IMG 20201213 WA0005

ಪಾವಗಡ: ತುಮಕುಂಟೆ ಕ್ರಾಸ್ ನ, ಅಪಘಾತ ದ ಗಾಯಾಳುಗಳಿಗೆ‌ ಪರಿಹಾರ….!

DISTRICT NEWS ತುಮಕೂರು

ಪಾವಗಡ: –  ಇತ್ತೀಚಿಗೆ ಪಾವಗಡ ತಾಲ್ಲೂಕಿನ ಅರಸೀಕೆರೆ ಹಾಗೂ ತುಮಕುಂಟೆ ಕ್ರಾಸ್ ನ ನಡುವೆ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡು

ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕುಂಟೆ ಗ್ರಾಮದವರಿಗೆ ಹೆಲ್ಪ್ ಸೊಸೈಟಿ ಕಡೆಯಿಂದ ಇಂದು ಪೋಲಿಸರ ಸಮ್ಮುಖದಲ್ಲಿ ರೋಗಿಗಳ ಸಂಬಂಧಿಕರಾದ ತಿಮ್ಮರಾಜು & ಮಂಜುನಾಥ್ ರವರಿಗೆ 35200 ರೂಪಾಯಿಗಳ ಆರ್ಥಿಕ ನೆರವು ನೀಡಿ, ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿ ಕಿರಣ್ ರವರು ಅಪಘಾತಕ್ಕೀಡಾದ ಬಡ ಜನರ ಆಸರೆಗೆ ಪಾವಗಡದ ಮಂದಿ ನಿಂತು ಮಾನವೀಯತೆಯನ್ನು ಮೆರೆದಿದ್ದಾರೆ.
ಸಹಾಯ ಮಾಡಿದ ಪ್ರತಿ ಒಬ್ಬರಿಗೂ ಹೆಲ್ಪ್ ಸೊಸೈಟಿ & ಪಾವಗಡ ತಾಲ್ಲೂಕಿನ ಜನತೆಯ ಪರವಾಗಿ ಧನ್ಯವಾದ ತಿಳಿಸಿದರು.

ಪೋಲಿಸ್ ಸಬ್ ಇನ್ಸ್ಪೆಕ್ಟರ್ ನಾಗರಾಜ್ ರವರು ಮಾತನಾಡುತ್ತ ಪಾವಗಡದ ತುಮಕುಂಟೆ ಗ್ರಾಮದವರಿಗೆ ಅಪಘಾತವಾಗಿರುವ ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕಿನ ಜನ ಸಹಾಯ ಮಾಡಿರುವುದು ನೋಡಿದರೆ ನನಗೆ ಹೆಮ್ಮೆ ಅನಿಸುತ್ತದೆ, ಇಂತಹ ಸ್ಥಳದಲ್ಲಿ ನನ್ನ ವೃತ್ತಿಕಾರ್ಯ ಆತ್ಮತೃಪ್ತಿ ತಂದಿದೆ ಎಂದು ತಿಳಿಸಿದರು.

ಈ ಸಹಾಯಕ್ಕೆ ಕೃಷಿ ಇಲಾಖೆಯ ಸಿಬ್ಬಂದಿ ವರ್ಗದವರು ಸುಮಾರು 10200 ರೂ, PWD ಸಹಾಯ ಅಭಿಯಂತರರಾದ ಅನಿಲ್ ಕುಮಾರ್ 5000, ಪೋಲಿಸ್ ಉಪ ನಿರೀಕ್ಷಕರಾದ ನಾಗರಾಜ್ ರವರು 5000, ಹೆಲ್ಪ್ ಸೊಸೈಟಿ ತಂಡದಿಂದ 10000, ಅನ್ನದಾನಪುರದ ರವಿ ರವರು 5000 ರೂ ಗಳನ್ನು ನೀಡಿ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಸನ್ ರೈಸ್ ಹಾಸ್ಪಿಟಲ್ ಡಾಕ್ಟರ್ ಶ್ರೀಕಾಂತ್ ಯೂತ್ ಕಾಂಗ್ರೆಸ್ ಅಧ್ಯಕ್ಷರು ಅನಿಲ್ ಕುಮಾರ್ ಬೀದಿ ಬದಿ ಮಹಿಳಾ ವ್ಯಾಪಾರಸ್ಥರ ಅಧ್ಯಕ್ಷರು ಶಶಿಕಲಾ ಮಂಜುನಾಥ್ ಗೌತಮ್ ವೀರ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಮತ್ತು ಪೊಲೀಸ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

*ವರದಿ: ನವೀನ್ ಕಿಲಾರ್ಲಹಳ್ಳಿ*