IMG 20230729 WA0023

ಪಾವಗಡ: ಭಾಗ್ಯಲಕ್ಷ್ಮಿ ರಸಗೊಬ್ಬರ ಅಂಗಡಿಗೆ ನೋಟೀಸು….!

ಭಾಗ್ಯಲಕ್ಷ್ಮಿ ರಸಗೊಬ್ಬರ ಅಂಗಡಿಗೆ ನೋಟೀಸು….! ವೈ.ಎನ್.ಹೊಸಕೋಟೆ : ಗ್ರಾಮದ ಭಾಗ್ಯಲಕ್ಷ್ಮಿ ಏಜೆನ್ಸೀಸ್ ರಸಗೊಬ್ಬರ ಅಂಗಡಿಗೆ ಜಿಲ್ಲಾ ಕೀಟನಾಶಕ ಪರಿವೀಕ್ಷಕರು ಶುಕ್ರವಾರ ನೋಟಿಸು ನೀಡಿದ್ದಾರೆ. ಗ್ರಾಮದ ಈ ರಸಗೊಬ್ಬರ ಅಂಗಡಿಯಲ್ಲಿ ಮಾಲೀಕರು ರೈತರಿಗೆ ನಿಶೇದಿತ ಕೀಟನಾಶಕವಾದ ಡಿಕ್ಲೋರವಸ್-76% ಇಸಿ (ನೋವನ್) ಯನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇಲ್ಲಿಯವರೆಗೆ ಸುಮಾರು 84  ಸಾವಿರ ರೂ ಮೌಲ್ಯದ ನಿಶೇದಿತ ಕ್ರಿಮಿನಾಶಕವನ್ನು ಮಾರಾಟ ಮಾಡಿದ್ದಾರೆ. ಅಂಗಡಿ ಪರಿಶೀಲನೆಯ ವೇಳೆ 13 ಸಾವಿರ ರೂ ಮೌಲ್ಯದ 9.5ಲೀಟರ್ ನಿಶೇದಿತ ಕ್ರಿಮಿನಾಶಕ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಗಿದೆ. ಅಂಗಡಿಯಲ್ಲಿ […]

Continue Reading
IMG 20230728 WA0015

ಪಾವಗಡ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದುದು….!

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದುದು. ಡಿ .ಡಿ .ಪಿ .ಐಎಂ .ಆರ್ ಮಂಜುನಾಥ್. ಪಾವಗಡ : ವಿದ್ಯಾರ್ಥಿಗಳನ್ನು ಸರಿಯಾದ ರೀತಿಯಲ್ಲಿ ತಿದ್ದಿ ಉತ್ತಮ ಜೀವನ ರೂಪಿಸಿಕೊಡುವುದರಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಮಂಜುನಾಥ್ ತಿಳಿಸಿದರು. ಶುಕ್ರವಾರ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಪಾವಗಡ ತಾಲೂಕು ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳ ಸಂಘ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ […]

Continue Reading
IMG 20230725 WA0020

ಮಧುಗಿರಿ : ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ..!

*ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ* ಮಧುಗಿರಿ. ಐ. ಡಿ .ಹಳ್ಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಹಕಾರ ಸಚಿವರಾದ ಕೆ ಎನ್ ರಾಜಣ್ಣನವರು ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿವಿದ್ಯಾಭ್ಯಾಸ ಮಾಡಲು ತೊಂದರೆಯಾಗದಂತೆ . ನೋಟ್ ಪುಸ್ತಕ ವಿತರಿಸಿ ಎಂದರು. ವಿದ್ಯಾರ್ಥಿಗಳು ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆದಾಗ ತಂದೆ ತಾಯಿಗಳಿಗೆ ಮತ್ತು ಗುರುಗಳಿಗೆ ಒಳ್ಳೆಯ ಹೆಸರು ಗಳಿಸಲಿ ಎಂದು ಆಶಿಸುತ್ತೇನೆ. ಈಗಾಗಲೇ ನೋಟ್ ಪುಸ್ತಕಗಳನ್ನು ಐ.ಡಿ.ಹಳ್ಳಿ ಗ್ರಾಮ ಪಂಚಾಯಿತಿಗೆ […]

Continue Reading
IMG 20230724 WA0048

ಪಾವಗಡ : ಉನ್ನತ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಒಂದೇ ಮಾರ್ಗ….!

