12dhlp4

ದೇವನಹಳ್ಳಿ: ವಿಎಸ್‍ಎಸ್‍ಎನ್ ವಾರ್ಷಿಕ ಮಹಾಸಭೆ…!

ಬೆಂಗಳೂರು DISTRICT NEWS
ಸ್ತ್ರೀ ಶಕ್ತಿ ಸಂಘದ ಮಹಿಳಾ ಸದಸ್ಯರು ಸಂಘದಲ್ಲಿ ದೊರೆಯುವ ಅನುಕೂಲ ಪಡೆದುಕೊಳ್ಳಬೇಕು : ಬೊಮ್ಮವಾರ ವಿಎಸ್‍ಎಸ್‍ಎನ್ ಅಧ್ಯಕ್ಷ ರಾಮಮೂರ್ತಿ
ದೇವನಹಳ್ಳಿ: ಪ್ರಸ್ತುತ ಸಾಲಿನಲ್ಲಿ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಮಹಿಳೆಯರು ಹೊಸ ಸಂಘವನ್ನು ಮಾಡಿಕೊಂಡು ಸಂಘದಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಬೊಮ್ಮವಾರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಮೂರ್ತಿ ತಿಳಿಸಿದರು.
ತಾಲೂಕಿನ ಬೊಮ್ಮವಾರ ವಿಎಸ್‍ಎಸ್‍ಎನ್ ಆವರಣದಲ್ಲಿ ನಡೆದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘದಲ್ಲಿ ಪ್ರಸ್ತುತ ವರ್ಷದಲ್ಲಿ 4ಕೋಟಿ 20ಲಕ್ಷ ರೂ. ಸಾಲ ಸೌಲಭ್ಯವನ್ನು ನೀಡಲಾಗಿದೆ. ಕಳೆದ ವರ್ಷದಲ್ಲಿ 17 ಲಕ್ಷ ರೂ. ನಷ್ಟದಲ್ಲಿದ್ದ ಸಂಘವು ಇದೀಗ 3ಲಕ್ಷ 28 ಸಾವಿರ ಲಾಭದಲ್ಲಿದೆ. ರೈತರು ಸಂಘದಿಂದ ದೊರೆಯುವ ಸಾಲಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ತೀಶಕ್ತಿ ಸಾಲ, ಬೆಳೆ ಸಾಲ, ಚಿನ್ನದ ಸಾಲ ನೀಡಲಾಗುತ್ತಿದ್ದು, ಸಾಲಗಾರರು ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಾಲವನ್ನು ನಿಗದಿತ ಸಮದಯಲ್ಲಿ ಮರು ಪಾವತಿಗೆ ಮುಂದಾಗಬೇಕು. ಮರುಪಾತಿ ಸರಿಯಾಗಿದ್ದರೆ, ಮತ್ತೇ ಹೆಚ್ಚಿನ ಸಾಲವನ್ನು ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಸಂಘದ ಉಪಾಧ್ಯಕ್ಷೆ ಅಂಬಿಕಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾನುಮತಿ, ವಿಎಸ್‍ಎಸ್‍ಎನ್ ನಿರ್ದೇಶಕರಾದ ಕೋಡಿ ಮಂಚೇನಹಳ್ಳಿ ನಾಗೇಶ್, ಸಾವಕನಹಳ್ಳಿ ನಾಗೇಶ್, ನವೀನ್, ನಾರಾಯಣಸ್ವಾಮಿ, ಟಿ.ರವಿ, ಸದಸ್ಯರು ಮತ್ತಿತರರು ಇದ್ದರು
ವರದಿ: ಲೋಕೇಶ್ ( ದೇವನಹಳ್ಳಿ)