SAI 7999 scaled

ತುಮಕೂರು :ಬೆಟ್ಟಗಳನ್ನು ನಾಶಮಾಡಲು ನಿಮಗೆ ಯಾರು ಅನುಮತಿ ಕೊಟ್ಟಿದ್ದಾರೆ…? 

ಪರಿಸರ ಕಾಪಾಡಬೇಕಾದ ಅಧಿಕಾರಿಗಳೇ ಪರಿಸರ ನಾಶಕ್ಕೆ ಕಾರಣವಾಗುತ್ತಿದ್ದಾರೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಸಮಾಧಾನ ತುಮಕೂರು(ಕ.ವಾ.)ನ.15: ಪರಿಸರ ಉಳಿಸಬೇಕಾದ ಅಧಿಕಾರಿಗಳೇ ಪರಿಸರ ನಾಶಕ್ಕೆ ಕಾರಣವಾಗುತ್ತಿರುವುದು ಬೇಸರ ತರುತ್ತಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ಬೆಳಿಗ್ಗೆ ಅವರು ತುಮಕೂರು ನಗರದ ಹೊರವಲಯ ಅಮಲಾಪುರದಲ್ಲಿರುವ ಭೈರವ ಕ್ರಷರ್‍ಗೆ ಅನಿರೀಕ್ಷಿತ ಭೇಟಿ ನೀಡಿ, ಸ್ಥಳದಲ್ಲೇ ನಡೆಯುತ್ತಿರುವ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿರುವುದನ್ನು ಗಂಭೀರವಾಗಿ ಗಮನಿಸಿ ಮಾತನಾಡಿದ ಅವರು, ಕ್ರಷರ್ ಮಾಲೀಕರು ಬೆಟ್ಟ-ಗುಡ್ಡಗಳನ್ನು ಕೊರೆದು ಪರಿಸರವನ್ನು ಹಾಳುಮಾಡುತ್ತಿರುವ ಬಗ್ಗೆ ತೀವ್ರ […]

Continue Reading
IMG 20251115 WA0009

ಪಾವಗಡ : ಮಕ್ಕಳ ಬೆಳವಣಿಗೆಗೆ ಅಂಗನವಾಡಿ ಕಾರ್ಯಕರ್ತರ ಪಾತ್ರ ಮಹತ್ವವಾದುದು…..!

ಮಕ್ಕಳ ದೈಹಿಕ, ಮಾನಸಿಕ ಬೆಳವಣಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವವಾದುದು. ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್. ಪಾವಗಡ: ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆ ಮತ್ತು ಶಿಕ್ಷಣದ ಕೊರತೆಯಂತಹ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರದ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದ್ದಾರೆ. ಪಟ್ಟಣದ ಆದರ್ಶನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ದಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು, ಶಿಶು ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ […]

Continue Reading
SAI 7914

ಲೋಕಾಯುಕ್ತ: ವ್ಯವಸ್ಥೆ ಸುಧಾರಣೆಗಾಗಿ ಸಮಾಜ ಬದಲಾಗಲಿ….!

ವ್ಯವಸ್ಥೆ ಸುಧಾರಣೆಗಾಗಿ ಸಮಾಜ ಬದಲಾಗಲಿ – ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ತುಮಕೂರು(ಕ.ವಾ.)ನ.14: ಸಮಾಜದ ಕುಸಿತಕ್ಕೆ ಕೇವಲ ಅಧಿಕಾರಿಗಳನ್ನು ಹೊಣೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ಸಹ ಸಮಾಜದಿಂದಲೇ ಬಂದಿರುವುದರಿಂದ ವ್ಯವಸ್ಥೆ ಸುಧಾರಣೆಗಾಗಿ ಮೊದಲು ಸಮಾಜ ಬದಲಾಗಬೇಕು  ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದ್ದಾರೆ. ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ತುಮಕೂರು ತಾಲೂಕುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ದಾಖಲಾಗಿರುವ ಹಾಗೂ ಬಾಕಿಯಿರುವ ಹಲವು ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಸಭೆಯನ್ನು ನಡೆಸಿ […]

Continue Reading
image 2022 05 05 132814724 e1651737528800

ತುಮಕೂರು : ಲೋಕಾಯುಕ್ತ ಕ್ಕೆ ಆಸ್ತಿ ವಿವರ ಸಲ್ಲಿಸದ ಶಾಸಕರು…..!

