IMG 20240910 WA0004

ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಬಗ್ಗೆ ಜಾಗೃತಿ ಮೂಡಿಸಲು ವಾಕಥಾನ್ ಆಯೋಜನೆ….!

BUSINESS

ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಬಗ್ಗೆ ಜಾಗೃತಿ ಮೂಡಿಸಲು ಡಾ.ಅಗರ್ವಾಲ್ ಐ ಹಾಸ್ಪಿಟಲ್ ಒಂದು ವಾಕಥಾನ್ ಅನ್ನು ಆಯೋಜಿಸಿತು

ಬೆಂಗಳೂರು, ಸೆಪ್ಟೆಂಬರ್ 10, 2024: ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಆಚರಣೆಯ ಸಂದರ್ಭದಲ್ಲಿ, ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್ ಇಂದು ಜೀವನವನ್ನು ಬದಲಾಯಿಸಬಹುದಾದ ನೇತ್ರದಾನದ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ವಾಕಥಾನ್ ಅನ್ನು ಆಯೋಜಿಸಿತ್ತು. ರಾಜಾಜಿನಗರದ ಅರಬಿಂದೋ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಸಮುದಾಯವನ್ನು ತಮ್ಮ ಕಣ್ಣುಗಳನ್ನು ದಾನ ಮಾಡಲು ಮತ್ತು ಅಗತ್ಯವಿರುವವರಿಗೆ ಅಮೂಲ್ಯವಾದ ದೃಷ್ಟಿಯ ಉಡುಗೊರೆಯನ್ನು ಒದಗಿಸಲು ಪ್ರೋತ್ಸಾಹಿಸಿದರು.

ಈ ಕಾರ್ಯಕ್ರಮವು ತಪ್ಪು ಕಲ್ಪನೆಗಳನ್ನು ತೊಡೆದುಹಾಕಲು ಮತ್ತು ವ್ಯಕ್ತಿಗಳು ತಮ್ಮ ಕಣ್ಣುಗಳನ್ನು ದಾನ ಮಾಡುವುದನ್ನು ತಡೆಯುವ ಅಡೆತಡೆಗಳನ್ನು ಪರಿಹರಿಸಲು ಪ್ರಯತ್ನಿಸಿತು. ವಿದ್ಯಾರ್ಥಿಗಳು ನೇತ್ರದಾನವನ್ನು ಉತ್ತೇಜಿಸುವ ಈ ಉದಾತ್ತ ಉದ್ದೇಶಕ್ಕಾಗಿ ಅವರ ಬದ್ಧತೆಯ ಸಂಕೇತವಾದ ಶಕ್ತಿಯುತ ಸಂದೇಶಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದರು. ವಾಕಥಾನ್‍ಗೆ ಬೆಂಗಳೂರು ಕೇಂದ್ರ ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಆರ್.ಸಪ್ತಗಿರಿಗೌಡ, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಜಂಟಿ ನಿರ್ದೇಶಕಿಯಾದ (ವೈದ್ಯಕೀಯ) ಡಾ.ರಜನಿ ಎಂ.ರಜನಿ ಚಾಲನೆ ನೀಡಿದರು.

ಎ.ಆರ್. ಸಪ್ತಗಿರಿ ಗೌಡ ಅವರು ಈ ಉಪಕ್ರಮದ ಮಹತ್ವವನ್ನು ಒತ್ತಿ ಹೇಳುತ್ತ, “ಡಾ.ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಈ ಉದಾತ್ತ ಪ್ರಯತ್ನದ ಭಾಗವಾಗಿರುವುದು ನಿಜವಾಗಿಯೂ ಗೌರವವಾಗಿದೆ. ನೇತ್ರದಾನವು ದೃಷ್ಟಿಯ ಅಮೂಲ್ಯ ಉಡುಗೊರೆಯನ್ನು ನೀಡುವ ಮೂಲಕ ಜೀವನವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿರುವ ಒಂದು ಉದಾತ್ತವಾದ ಕ್ರಿಯೆಯಾಗಿದೆ. ವಿಶೇಷವಾಗಿ ಅರಬಿಂದೋ ಶಾಲೆಯ ಸಹಯೋಗದೊಂದಿಗೆ ನಡೆದ ಆಸ್ಪತ್ರೆಯ ಪ್ರಯತ್ನಗಳು, ಉತ್ತಮ ದೃಷ್ಟಿಯ ಆರೋಗ್ಯವನ್ನು ಹೊಂದಿರುವ ಸಮಾಜವನ್ನು ನಿರ್ಮಿಸುವ ಹಂಚಿಕೊಂಡ ಜವಾಬ್ದಾರಿಯನ್ನು ಪ್ರದರ್ಶಿಸುತ್ತದೆ.

