IMG 20220322 WA0025

ಪಾವಗಡ:ವಿದ್ಯುತ್ ತಂತಿ ತಗಲಿ ರೈತನ ಸಾವು

DISTRICT NEWS ತುಮಕೂರು

ವಿದ್ಯುತ್ ತಂತಿ ತಗಲಿ ರೈತನ ಸಾವು…..

ಪಾವಗಡ… ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಹೊಸದುರ್ಗ ಗ್ರಾಮದಲ್ಲಿ ನಡೆದಿದೆ. ಸಂತೋಷ್( 35) ಎಂಬ ರೈತ ಮೃತ ದುರ್ದೈವಿ ಯಾಗಿದ್ದಾನೆ. ರಾತ್ರಿ ಜಮೀನಿಗೆ ನೀರು ಹಾಯಿಸಿ, ಬೆಳಗ್ಗೆ ಜಮೀನಿಗೆ ಬಂದಾಗ, ರಾತ್ರಿ ಮಳೆಯಾಗಿದ್ದ ಕಾರಣ ವಿದ್ಯುತ್ ತಂತಿ ಕಟ್ ಆಗಿದ್ದು ಗೊತ್ತಿಲ್ಲದೆ ಕಟ್
ಆದ ವಿದ್ಯುತ್ ತಂತಿ ಸ್ಪರ್ಶಿಸಿದ ಕಾರಣ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

ವರದಿ:ಶ್ರೀನಿವಾಸುಲು ಎ