T202004023446

ನಾಳೆ ಎಲ್ಲಾ ರಾಜ್ಯ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಮಾತು…!

ನವದೆಹಲಿ ಮೇ ೧೦ :-  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾಳೆ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಐದನೇ ಬಾರಿಗೆ ವಿಡಿಯೋ ಕಾನ್ಫರೆನ್ಸ ಮೂಲಕ ಸಭೆ ನಡೆಸಲಿದ್ದಾರೆ. ದೇಶಾದ್ಯಾಂತ ಜಾರಿಯಲ್ಲಿರು  ೩ ನೇ ಹಂತದ ಲಾಕ್‌ ಡೌನ್‌ ಮೇ ೧೭ ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಸೋಮವಾರ ಮಧ್ಯಾಹ್ನ ೩ ಗಂಟೆಗೆ ನಡೆಯುವ ಸಭೆ ಹೆಚ್ಚು ಮಹತ್ವ ಪಡೆದಿದೆ. ದೇಶದಲ್ಲಿ ಕೊರೋನಾ ಕೇಸ್‌ ಗಳು ಹೆಚ್ಚಾಗುತ್ತಿರುವುದು,ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ಕೊರೋನಾ ನಿಯಂತ್ರಣಕ್ಕಾಗಿ ೪ ನೇ ಬಾರಿಗೆ […]

Continue Reading
download 9

ಭಾರತೀಯ ವಾಯುಸೇನೆಯ ಮಿಗ್ 29 ವಿಮಾನ ಅಪಘಾತ

ನವದೆಹಲಿ ಮೇ೮ :- ಪಂಜಾಬ್‌ ನ ಹೋಶಿಯಾರ್‌ ಜಿಲ್ಲೆಯ ಸಮೀಪವಿರುವ ವಾಯುಪಡೆಯ ಮಿಗ್-‌೨೯ ಯದ್ಧ ವಿಮಾನ ಅಪಘಾತಕ್ಕೀಡಾಗಿದೆ.  ಯುದ್ದ ವಿಮಾನ ಪತನಕ್ಕೂ ಮುನ್ನ ಪೈಲಟ್‌ ಪ್ಯಾರಾಚೂಟ್‌ ಮೂಲಕ ಪಾರಾಗಿದ್ದಾರೆ ನಿರ್ಜನ ಪ್ರದೇಶದಲ್ಲಿ ವಿಮಾನಪತನವಾಗಿದ್ದರಿಂದ ಸಾವು-ನೋವು ಸಂಭವಿಸಿಲ್ಲ ವಾಯುಸೇನೆಯ ಉನ್ನತಧಿಕಾರಿಗಳು ಅಪಘಾತ ಸ್ಥಳಕ್ಕೆ ಆಗಮಿಸಿ , ಅಪಘಾತದ ಮಾಹಿತಿ ಪಡೆದಿದ್ದಾರೆ. ವಿಮಾನ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ, ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರಬಹುದು ಎನ್ನಲಾಗಿದೆ.

Continue Reading
38245dcd 50a5 43fb 812f 61fa2cad8931

ಗೂಡ್ಸ್ ರೈಲಿಗೆ ಸಿಕ್ಕಿ 16 ಜನ ಕಾರ್ಮಿಕರ ಸಾವು

ಔರಂಗಾಬಾದ್‌  ಮೇ ೮:-   ರೈಲ್ವೇ ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಇಂದು ಮುಂಜಾನೆ  ಗೂಡ್ಸ್‌ ರೈಲು ಹರಿದು 16 ಜನ ಮೃತ ಮೃತ ಪಟ್ಟಿದ್ದು 4 ಜನ ಗಂಭೀರವಾಗಿ ಗಾಯಗೊಂಡಿರು ಘಟನೆ. ಮಹಾರಾಷ್ಟ್ರಾದ ಔರಂಗಾಬಾದ್‌ ನ ಜಲ್ನಾ ರೈಲ್ವೆ ಟ್ರಾಕ್‌ ಬಳಿ ಈ ಘಟನೆ ಸಂಭವಿಸಿದೆ.ಗಾಯಗೊಂಡವರನ್ನು ಔರಂಗಾಬಾದ್‌ ನ ಸಿವಿಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಬೆಳಗಿನಜಾವ 5 ಗಂಟೆ ಸುಮಾರಿಗೆ  ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ರೈಲ್ವೆ ಟ್ರಾಕ್‌ ಮೇಲೆ  ಮಲಗಿದ್ದ […]