ಜಂಟಿ ನಿರ್ದೇಶಕಿಯಾದ (ವೈದ್ಯಕೀಯ) ಡಾ.ರಜನಿ ಎಂ., ಹೇಳಿದರು”ಜಾಗೃತಿ ಮೂಡಿಸುವುದು ಮಿಥ್ಯೆಗಳನ್ನು ತೊಡೆದುಹಾಕುವುದು ಮತ್ತು ಹೆಚ್ಚಿನ ಜನರು ತಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರೋತ್ಸಾಹಿಸುವ ಮೊದಲ ಹೆಜ್ಜೆಯಾಗಿದೆ. ಶಿಕ್ಷಣ ಮತ್ತು ಸಂದೇಶಗಳ ಮೂಲಕ, ನಾವು ಅಂತರವನ್ನು ಕಡಿಮೆ ಮಾಡಬಹುದು ಮತ್ತು ಅಕ್ಷಿಪಟಲದ ಕಸಿಯ ಅಗತ್ಯವಿರುವವರಿಗೆ ಈ ಜೀವನವನ್ನು ಬದಲಾಯಿಸುವ ಚಿಕಿತ್ಸೆ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಈ ಉದ್ದೇಶವನ್ನು ಬೆಂಬಲಿಸಲು ಮತ್ತು ದೃಷ್ಟಿಯನ್ನು ಪುನಃಸ್ಥಾಪಿಸುವ ಈ ಕಾರ್ಯಾಚರಣೆಯ ಭಾಗವಾಗುವಂತೆ ನಾನು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇನೆ.
ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ದೌರ್ಬಲ್ಯ ಸಮೀಕ್ಷೆ 2015-2019ರ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟ ಭಾರತದ ಜನಸಂಖ್ಯೆಯ 1.99% ಜನರು ಕುರುಡುತನದಿಂದ ಬಳಲುತ್ತಿದ್ದು, ಇದು ನೇತ್ರದಾನವನ್ನು ಬಹಳ ಮುಖ್ಯವಾದ ಸಾರ್ವಜನಿಕ ಆರೋಗ್ಯ ಉಪಕ್ರಮವಾಗಿಸುತ್ತದೆ. 1975ರಲ್ಲಿ ಸ್ಥಾಪನೆಯಾದ ಡಾ.ಅಗರ್ವಾಲ್ಸ್ ಐ ಬ್ಯಾಂಕ್ 30,000ಕ್ಕೂ ಹೆಚ್ಚು ಅಕ್ಷಿಪಟಲಗಳನ್ನು ಕಸಿ ಮಾಡಿದೆ ಮತ್ತು ಜಾಗೃತಿ ಅಭಿಯಾನಗಳು, ಶಿಕ್ಷಣ ಮತ್ತು ಆನ್‍ಲೈನ್ ನೋಂದಣಿಯ ಮೂಲಕ ನೇತ್ರದಾನವನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದೆ.
ಬೆಂಗಳೂರಿನ ಡಾ.ಅಗರ್‍ವಾಲ್ ಐ ಹಾಸ್ಪಿಟಲ್‍ನ ರೆಟಿನಾ ಸರ್ವೀಸಸ್‍ನ ಪ್ರಾದೇಶಿಕ ಮುಖ್ಯಸ್ಥರಾದ ಡಾ.ರಾಕೇಶ್ ಎಸ್ ಮಾತನಾಡಿ ಹೇಳಿದರು, “ನೇತ್ರದಾನಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಜ್ಞಾನ ಮತ್ತು ಶಿಕ್ಷಣ ಪ್ರಮುಖವಾಗಿದೆ. ಈ ಅಡೆತಡೆಗಳಲ್ಲಿ ಅಕ್ಷಿಪಟಲಗಳ ಬಳಕೆಯಲ್ಲಿ ಪಾರದರ್ಶಕತೆಯ ಬಗೆಗಿನ ಆತಂಕ, ಕುಟುಂಬದ ಒಪ್ಪಿಗೆಯ ಕೊರತೆ, ದೇಹವನ್ನು ಹಾಗೇ ಉಳಿಸಿಕೊಳ್ಳುವ ಬಗೆಗಿನ ಸಾಂಸ್ಕೃತಿಕ ನಂಬಿಕೆಗಳು ಮತ್ತು ದಾನದ ಪ್ರಕ್ರಿಯೆಯಲ್ಲಿ ದೇಹವನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆನ್ನುವ ಬಗೆಗಿನ ಭಯಗಳು ಸೇರಿವೆ. ಪ್ರತಿ ದಾನಿಯೊಂದಿಗೆ, ನಾವು ನಾಲ್ಕು ವ್ಯಕ್ತಿಗಳ ಜೀವನವನ್ನು ಸುಧಾರಿಸಬಹುದು, ಏಕೆಂದರೆ ಪ್ರತಿ ಅಕ್ಷಿಪಟಲವೂ ಇಬ್ಬರ ದೃಷ್ಟಿಯನ್ನು ಪುನಃಸ್ಥಾಪಿಸಬಹುದು. ಪ್ರತಿಯೊಬ್ಬರೂ ಈ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ನಾವು ಪ್ರೋತ್ಸಾಹಿಸುತ್ತೇವೆ ಮತ್ತು ಅಗತ್ಯವಿರುವವರಿಗೆ ಪ್ರಯೋಜನವಾಗುವಂತೆ ತಮ್ಮ ಕಣ್ಣುಗಳನ್ನು ದಾನ ಮಾಡುತ್ತೇವೆ.
ಡಾ.ಅಗರ್ವಾಲ್ ಐ ಹಾಸ್ಪಿಟಲ್‍ನ ಡಾ.ಅಮರ್ ಅಗರ್ವಾಲ್ ಅವರ ಮುಂದಾಳತ್ವದಲ್ಲಿ ಪ್ರಿ ಡೆಸ್ಸೆಮೆಟ್ ಎಂಡೋಥೆಲಿಯಲ್ ಕೆರಾಟೊಪ್ಲಾಸ್ಟಿಯಂಥ (ಪಿಡಿಇಕೆ) ಸುಧಾರಿತ ಕಾರ್ನಿಯಲ್ ಕಸಿ ತಂತ್ರಗಳನ್ನು ಪರಿಚಯಿಸುತ್ತಿದೆ, ಇದು ಕಸಿಯ ನಂತರ ರೋಗಿಗಳ ದೃಷ್ಟಿಯನ್ನು ಸುಧಾರಿಸುವಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದೆ.

