Newly elected MLCS Oath taking ceremony 1 scaled

ವಿಧಾನ ಪರಿಷತ್ತಿಗೆ ಆಯ್ಕೆಯಾದ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ…!

POLATICAL STATE

ವಿಧಾನ ಪರಿಷತ್ತಿಗೆ ಆಯ್ಕೆಯಾದ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಜೂನ್ 16 (ಕರ್ನಾಟಕ ವಾರ್ತೆ):

ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ನೂತನ ಶಾಸಕರಾದ     ಕೆ. ಅಬ್ದುಲ್ ಜಬ್ಬಾರ್ ಅವರು ಅಲ್ಲಾ ಹೆಸರಿನಲ್ಲಿ, ಕೇಶವ ಪ್ರಸಾದ್ ಎಸ್, ಎಂ ನಾಗರಾಜು, ಲಕ್ಷ್ಮಣ ಸವದಿ ಅವರು ಭಗವಂತನ ಹೆಸರಿನಲ್ಲಿ, ಟಿ. ನಾರಾಯಣ ಸ್ವಾಮಿ ಅವರು ಬಾಬಾ ಸಾಹೇಬ್ ಅಂಬೇಡ್ಕ್ಕರ್ ಹೆಸರಿನಲ್ಲಿ, ಶರವಣ ಟಿ.ಎ. ಅವರು ಶಿರಡಿ ಸಾಯಿಬಾಬಾ ಹಾಗೂ ವೆಂಕಟೇಶ್ವರ ಸ್ವಾಮಿ ಹೆಸರಿನಲ್ಲಿ, ಹೇಮಲತಾ ನಾಯಕ್ ಅವರು ವಾಲ್ಮೀಕಿ ಅವರ ಹೆಸರಿನಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಂದಾಯ ಸಚಿವ ಆರ್. ಅಶೋಕ್, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ವಿಧಾನಪರಿಷತ್‍ನ ಸಭಾಪತಿಗಳಾದ ರಘುನಾಥ್ ರಾವ್ ಮಲ್ಕಾಪೂರೆ, ವಿಧಾನಪರಿಷತ್ ಉಪಸಭಾಧ್ಯಕ್ಷರಾದ ಚಂದ್ರಶೇಖರ ಮಾಮನಿ, ವಿಧಾನಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಆರ್. ಮಹಾಲಕ್ಷ್ಮಿ, ಶಾಸಕರು, ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.