ಉನ್ನತ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಒಂದೇ ಮಾರ್ಗ. ಶಾಸಕ ಹೆಚ್.ವಿ  ವೆಂಕಟೇಶ್ ಪಾವಗಡ :. ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಾದ ಕನ್ನಡದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿರಬೇಕು , ಮನೆಯಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು ಎಂದು. ಶಾಸಕ ಎಚ್.ವಿ ವೆಂಕಟೇಶ್ ತಿಳಿಸಿದರು.   ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಷತ್ತಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ತಮ್ಮ […]

Continue Reading
IMG 20230723 WA0002

ಮಧುಗಿರಿ: ಬ್ರಹ್ಮ ಸಮುದ್ರ ಗ್ರಾಮ ಪಂಚಾಯಿತಿ ನೂತನ ಸಾರಥಿಗಳ ಆಯ್ಕೆ…!

*ಬ್ರಹ್ಮ ಸಮುದ್ರ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ*. ಮಧುಗಿರಿ. ಐ.ಡಿ.ಹಳ್ಳಿ ಹೋಬಳಿ ಬ್ರಹ್ಮಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಎರಡನೇ ಅವಧಿಗೆ ಚುನಾವಣೆ ನಡೆಯಿತು. ಒಟ್ಟು 13 ಜನ ಸದಸ್ಯರಿದ್ದು ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಬೇರೆ ಯಾರೂ ಕೂಡ ನಾಮಪತ್ರ ಸಲ್ಲಿಸದೆ ಇರುವುದರಿಂದ ಚುನಾವಣಾ ಅಧಿಕಾರಿ ಸ್ವಾಮಿ ರವರು ಅಧ್ಯಕ್ಷ ಸ್ಥಾನಕ್ಕೆ ಬಾಲಕ್ಕ ಕೋಂ ಬೆಳೆಗೇರಪ್ಪ […]

Continue Reading
22 7 23 Jnanabodhini School 1

ಪಾವಗಡ : ಶಾಲಾ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ…!

ಪಾವಗಡದ ಹೆಸರಾಂತ ವಿದ್ಯಾಲಯವಾದ ಜ್ಞಾನಬೋಧಿನಿ ಸಂಸ್ಥೆಯಲ್ಲಿ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಶಾಲಾ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಬೋಧಿನಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ರವರು ವಹಿಸಿದ್ದರು. ಶಾಲೆಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಗ್ರಾಮಾಂತರ ವಿಭಾಗದ ಶಾಲೆಗಳಲ್ಲಿ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಮ್ಮ ಸಂಸ್ಥೆ ಇದೀಗ ಅತ್ಯಾಧುನಿಕ […]

Continue Reading
IMG 20230721 WA0047

ಮಧುಗಿರಿ: ಅಲೆಮಾರಿ ಜನಾಂಗದವರಿಗೆ ವಸತಿ ಮಂಜೂರಾತಿ ಪತ್ರಗಳ ವಿತರಣೆ….!

, ಐ.ಡಿ. ಹಳ್ಳಿಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು 2023-2024ನೇ ಸಾಲಿನ ಅಲೆಮಾರಿ ವಸತಿ ಮಂಜೂರಾತಿಪತ್ರಗಳ ವಿತರಣಾ ಕಾರ್ಯಕ್ರಮ. ಮಧುಗಿರಿ. ಐ.ಡಿ ಹ ಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರಾದ ನರಸಿಂಹ ರೆಡ್ಡಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಜಿಲಾನ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಎ.ಪಿ. ಪ್ರಕಾಶ್ ಕಾರ್ಯದರ್ಶಿ ಆದಿ ನರಸಿಂಹಲು. ಮುಖಂಡರುಗಳಾದ ನಾಗರಾಜು. ಡಿ ಇ. ಓ. ಕಮಲೇಶ್. ಬಿಲ್ ಕಲೆಕ್ಟರ್ ಸಾಯಿಪ್ರಕಾಶ್. ಸದಾಶಿವಯ್ಯ. ಹಾಜರಿದ್ದು 12 ಜನ ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು. […]

Continue Reading
IMG 20230719 WA0015

ಮಧುಗಿರಿ: ಐ ಡಿ ಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ರ ಆಯ್ಕೆ…!

ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಭಾಗ್ಯಮ್ಮ ಸದಾಶಿವಾರೆಡ್ಡಿ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮಮ್ಮ ಅಂಜನಪ್ಪ ಆಯ್ಕೆಯಾದರು.ಐಡಿಹಳ್ಳಿ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಭಾಗ್ಯಮ್ಮ -ಉಪಾಧ್ಯಕ್ಷೆಯಾಗಿ ಲಕ್ಷ್ಮಮ್ಮ ಆಯ್ಕೆಸುವರ್ಣಪ್ರಗತಿಐಡಿಹಳ್ಳಿ: ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ ಸದಾಶಿವರೆಡ್ಡಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮಮ್ಮ ಅಂಜನಪ್ಪ ಎಂಬುವವರು ಆಯ್ಕೆಯಾದರು.ಅಧ್ಯಕ್ಷ ಸ್ಥಾನಕ್ಕೆ 2 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಿಗದಿಯಂತೆ ನಡೆದ ಚುನಾವಣೆಯಲ್ಲಿ ಭಾಗ್ಯಮ್ಮ ಸದಾಶಿವರೆಡ್ಡಿಗೆ 10 ಮತಗಳು ಪಡೆದು ಜಯಬೇರಿಯಾದರೆ, ಪ್ರತಿಸ್ಪರ್ಧಿ ನಾಗರತ್ನಮ್ಮ […]

Continue Reading
IMG 20230718 WA0063

ಮಧುಗಿರಿ: ಗ್ರಾಮ ಪಂಚಾಯತಿ ‌ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ….?

ಮಧುಗಿರಿ. ಇಂದು ನಡೆದ ಐ.ಡಿಹ ಳ್ಳಿ ಹೋಬಳಿ ದೊಡ್ಡ ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳ ಸಲ್ಲಿಕೆಯಾಗಿದ್ದವು ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳ ಸಲಿಕೆಯಾಗಿ. ಯಾರೂ ಕೂಡ ನಾಮಪತ್ರ ವಾಪಸ್ ಪಡೆದೆ ಇರುವುದರಿಂದ ಚುನಾವಣಾ ಅಧಿಕಾರಿಯಾಗಿ ಬಂದಿರುವ ಸಹಾಯಕ ನಿಬಂಧಕರಾದ ಸಣ್ಣಪ್ಪಯ್ಯನವರು ಚುನಾವಣೆ ನಡೆಸಿದ. ದೊಡ್ಡಯ ಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷಯ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು. ಈ ಒಂದು ಸ್ಥಾನಕ್ಕೆ ಎರಡು ನಾಮಪತ್ರಗಳ ಸಲ್ಲಿಕೆಯಾಗಿದ್ದವು. […]

Continue Reading
IMG 20230715 WA0041

ಪಾವಗಡ : ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ…!

ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಪಾವಗಡ :  ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಟಾಸ್ಕ್ ಪೋರ್ಸ್(Task Force) ಸಮಿತಿಯ ಸಭೆ ನಡೆಸಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಉದ್ಭವ ಆಗದಂತೆ ಮತ್ತು ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಶಾಸಕ ಎಚ್ ವಿ ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.  ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸುಜಾತ, ತಾಲೂಕು ಪಂಚಾಯಿತಿ  ಕಾರ್ಯನಿರ್ವಹಣಾಧಿಕಾರಿಗಳಾದ. ಶಿವರಾಜಯ್ಯ. ಪುರಸಭೆಯ ಮುಖ್ಯ ಅಧಿಕಾರಿ ಶಂಶುದ್ದೀನ್ , ಗ್ರೇಡ್ 2 ತಹಶೀಲ್ದಾರ್ ಎನ್ ಮೂರ್ತಿ. ಪಶುಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆರೋಗ್ಯ […]

Continue Reading