IMG 20250307 WA0011

ಪಾವಗಡ : ದಶಕಗಳ ಕುಡಿಯುವ ನೀರಿನ ಕನಸಿಗೆ ಖಾಸಗಿ ಕಂಪನಿಯಿಂದ ವಿಘ್ನ…!

* ತುಂಗಭದ್ರಾ ಕುಡಿಯುವ ನೀರಿನ ಪೈಪ್ ಲೈನ್ ಡ್ಯಾಮೇಜ್. * ದಿನೇಶ್ ಇಂಜನಿಯರಿಂಗ್ ಕಂಪನಿಯ ಅನಧಿಕೃತ ಕಾಮಗಾರಿಗಳಿಗೆ ಅಸ್ತು ಎಂದವರು ಯಾರು…,? * ವೈ ಎನ್ ಹೊಸಕೋಟೆ ಹೋಬಳಿ ಹಲವಾರು ಹಳ್ಳಿಗಳಿ ಗೆ ನೀರು ಸರಬರಾಜಿಗೆ ತೊಂದರೆ  * ಡ್ಯಾಮೇಜ್ ಮಾಡಿರುವ ಖಾಸಗಿ ಕಂಪನಿಯ ಮೇಲೆ ಕ್ರಮ ತೆಗೆದುಕೊಳ್ಳುತ್ತಾರ…?  ಪಾವಗಡ : ತಾಲ್ಲೂಕಿನ ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಗೆ  ಖಾಸಗಿ ಕಂಪನಿ ಅಡ್ಡಿ ಪಡಿಸುತ್ತಿದೆ. ದಿನೇಶ ಇಂಜನಿಯರಿಂಗ್ ಎಂಬ ಖಾಸಗಿ ಕಂಪನಿ( DEPL ) ಅನದೀಕೃತವಾಗಿ […]

Continue Reading
IMG 20250306 WA0019

ಪಾವಗಡ : ಹಕ್ಕಿ ಜ್ವರ: ಆಂಧ್ರ ಗಡಿ ಭಾಗದಲ್ಲಿ 2 ಕಡೆ ತಪಾಸಣಾ ಕೇಂದ್ರ ಸ್ಥಾಪನೆ.

ಆಂಧ್ರ ದಲ್ಲಿ  ಹಕ್ಕಿ ಜ್ವರ: ತಾಲ್ಲೂಕಿನ ಆಂಧ್ರ ಗಡಿ ಭಾಗದಲ್ಲಿ 2 ಕಡೆ ತಪಾಸಣಾ ಕೇಂದ್ರ ಸ್ಥಾಪನೆ. ಪಾವಗಡ : ಕರ್ನಾಟಕದ ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಆಂಧ್ರದಲ್ಲಿ ಹಕ್ಕಿಜ್ವರದ ಹಿನ್ನೆಲೆ ತಾಲ್ಲೂಕಿನ ಆಂಧ್ರದ ಗಡಿಗಳಾದ ನಾಗಲಾಪುರ ಮತ್ತು ದೋಮ್ಮತ ಮರಿ ಯಲ್ಲಿ ಮುನ್ನೆಚ್ಚರಿಕೆ ಕಾರ್ಯಕ್ರಮವಾಗಿ ಪಶು ಇಲಾಖೆ ವತಿಯಿಂದ ಹಕ್ಕಿ ಜ್ವರ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವರ್ಕೆರಪ್ಪ ಮಾಹಿತಿ ತಿಳಿಸಿದ್ದಾರೆ. ತಾಲ್ಲೂಕಿನ ಜನರು ಯಾವುದೇ ರೀತಿಯಲ್ಲಿ ಭಯಪಡುವ ಅವಶ್ಯಕತೆ ಇಲ್ಲ,ಈಗಾಗಲೇ […]

Continue Reading
IMG 20250221 WA0018

ಪಾವಗಡ : ಕೇಂದ್ರ ಸರ್ಕಾರದ ವಕೀಲರ ವಿಧೇಯಕ 2025 ತಿದ್ದುಪಡಿ ವಿರೋಧಿಸಿ. ವಕೀಲರ ಪ್ರತಿಭಟನೆ….!