Continue Reading
sadananda

ದೆಹಲಿಯಿಂದ ಕರ್ನಾಟಕಕ್ಕೆ ವಿಶೇಷ ರೈಲು..!

ನವದೆಹಲಿ, ಮೇ ೭ – ಲಾಕ್ಡೌನಿಂದಾಗಿ ಉತ್ತರ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರು ತಮ್ಮ ರಾಜ್ಯಕ್ಕೆ ಮರಳುವುದಕ್ಕಾಗಿ ವಿಶೇಷ ರೈಲೊಂದನ್ನು ಓಡಿಸಲು ರೇಲ್ವೆ ಇಲಾಖೆಯು ಒಪ್ಪಿಗೆ ನೀಡಿದೆ. ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಈ ದಿಸೆಯಲ್ಲಿ ರೇಲ್ವೆ ಸಚಿವ ಶ್ರೀ ಪಿಯುಶ್‌ ಗೋಯಲ್‌ ಅವರೊಂದಿಗೆ ತಾವು ನಡೆಸಿದ ಮಾತುಕತೆ ಯಶಸ್ವಿಯಾಗಿದೆ, ಒಂದೆರಡು ದಿನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚರಿಸಲಿದೆ ಎಂದಿದ್ದಾರೆ. […]

Continue Reading
62bb6b96 de5b 4bb2 9daa 9bcb72fde2a4 2

ವಿಶಾಖ ವಾಯು ದುರಂತ: ೧೧ ಜನರ ಸಾವು, ನೂರಾರು ಜನರು ಅಸ್ವಸ್ಥ.

ವಿಶಾಖಪಟ್ಟಣಂ ಮೇ ೭:  ಆಂಧ್ರ ಪ್ರದೇಶದ ವಿಶಾಖಪಟ್ಟಣ  ಹೊರವಲಯದ ಆರ್‌.ಆರ್.ವೆಂಕಟಾಪುರಂನಲ್ಲಿರುವ ಎಲ್‌ಜಿ ಪಾಲಿಮರ್ಸ್ ನ ಕಂಪನಿಯಲ್ಲಿ ಅನಿಲ ಸೋರಿಕೆಯಲ್ಲಿ ೧೧ ಜನರು ಮೃತಪಟ್ಟಿದ್ದಾರೆ ೩೧೬  ಜನರು ಆನಾರೋಗ್ಯಕ್ಕೆ ಒಳಗಾಗಿ  ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇನ್ನು ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ.  ಎಲ್‌ ಜಿ ಪಾಲಿಮರ್ಸ ನಲ್ಲಿ  ದೊಡ್ಡ ಬೆಂಕಿ ಕಾಣಿಸಿಕೊಂಡು ರಾಸಾಯನಿಕ  ಸ್ಟೇರಿನ್‌ ಅನಿಲ ಸೋರಿಕೆಯಾಯಿತು. ಸುಮಾರು ಮೂರು ಕಿಲೋಮೀಟರ್‌ವರೆಗೆ ರಾಸಾಯನಿಕ ಅನಿಲ ಹರಡಿದದ್ದರಿಂದ  ಸ್ಥಳೀಯರು ತೀವ್ರ ತೊಂದರೆಗೀಡಾದರು. ವಿಶಾಖಾ ಹೃದಯ ವಿದ್ರಾವಕ ದೃಶ್ಯ ದದ್ದುಗಳು, ಕಣ್ಣುಗಳಲ್ಲಿ ಊರಿ […]

Continue Reading
download 6

ಸಾರ್ವಜನಿಕ ಸಾರಿಗೆ ಶೀಘ್ರ ಪುನರಾರಂಭ…?

