Chiranjeevi YS Jagan

ಚಿತ್ರರಂಗ ಕಾರ್ಯಾಚರಣೆಗೆ,ಸಿಂಗಲ್ ವಿಂಡೋ ಅನುಮತಿ ಜಾರಿ….!

National - ಕನ್ನಡ

ಬೆಂಗಳೂರು ಮೇ 24 :- ಮೆಗಾಸ್ಟಾರ್ ಚಿರಂಜೀವಿ ನೇತೃತ್ವದ ತೆಲುಗು ಚಲನಚಿತ್ರೋದ್ಯಮದ ಪ್ರತಿನಿಧಿಗಳು ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿ ಶೂಟಿಂಗ್ ಮತ್ತು ನಿರ್ಮಾಣದ ನಂತರದ ಕೆಲಸಗಳನ್ನು ಪುನರಾರಂಭಿಸಲು ಅನುಮತಿ ಕೋರಿದ್ದಾರೆ. ಸಿಎಂ ಕೆಸಿಆರ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಟಾಲಿವುಡ್‌ನ ಸ್ಟಾರ್ ಗಳು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಅವರನ್ನು ಭೇಟಿ ಮಾಡಲು ಸಜ್ಜಾಗಿದ್ದಾರೆ.

ರಾಜ್ಯದಲ್ಲಿ ಚಲನಚಿತ್ರ ಚಿತ್ರೀಕರಣದ ಸುಗಮ ಕಾರ್ಯಾಚರಣೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗೆ ವಿಶೇಷ  ಜಿ.  ಹೊರಡಿಸಿದೆ  ಇದರ ಪ್ರಕಾರ ಚಿತ್ರೀಕರಣ ಅನುಮತಿ ಗಳಿಗೆ ನಿರ್ಮಾಪಕರು ಈಗ  ಸಿಂಗಲ್  ವಿಂಡೋದಲ್ಲಿ ಅನುಮತಿ ಪಡೆಯಬಹುದು.

ಮುಖ್ಯಮಂತ್ರಿಗೆ ಧನ್ಯವಾದ ಹೇಳಲು ಮತ್ತು ಚಿತ್ರರಂಗದ  ಪ್ರಸಕ್ತ ವಿಷಯಗಳ ಬಗ್ಗೆ ಚರ್ಚಿಸಲು, ಚಿರಂಜೀವಿ ನೇತೃತ್ವದ ನಿಯೋಗ ವೈ.ಎಸ್.ಜಗನ್ ಅವರನ್ನು ಭೇಟಿ ಮಾಡಲಿದೆ.

` ಸಿಂಗಲ್  ವಿಂಡೋ ‘ ವ್ಯವಸ್ಥೆಗೆ ಜಿ ಒ ಹೊರಡಿಸಿದ್ದಕ್ಕಾಗಿ ಮತ್ತು ಚಲನಚಿತ್ರೋದ್ಯಮದ ಸಮಸ್ಯೆಗಳನ್ನು ಚರ್ಚಿಸಲು ಲಾಕ್‌ಡೌನ್ ಆದ ಕೂಡಲೇ ಭೇಟಿಯಾಗಲು ಮುಖ್ಯಮಂತ್ರಿ  ಒಪ್ಪಿರುವುದಾಗಿ  ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳು” ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.