ಕೇಂದ್ರ ಸರ್ಕಾರದ ವಕೀಲರ ವಿಧೇಯಕ 2025 ತಿದ್ದುಪಡಿ ವಿರೋಧಿಸಿ. ವಕೀಲರ ಪ್ರತಿಭಟನೆ. ಪಾವಗಡ: ಕೇಂದ್ರ ಸರ್ಕಾರ ವಕೀಲರ ವಿಧೇಯಕಕ್ಕೆ ತಿದ್ದುಪಡಿ ತರಲು ಮುಂದಾಗಿರುವುದನ್ನು ವಿರೋಧಿಸಿ ಶುಕ್ರವಾರ ವಕೀಲರು ನ್ಯಾಯಾಲಯದ ಕಾರ್ಯಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು. ತಾಲ್ಲೂಕು ವಕೀಲ ಸಂಘದ ವತಿಯಿಂದ ತಹಶೀಲ್ದಾರ್ ವರದರಾಜುರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕೇಂದ್ರ ಸರ್ಕಾರ ವಕೀಲರ ವಿಧೇಯಕ ಕಾಯ್ದೆ ತಿದ್ದುಪಡಿ 2025 ಮಂಡಿಸಲು ತೀರ್ಮಾನಿಸಿದ್ದು ಇದು ಮುಂದಿನ ದಿನಗಳಲ್ಲಿ ವಕೀಲ ವೃತ್ತಿಗೆ ಮಾರಕವಾಗಲಿದ್ದು.ಕೇಂ ದ್ರ ಸರ್ಕಾರದ ವಕೀಲರ ವಿಧೇಯ […]

Continue Reading
IMG 20250221 WA0016

ಪಾವಗಡ : ರೈತರ ಮೇಲೆ ಬ್ಯಾಂಕ್ ಅಧಿಕಾರಿಗಳ ದಬ್ಬಾಳಿಕೆ ನಿಲ್ಲಬೇಕು….!

ರೈತರ ಮೇಲೆ ಬ್ಯಾಂಕ್ ಅಧಿಕಾರಿಗಳ ದಬ್ಬಾಳಿಕೆ ನಿಲ್ಲಬೇಕು. ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ. ಪಾವಗಡ : ತಾಲ್ಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಿದ್ದು, ರೈತರು ಹಾಕಿದ ಬೆಳೆಗಳು ಕೈಗೆ ಬಾರದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ, ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ತಿಳಿಸಿದ್ದಾರೆ. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಬ್ಯಾಂಕರ್ ಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರೈತರ ಬೆಳೆಗಳು ಕೈಗೆ ಬಾರದೆ ಸಾಲಬಾಧೆಯನ್ನು ಅನುಭವಿಸುತ್ತಿರುವಾಗ ಕೆಜಿಬಿ ಮತ್ತು ಕರ್ನಾಟಕ ಬ್ಯಾಂಕ್ […]

Continue Reading
IMG 20250216 WA0001

ಪಾವಗಡ : ಸಂತ ಶ್ರೀ ಸೇವಾಲಾಲ್ ರ 286ನೇ ಜಯಂತಿ ಆಚರಣೆ..!

ಚಾರಿತ್ರಿಕ ಪುರುಷ ಸಂತ ಸೇವಾಲಾಲ್. ಅಕ್ಷರ ದಾಸೋಹ ಸಹಾಯ ನಿರ್ದೇಶಕ ಶಂಕರಪ್ಪ. ಪಾವಗಡ: ನೋಂದವರ ಕಣ್ಣೀರು ಒರೆಸಿ, ಆತ್ಮಸ್ಥೆರ್ಯ ತುಂಬುತ್ತಿದ್ದ ಮಹಾನ್ ವ್ಯಕ್ತಿ ಸಂತ ಸೇವಾಲಾಲ್ ಎಂದು ಅಕ್ಷರ ದಾಸೋಹ ಸಹಾಯ ನಿರ್ದೇಶಕ ಶಂಕರಪ್ಪ ತಿಳಿಸಿದರು. ಪಟ್ಟಣ ತಾಲ್ಲೂಕು ಕಚೇರಿಯಲ್ಲಿ ಶನಿವಾರ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ರ 286ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಂತ ಸೇವಾಲಾಲ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಬಂಜಾರ ಸಮಾಜದ ಶ್ರೇಷ್ಠ ದಾರ್ಶನಿಕರಾದ ಸೇವಾಲಾಲ […]