ನವದೆಹಲಿ ಮೇ ೬ :- ಲಾಕ್ ಡೌನ್‌  ಸ್ಥಗಿತಗೊಂಡಿರುವ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಕೆಲ ಮಾರ್ಗಸೂಚಿಗಳೊಂದಿಗೆ ಪುನರಾರಂಭಿಸಲಾಗುವುದುಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬಸ್‌ ಮತ್ತು ಕಾರು ಮಾಲೀಕರಿಗೆ ಭರವಸೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ ಮೂಲಕ ಬಸ್‌ ಮತ್ತು ಕಾರು ಮಾಲೀಕರ ಒಕ್ಕೂಟ ಸದಸ್ಯರೊಂದಿಗೆ ಮಾತನಾಡಿದ ಅವರು,ಜನರಲ್ಲಿ ವಿಶ್ವಾಸ ತುಂಬಲು ಸಾರಿಗೆ ಮತ್ತು ಹೆದ್ದಾರಿಗಳನ್ನು ತೆರೆಯುವುದಕ್ಕೆ ಸಮಯ ಹಿಡಿಯುತ್ತದೆ,ಸಾರ್ವಜನಿಕರ ಸಾರಿಗೆ ಕೆಲ ಮಾರ್ಗಸೂಚಿಗಳೊಂದಿಗೆ ಆರಂಭವಾಗುತ್ತದೆ ಎಂದು ಹೇಳಿದ್ದಾರೆ. ಬಸ್‌ ಮತ್ತು ಕಾರುಗಳ ಕಾರ್ಯಾಚರಣೆ […]

Continue Reading
T202005013472 scaled

ಲಾಕ್ ಡೌನ್ ಎರಡು ವಾರ ವಿಸ್ತರಿಸಿದ ಕೇಂದ್ರ,ಸಡಲಿಕೆಯ ಪೂರ್ಣ ವಿವರ ಇಲ್ಲಿದೆ

ಬೆಂಗಳೂರು ಮೇ ೧:   ಕೋವಿಡ್‌ ೧೯ ಸೋಂಕಿನ ಹಿನ್ನಲೆಯಲ್ಲಿ  ವಿದಿಸಿದ್ದ  ಎರಡನೇ ಹಂತದ ಲಾಕ್‌ ಡೌನ್‌  ಮೇ ೩ ಕ್ಕೆ ಕೊನೆಗೊಳ್ಳುತ್ತಿದೆ. ಮೇ ೪ ರಿಂದ ಎರಡು ವಾರಗಳ ಕಾಲ ಲಾಕ್‌ ಡೌನ್‌ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಎರಡನೇ ಹಂತದ ಲಾಕ್‌ ಡೌನ್‌ ಗಿಂತ ಮೂರನೇ  ಹಂತದ ಲಾಕ್‌ ಡೌನ್‌ ಅವಧಿಯ ನಿಯಮಾವಳಿಗಳು ಸ್ವಲ್ವ ಬಿನ್ನವಾಗಿರಲಿದೆ. ಕೇಂದ್ರ ಸರ್ಕಾರ  ಕೊರೋನಾ ಸೋಂಕು ಮತ್ತು ಸೋಂಕಿತ  ರಹಿತ ಪ್ರದೇಶಗಳನ್ನು ಮೂರು ವಲಯಗಳಾಗಿ ಮೂರು ವಲಯಗಳಗಿ ವಿಂಗಡಿಸಿದೆ. […]

