣವಾದ ವ್ಯಕ್ತಿ ನರೇಂದ್ರ ಮೋದಿ ಎಂದರು.

ತನ್ನನ್ನು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಎಲ್ಲಾ ನಾಯಕರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು

ಪದಗ್ರಹಣ ಸಮಾರಂಭದಲ್ಲಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಹನುಮಂತೇಗೌಡ, ನಿಕಟ ಪೂರ್ವ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್,ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ್, ಸಾಕೇಲ್ ಶಿವಕುಮಾರ್, ಕೊತ್ತೂರು ಹನುಮಂತರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಬ್ಯಾಡನೂರು ಶಿವು, ಅರುಣ್ ks,ಯ,ಜಿಲ್ಲಾ ವಕ್ತಾರರಾದ ಚೈತನ್ಯ ಪ್ರಭು,ಜಿಲ್ಲಾ ಮೋರ್ಚಾ ಪದಾಧಿಕಾರಿಗಳಾದ ವಿಜಯಲಕ್ಷ್ಮಿ,ಪುರುಷೋತ್ತಮ,ಪ್ರಸಾದ್ ಬಾಬು,
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅಲ್ಕುಂದ್ ರಾಜ್, ನವೀನ್ ಸೀತಾರಾಮ್ ಹಾಗೂ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು,

ವರದಿ : ಶ್ರೀನಿವಾಸಲು ಎ

 

ವರದಿ. ಶ್ರೀನಿವಾಸಲು. A