Continue Reading
IMG 20250216 WA0000

ಪಾವಗಡ : ವಿಜೃಂಭಣೆಯಿಂದ ನಡೆದ ಬೆಳ್ಳಿ ಅಡ್ಡಪಲ್ಲಕಿ ಉತ್ಸವ….!

ವಿಜೃಂಭಣೆಯಿಂದ ನಡೆದ ಬೆಳ್ಳಿ ಅಡ್ಡಪಲ್ಲಕಿ ಉತ್ಸವ. ಪಾವಗಡ : ಜೇಷ್ಠದೇವಿ ಮತ್ತು ಶನೇಶ್ವರ ಸ್ವಾಮಿಯ ಬೆಳ್ಳಿ ಅಡ್ಡ ಪಲ್ಲಕ್ಕಿ ಉತ್ಸವ ಶನಿವಾರ ಸಂಜೆ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು. ಪಲ್ಲಕ್ಕಿಯನ್ನು ವಿವಿಧ ಬಗೆಯ ಹೂಗಳಿಂದ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರ ಗೊಳಿಸಲಾಯಿತು.ಬಾಣ, ಬಿರಸು, ಪಟಾಕಿ ಸಿಡಿಮದ್ದು ಜನರನ್ನು ಆಕರ್ಷಿಸಿದವು.ಸಾವಿರಾರು ಜನರು ಬೆಳ್ಳಿ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

Continue Reading
IMG 20250212 WA0019

ಪಾವಗಡ : ಅದ್ದೂರಿ ಯಾಗಿ ನಡೆದ ಶ್ರೀ ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ……!

ಅದ್ದೂರಿ ಯಾಗಿ ನಡೆದ ಶ್ರೀ ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ……. ಪಾವಗಡ: ಪಟ್ಟಣ ಸುಪ್ರಸಿದ್ಧ ಶ್ರೀ ಕ್ಷೇತ್ರ ಶನಿಮಹಾತ್ಮ ದೇಗುಲದಲ್ಲಿ ಜೇಷ್ಠಾದೇವಿ ಸಹಿತ ಶೈನೈಶ್ಚರ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ಬಹಳ ವಿಜೃಂಭಣೆಯಿಂದ ನಡೆಯಿತು. ಬ್ರಹ್ಮ ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ 5-00 ಗಂಟೆಯಿಂದ ಶ್ರೀಸತ್ಯನಾರಾಯಣಸ್ವಾಮಿ ವ್ರತ, ರಥೋತ್ಸವಾಗಮನ, ಆವಾಹಿತ ದೇವತಾರಾಧನೆ, ಸೂರ್ಯಾರಾಧನೆ, ಅಲಂಕಾರ, ಎಲೆಪೂಜೆ ಇತ್ಯಾದಿ ಕೈಂಕರ್ಯಗಳು ಪೂರ್ಣಾಹುತಿ ನಡೆಯಿತು. ಶೀತಲಾಂಭ ದೇವಿಗೆ ರಥೋತ್ಸವದ ಅಂಗವಾಗಿ ಅಭಿಷೇಕ, ಕುಂಕುಮಾರ್ಚನೆ ಏರ್ಪಡಿಸಲಾಗಿತ್ತು. ಶೀತಲಾಂಭ ದೇವಿ ಮೂಲ ವಿಗ್ರಹಕ್ಕೆ ವಿಶೇಷ […]

