IMG 20230225 WA0028

ನವದೆಹಲಿ:ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಸಂಕಲ್ಪ ಯಶಸ್ವಿ…!

National - ಕನ್ನಡ

ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಸಂಕಲ್ಪ ಯಶಸ್ವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ದೆಹಲಿ: ಪರಮಪೂಜ್ಯರ ಆಶೀರ್ವಾದದೊಂದಿಗೆ ಕರ್ನಾಟಕವನ್ನು ಮುನ್ನಡೆಸುವ ಸಂಕಲ್ಪದಿಂದ ಮುನ್ನೆಡೆಯುತ್ತಿದ್ದೇನೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಸಂಕಲ್ಪ ಯಶಸ್ವಿಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ದೆಹಲಿ ಕರ್ನಾಟಕ ಸಂಘದ 75 ವರ್ಷದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಟಾಲ್ಕಟೋರ ಸಭಾಂಗಣದಲ್ಲಿ ಆಯೋಜಿಸಿದ ಬಾರಿಸು ಕನ್ನಡ ಡಿಂಡಿಮ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನನಗೆ ದೂರ ದಿಲ್ಲಿಯಲ್ಲಿ ಕನ್ನಡದ ಕಂಪು ಬಹಳ ಅದ್ಭುತವಾಗಿ ಕಾಣಿಸುತ್ತಿದೆ. ನಿಮ್ಮನ್ನೆಲ್ಲ ನೋಡಿ ಬಹಳ ಸಂತಸ ಆಗಿದೆ. ದೆಹಲಿ ಕನ್ನಡ ಸಂಘ ಸ್ಥಾಪನೆಯಾಗಿ 75 ನೇ ವರ್ಷದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದು, ಈ ವೇದಿಕೆ ಮೂಲಕ ಏಳು ಕೋಟಿ ಕನ್ನಡಿಗರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕನ್ನಡ ನಾಡಿನಲ್ಲಿ ಹುಟ್ಟುವುದೇ ಸೌಭಾಗ್ಯ. ಕನ್ನಡ ನಾಡಿನಲ್ಲಿ ಬೆಳೆಯುವುದೇ ನಮ್ಮ ಭಾಗ್ಯ. ಅಂತಹ ಸೌಭಾಗ್ಯ, ಭಾಗ್ಯ ಪಡೆದಿರುವ ನಾವೆಲ್ಲರೂ ಪೂರ್ವ ಜನ್ಮದ ಪುಣ್ಯವಂತರು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಕನ್ನಡ ನಾಡು ನೈಸರ್ಗಿಕ, ಸಾಂಸ್ಕೃತಿಕ, ಕಾಯಕ, ಅಧ್ಯಾತ್ಮಿಕ, ನೀತಿ ಶ್ರೀಮಂತಿಕೆ ಹಾಗೂ ಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನದಿಂದ ಕೂಡಿರುವುದು ನಮ್ಮ ಕನ್ನಡ ನಾಡು. ಕನ್ಮಡ ನಾಡಿನಲ್ಲಿ ಹುಟ್ಟಿರುವಂತಹ ದಾರ್ಶನಿಕರು‌ ವಿಶ್ವಮಾನ್ಯರು. ನವ ಕನ್ನಡ ನಾಡು ನಿರ್ಮಾಣಕ್ಕೆ ಶ್ರಮಿಸಿದ ಮೈಸೂರು ಮಹಾರಾಜರಿಂದ ಹಿಡಿದು, ವಿಶ್ವೇಶ್ವರಯ್ಯ ಅವರನ್ನೊಳಗೊಂಡ ಎಲ್ಲ ಕಾಯಕ ಯೋಗಿ ಇಂಜಿನಿಯರ್ ಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

IMG 20230225 WA0023

ನಿಸರ್ಗ ನಮಗೆ ಬಹಳ ಶ್ರೀಮಂತಿಕೆಯನ್ನು ಕೊಟ್ಟಿದೆ. ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳು ಇವತ್ತು ಕನ್ನಡ ನಾಡನ್ನು ಕೃಷಿಯಲ್ಲಿ, ಸಂಸ್ಕೃತಿಯಲ್ಲಿ ಶ್ರೀಮಂತ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಐದು ಟ್ರಿಲಿಯನ್ ಡಾಲರ್ ಕನಸಿಗೆ, ಕರ್ನಾಟಕ ಬರುವ ವರ್ಷದಲ್ಲಿ ಒಂದು ಟ್ರಿಲಿಯನ್ ಡಾಲರ್ ನಮ್ಮದು ಖಂಡಿತವಾಗಿಯೂ ಒಂದು ಭಾಗ ಇರುತ್ತದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಕನ್ನಡದ ಸಮಗ್ರತೆ, ಅಖಂಡತೆ ಬಗ್ಗೆ ನಿನ್ನೆಯೇ ಒಂದು ಕಾನೂನು ಪಾಸ್ ಮಾಡಿದ್ದೇವೆ. ಅದೊಂದು ಬಹಳ ಒಳ್ಳೆಯ ಘಳಿಗೆ. ‌ಕೆ.ಸಿ ರೆಡ್ಡಿಯವರ ಪ್ರತಿಮೆ ಅನಾವರಣ ಕೂಡ ಮಾಡಿದ್ದೇವೆ. ಕನ್ನಡದ ಈ ಸಂಘದ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ ಮೊದಲ‌ನೇ ಮುಖ್ಯಮಂತ್ರಿ ಎಂದು ಕೆ.ಸಿ ರೆಡ್ಡಿಯವರನ್ನು ನೆನಪಿಸಿಕೊಂಡ ಸಿಎಂ ಬೊಮ್ಮಾಯಿ‌ ಅವರು, ಕಳೆದ ಜನವರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದು ಹೇಳಿ, ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮುಂದಿನ ವರ್ಷ ದಾವಣಗೆರೆಯಲ್ಲಿ ಆಗುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.

IMG 20230225 WA0024

ಪರಮಪೂಜ್ಯರ ಆಶೀರ್ವಾದದೊಂದಿಗೆ ಕರ್ನಾಟಕವನ್ನು ಮುನ್ನಡೆಸುವ ಸಂಕಲ್ಪದಿಂದ ಮುನ್ನೆಡೆಯುತ್ತಿದ್ದೇನೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಸಂಕಲ್ಪ ಯಶಸ್ವಿಯಾಗುತ್ತದೆ ಎಂದು ಹೇಳಿ, ಸಿಎಂ ಬೊಮ್ಮಾಯಿ‌ ಅವರು ದಿಲ್ಲಿ ಕನ್ನಡದ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಡಾ. ನಿರ್ಮಲಾನಂದ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿಗಳು ಸುತ್ತೂರು ಮಠ, ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿ, ಡಾ. ವಿರೇಂದ್ರ ಹೆಗೆಡೆ, ನಂಜಾವದೂತ ಮಹಾಸ್ವಾಮೀಜಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯದ ಸಚಿವರಾದ ಸುನಿಲ್ ಕುಮಾರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.