ಆಸ್ತಿ ಮತ್ತು ದಾಯಿತ್ವ ವಿವರಗಳನ್ನು ಸಲ್ಲಿಸದ ತುಮಕೂರು ಜಿಲ್ಲೆ ಯ 6ಶಾಸಕರು 2024-25 ನೇ ಸಾಲಿನ  ಆಸ್ತಿ ಮತ್ತು ದಾಯಿತ್ವ ವಿವರಗಳನ್ನು ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಲೋಕಾಯುಕ್ತದಿಂದ ಪ್ರಕಟ ಕ್ಯಾತ್ಸಂದ್ರ ಎನ್ ರಾಜಣ್ಣ (ಮಧುಗಿರಿ), ಸಿ. ಬಿ. ಸುರೇಶ್ ಬಾಬು  (ಚಿಕ್ಕನಾಯಕನಹಳ್ಳಿ), ಡಾ. ಹೆಚ್. ಡಿ. ರಂಗನಾಥ್  (ಕುಣಿಗಲ್), ಬಿ. ಸುರೇಶ್ ಗೌಡ  (ತುಮಕೂರು ಗ್ರಾಮಾಂತರ), ಹೆಚ್.ವಿ. ವೆಂಕಟೇಶ್ (ಪಾವಗಡ(ಪ.ಜಾ) ರಾಜೇಂದ್ರ ರಾಜಣ್ಣ ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 (ಅಧಿನಿಯಮ)ರ ಕಲಂ 22(1), […]

Continue Reading
IMG 20251101 WA0004

ಪಾವಗಡ : ತಾಲ್ಲೂಕಿನಲ್ಲಿ ಕನ್ನಡ ಭವನ ಸ್ಥಾಪನೆಗೆ ಕ್ರಮ…!

ತಾಲ್ಲೂಕಿನಲ್ಲಿ ಕನ್ನಡ ಭವನ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಶಾಸಕ ಎಚ್ ವಿ ವೆಂಕಟೇಶ್. ಪಾವಗಡ: ಕನ್ನಡ ಭಾಷೆಗೆ ಹೆಚ್ಚು ಓತ್ತನ್ನು ನೀಡಬೇಕು ಹಾಗೂ ವ್ಯವಹಾರ ದೃಷ್ಟಿಯಿಂದ ಇತರೆ ಭಾಷೆಗಳನ್ನು ಸಹ ಕಲಿಯಬೇಕು ಎಂದು ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡದ ನೆಲ ಜಲ ಭಾಷೆಯ ಬಗ್ಗೆ […]

Continue Reading
IMG 20251029 WA0064

ಪಾವಗಡ :ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್. ರಂಗನಾಥಪ್ಪ ಆಯ್ಕೆ.

ಪಾವಗಡ ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್. ರಂಗನಾಥಪ್ಪ ಆಯ್ಕೆ. ಪಾವಗಡ: ತಾಲೂಕಿನ ವಕೀಲರ ಸಂಘಕ್ಕೆ ಬುಧುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆರ್ ರಂಗನಾಥಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಚ್ ಚಂದ್ರಪ್ಪ , ಉಪಾಧ್ಯಕ್ಷರಾಗಿ ಸಿ.ಎಚ್ ಹನುಮಂತರಾಯಪ್ಪ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಆರ್ ರಂಗನಾಥಪ್ಪ, ಹೆಚ್ ರಾಮಾಂಜನೇಯಲು, ಪಿಎಂ ರಾಜಶೇಖರ್, ವಿ ಡಿ ವೆಂಕಟಸ್ವಾಮಿ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ, ಎ ಎಸ್ ರಘುನಂದನ್ , ಎಚ್ ಸಿ ಹನುಮಂತರಾಯಪ್ಪ ನಾಮಪತ್ರ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ, […]

Continue Reading
WhatsApp Image 2025 10 28 at 3.23.18 PM

ಪಾವಗಡ : ಸರ್ಕಾರಿ ಗೌರವಗಳೊಂದಿಗೆ ವಿ.ಎನ್. ರೆಡ್ಡಿ ಅಂತ್ಯಕ್ರಿಯೆ….!