Continue Reading
DSC 3919 scaled

ತುಮಕೂರು : ಕಾಲಮಿತಿಯಲ್ಲಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಸೂಚನೆ

ಕಾಲಮಿತಿಯಲ್ಲಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಸಚಿವ ಸೋಮಣ್ಣ ಸೂಚನೆ ತುಮಕೂರು(ಕ.ವಾ.)ಫೆ.8: ಜಿಲ್ಲೆಯಲ್ಲಿ ಕೈಗೊಂಡಿರುವ ರೈಲ್ವೆ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಹೊಸದಾಗಿ ಮಂಜೂರಾದ ರೈಲ್ವೆ ಯೋಜನೆಗಳನ್ನು ಮಾರ್ಚ್ 25ರೊಳಗಾಗಿ ಕೈಗೆತ್ತಿಕೊಳ್ಳಬೇಕು. ಜಿಲ್ಲೆಯಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಡಿ.ರಾಮಪುರ ಗೇಟ್, ಬಡ್ಡಿಹಳ್ಳಿ ಗೇಟ್, ದೊಡ್ಡನಕೆರೆ ಸೇರಿ ಮತ್ತಿತರ […]

Continue Reading
IMG 20250206 WA0007 scaled

ಪಾವಗಡ : ಪಿ ಎಲ್ ಡಿ ಬ್ಯಾಂಕ್ ನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಅವಿರೋಧ ಆಯ್ಕೆ….!

ಪಿ ಎಲ್ ಡಿ ಬ್ಯಾಂಕ್ ನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಅವಿರೋಧ ಆಯ್ಕೆ. ಪಾವಗಡ : ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಸಿ.ವೆಂಕಟೇಶ್ ಚುನಾವಣೆ ಅಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದರು.ಅಧ್ಯಕ್ಷ ಸ್ಥಾನಕ್ಕೆ ಎನ್.ಶೇಷಗಿರಿ,ಉಪಾಧ್ಯಕ್ಷ ಸ್ಥಾನಕ್ಕೆ ಅನಿತಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇತರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ. ಕಡಮಲಕುಂಟೆ ಗ್ರಾಮದ ಎನ್.ಶೇಷಗಿರಿ ಅದ್ಯಕ್ಷರಾಗಿ ಮತ್ತು […]

Continue Reading
IMG 20250205 WA0005

ಪಾವಗಡ : ಕೊತ್ತೂರು ಗಂಗಮ್ಮನಿಗೆ ಒಲಿದ 2025ರ ಕಾಯಕ ಬಂಧು ಪ್ರಶಸ್ತಿ….!

ಕೊತ್ತೂರು ಗಂಗಮ್ಮನಿಗೆ ಒಲಿದ 2025ರ ಕಾಯಕ ಬಂಧು ಪ್ರಶಸ್ತಿ. ಪಾವಗಡ : ತಾಲ್ಲೂಕಿನ ಸಿ ಕೆ ಪುರ ಗ್ರಾಂ. ಪಂ. ವ್ಯಾಪ್ತಿಯ ಕೊತ್ತೂರು ಗ್ರಾಮದ ಗಂಗಮ್ಮನಿಗೆ 2025ರ ಕಾಯಕ ಬಂಧು ಪ್ರಶಸ್ತಿ ಲಭಿಸಿದೆ. ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅತಿ ಹೆಚ್ಚು ಮಾನವ ದಿನಗಳ ಸೃಜನೆ, ಹೆಚ್ಚು ಜನರಿಗೆ ಉದ್ಯೋಗ ನೀಡಿಕೆ, ಶಾಲಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಜಿಲ್ಲೆಯ ವಿನೂತನ ಕಾರ್ಯಕ್ರಮಗಳನ್ನು ಪರಿಗಣಿಸಿ ತುಮಕೂರು ಜಿಲ್ಲಾ ಪಂಚಾಯಿತಿಗೆ 2025ರ ನರೇಗಾ ಪ್ರಶಸ್ತಿ, ಉತ್ತಮ ಗ್ರಾಮ ಪಂಚಾಯಿತಿ […]

Continue Reading