Continue Reading
6c0455aa 4046 479a 951b 0c871e030ca4

ಐಟಿ ಕಂಪನಿಗಳ ʻವರ್ಕ್ ಫ್ರಮ್ ಹೋಮ್ ʼ ವಿಸ್ತರಿಸಿದ ಕೇಂದ್ರ

ಬೆಂಗಳೂರು, ಏಪ್ರಿಲ್ 28 : ಕೇಂದ್ರ ಐ ಟಿ ಮತ್ತು ದೂರ ಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಮಂಗಳವಾರ ಐಟಿ ಕಂಪನಿಗಳಿಗೆ ಮನೆಯಿಂದ ಕೆಲಸಗಳನ್ನು ಜುಲೈ 31 ರವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯಗಳ ಐಟಿ-ಬಿಟಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಕರ್ನಾಟಕದ ಪರವಾಗಿ ಪಾಲ್ಗೊಂಡಿದ್ದರು  ಐಟಿ ಶೇ 85 ರಷ್ಟು ಕೆಲಸಗಳನ್ನು ಮನೆಯಿಂದಲೇ ಮಾಡಲಾಗುತ್ತಿದೆ.   ಈ ಮೊದಲು ಮನೆಯಿಂದ  ಕೆಲಸ ವನ್ನು  ಏಪ್ರಿಲ್ […]

Continue Reading
T202004023446

ರಾಜ್ಯದ ಮುಖ್ಯಮಂತ್ರಿಗಳಿಗೆ ಮೋದಿ ಸಲಹೆ..!

ನವದೆಹಲಿ ಏ ೨೭ :- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೊರೊನಾ ಮಹಾಮಾರಿಯಿಂದ ಎದುರಾಗಿರುವ ಸಮಸ್ಯೆ ಮತ್ತು ಮುಂದಿನ ಯೋಜನೆಗಳ ಕುರಿತಂತೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಇದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನಡೆಸಿದ ನಾಲ್ಕನೇ ಇಂಥ ಸಂವಾದವಾಗಿದೆ, ಈ ಹಿಂದೆ ಮಾರ್ಚ್ 20, ಏಪ್ರಿಲ್ 2 ಮತ್ತು ಏಪ್ರಿಲ್ 11ರಂದು ಸಂವಾದ ನಡೆಸಿದ್ದರು. ಲಾಕ್ ಡೌನ್ ಧನಾತ್ಮಕ ಫಲಶ್ರುತಿ ನೀಡುತ್ತಿದ್ದು, ಕಳೆದ ಒಂದೂವರೆ ತಿಂಗಳುಗಳಲ್ಲಿ ದೇಶ ಸಾವಿರಾರು ಜನರ ಪ್ರಾಣ ಉಳಿಸುವಲ್ಲಿ ಶಕ್ತವಾಗಿದೆ […]

Continue Reading
EVUFkkIUwAEm6G2

ಲಾಕ್ ಡೌನ್ ಮೇ 16 ವರೆಗೆ ವಿಸ್ತರಣೆ

ಬೆಂಗಳೂರು ಏ26:- ಕೊರೋನಾ ಸೋಂಕು ದೇಶದಲ್ಲಿ ತೀವ್ರವಾಗಿ ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಮೇ 3 ರಂದು ಕೊನೆಯಾಗುತ್ತಿರು ಲಾಕ್ ಡೌನ್ ಕೆಲ ರಾಜ್ಯ ಗಳು ವಿಸ್ತರಿಸಿವೆ. ದೆಹಲಿ,ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್,ಓಡಿಶಾ,ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರಗಳು ಮೇ16 ವರೆಗೂ ವಿಸ್ತರಿಸಿವೆ. ಮೇ 3ಕ್ಕೆ ಲಾಕ್ ಡೌನ್ 2 ಕೊನೆಯಾಗುತ್ತಿರುವ ಹಿನ್ನೆಲೆ ಯಲ್ಲಿ ನಾಳೆ ಪ್ರಧಾನಿ ಮೋದಿ ಯವರು ದೇಶದ ಎಲ್ಲಾ ಮುಖ್ಯಮಂತ್ರಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಕೇಂದ್ರದ ನಿರ್ಧಾರಕ್ಕಾಗಿ ಕಾಯುತ್ತಿರುವ ರಾಜ್ಯಗಳು ಕರ್ನಾಟಕ, ತಮಿಳುನಾಡು, ಆಂದ್ರ, […]

Continue Reading