IMG 20210525 WA0014

ಪಾವಗಡ: ಗುಟ್ಕಾ ಅಡ್ಡೆ ಮೇಲೆ ದಾಳಿ….!

DISTRICT NEWS ತುಮಕೂರು

ಪಾವಗಡ : ಗುಟ್ಕಾ,ಮಾರಾಟ ಮಾಡುತ್ತಿದ್ದಾರೆಂಬ ಪಕ್ಕಾ ಮಾಹಿತಿ ಮೇರೆಗೆ ಜಿಲ್ಲಾ ಎಸ್.ಪಿ ಸಾಹೇಬರ ನೇತೃತ್ವದಲ್ಲಿ ಜಿಲ್ಲಾ ಅಪರಾಧ ವಿಭಾಗದ ತಂಡ ಅರುಣ್ ಟ್ರೇಡರ್ಸ್ ಹೋಲ್ ಸೇಲ್ ಅಂಗಡಿ ಮೇಲೆ ದಾಳಿ ನಡೆಸಿ ಗುಟ್ಕಾ ಚೀಲಗಳೆರಡು ವಶಪಡೆಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ಪಾವಗಡ ಠಾಣಾ ಸಿ.ಐ. ಲಕ್ಷ್ಮಿಕಾಂತ್ ವಶಕ್ಕೆ ಒಳಪಡಿಸಿರುತ್ತಾರೆ.ಪಟ್ಟಣದ ಹೊಸಬಸ್ಟಾಂಡ್ ಪಕ್ಕದಲ್ಲಿ ಇರುವ ಅರುಣ್ ಟ್ರೇಡರ್ಸ್ ಮಾಲೀಕ ಸ್ಪೀಟ್ ಚಂದ್ರಪ್ಪ ಅಂಗಡಿ ಮೇಲೆ ಕೆಲವೇ ದಿನಗಳ ಹಿಂದೆ ಪಟ್ಟಣದ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಗುಟ್ಕಾ ಚೀಲಗಳು ವಶಪಡಿಸಿಕೊಂಡು 20.000/ ದಂಡ ವಿದಿಸಿದ್ದರೆಂದು ಆದರೂ ಗುಟ್ಕಾ ಮಾರಾಟ ಬಿಡದೆ ಎಂದಿನಂತೆ  ಮಾಡುತ್ತಿದ್ದರು ಎನ್ನಲಾಗಿದೆ.

ಮಾರಾಟ ಮಾಡುತ್ತಿರುವ ಪಕ್ಕಾ ಮಾಹಿತಿ ಮೇರೆಗೆ ಬೆಳಿಗ್ಗೆ ಜಿಲ್ಲಾ ಅಪರಾಧ ವಿಭಾಗದ ಅಧಿಕಾರಿಗಳ ತಂಡ ಅರುಣ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿ ಎರಡು ಗುಟ್ಕಾ ಚೀಲಗಳು ವಶಪಡಿಸಿಕೊಂಡಿದ್ದಾರೆ .

ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿರುತ್ತದೆ ಪ್ರಕರಣದ ಸಂಖ್ಯೆ131.ಗುಟ್ಕಾ ಅಂಗಡಿ ಮೇಲೆ ದಾಳಿ ನಡೆಸಿದ ಜಿಲ್ಲಾ ಎಸ್.ಪಿ . ಡಾ.ವಂಶಿಕೃಷ್ಣ, ಜಿಲ್ಲಾ ಅಪರಾದ ವಿಭಾಗದ ಅಧಿಕಾರಿಗಳಾದ ಶೇಷಾದ್ರಿ,ಸಿ.ಎನ್. ಪೋಲಿಸ್ ಸ್ಟೇಷನ್ ಪಿ.ಎಸ್.ಐ.ಶಮೀನಾ,

ಮಲ್ಲೇಶ್, ಶಿವಶಂಕರಪ್ಪ, ರಮೇಶ್ ರವರನ್ನು ಸಾರ್ವಜನಿಕರು ಅಭಿನಂದಿಸಿದರು.

ವರದಿ ಬುಲೆಟ್ ವೀರಸೇನಯಾದವ್