ವಾಕಥಾನ್ ನಂತರ, ಕಣ್ಣಿನ ಆರೋಗ್ಯವನ್ನು ಮತ್ತಷ್ಟು ಉತ್ತೇಜಿಸಲು ಮತ್ತು ನೇತ್ರದಾನದ ಪ್ರತಿಜ್ಞೆಗಳನ್ನು ಹೆಚ್ಚಿಸಲು ಆಸ್ಪತ್ರೆಯು ಜಾಗೃತಿ ಕಾರ್ಯಕ್ರಮಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಕುರುಡುತನ ತಪಾಸಣೆಗಳನ್ನು ಯೋಜಿಸಿದೆ.
ಒಟ್ಟಾಗಿ, ನಾವು ವ್ಯತ್ಯಾಸವನ್ನು ಮಾಡಬಹುದು. “ನಾವು ಎನ್ನುವುದು ನನು ಎನ್ನುವುದರ ಮುಂದೆ ಬಂದಾಗ, ಮಾನವೀಯತೆ ಮುಂದುವರಿಯುತ್ತದೆ.” ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್ ಪ್ರತಿಯೊಬ್ಬರೂ ತಮ್ಮ ಕಣ್ಣುಗಳನ್ನು ದಾನ ಮಾಡಿ ಅಗತ್ಯವಿರುವವರಿಗೆ ದೃಷ್ಟಿಯನ್ನು ಮರಳಿ ನೀಡಲು ಸಹಾಯ ಮಾಡಲು ಒತ್ತಾಯಿಸುತ್ತದೆ.

 

Leave a Reply

Your email address will not be published. Required fields are marked *