ಸರ್ಕಾರಿ ಗೌರವಗಳೊಂದಿಗೆ ವಿ.ಎನ್. ರೆಡ್ಡಿ ಅಂತ್ಯಕ್ರಿಯೆ ತುಮಕೂರು(ಕ.ವಾ.)ಅ.28: ಸೋಮವಾರ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಾವಗಡ ತಾಲ್ಲೂಕು ವೆಂಕಟಾಪುರ ಗ್ರಾಮದ ವಿ.ಎನ್. ರೆಡ್ಡಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ,  ಜಿಲ್ಲೆಯ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಅನೇಕರ ತ್ಯಾಗ, ಶೌರ್ಯ ಮತ್ತು ದೇಶಭಕ್ತಿ ಅಡಗಿದೆ. ಇಂದಿಗೂ ನಮ್ಮ ಜಿಲ್ಲೆಯಲ್ಲಿ ಕೆಲವು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ವಿ.ಎನ್. […]

Continue Reading
IMG 20251008 WA0006 scaled

ಪಾವಗಡ : ನಿಯಂತ್ರಣ ತಪ್ಪಿದ ಕಾರು – ಒರ್ವ ಸಾವು….!….!

ಕಾರು ನಿಯಂತ್ರಣ ತಪ್ಪಿ ಪಲ್ಟಿ. ಒಬ್ಬರು ಮೃತಿ. ಮತ್ತೊಬ್ಬರಿಗೆ ಗಾಯ. ಪಾವಗಡ: ಪಟ್ಟಣದ ತುಮಕೂರು ರಸ್ತೆಯ ಹೊರವಲಯದ ಕಣಿವೆನಹಳ್ಳಿ ಗೇಟ್ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಮೃತಪಟ್ಟು ಮತ್ತೊಬ್ಬ ವ್ಯಕ್ತಿಗೆ ತೀವ್ರ ಗಾಯವಾಗಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಆರ್. ಅನಂತಪುರ ಗ್ರಾಮದ ನಿವಾಸಿ ಗೋಪಾಲಪ್ಪ (50 )ಮೃತರಾಗಿದ್ದು, ಅದೇ ಗ್ರಾಮದ ನರಸಿಂಹಮೂರ್ತಿ (46)ಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನರಸಿಂಹಮೂರ್ತಿಯವರ ಮಗ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ […]

Continue Reading
IMG 20251008 WA0003

ಪಾವಗಡ: ಅಂಗನವಾಡಿಗಳು ಕಲಿಕೆಗೆ ಉತ್ತೇಜನ ನೀಡುವ ಕೇಂದ್ರಗಳಾಗಬೇಕು….!

ಅಂಗನವಾಡಿಗಳು ಕಲಿಕೆಗೆ ಉತ್ತೇಜನ ನೀಡುವ ಕೇಂದ್ರಗಳ ಮಗನ. ಸಿ ಡಿ ಪಿ ಓ ಸುನಿತಾ ಡಿ ಜಿ ಪಾವಗಡ: ಅಂಗನವಾಡಿ ಕೇಂದ್ರಗಳನ್ನು ಕೇವಲ ಪೋಷಣೆ ಕೇಂದ್ರಗಳಾಗುವ ಬದಲಾಗಿ ಮಕ್ಕಳಿಗೆ ಕಲಿಕೆಗೆ ಉತ್ತೇಜನ ನೀಡುವ ಕೇಂದ್ರಗಳಾಗಿ ಪರಿವರ್ತನೆಗೊಳ್ಳಬೇಕೆಂದು ಸಿ ಡಿ ಪಿ ಓ ಸುನಿತಾ ಡಿ ಜಿ ತಿಳಿಸಿದ್ದಾರೆ. ಪಟ್ಟಣದ ಗುರುಭವನದಲ್ಲಿ ಬುಧುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲಕ ಹಮ್ಮಿಕೊಂಡಿದ್ದ ಪೋಶನ್ ಭಿ ಪಡಾಯಿ ಭಿ ಯೋಜನೆಯ ತರಬೇತಿ ಕಾರ್ಯಕ್ರಮವನ್ನು […]

Continue Reading
IMG 20251007 WA0016 scaled

ಪಾವಗಡ : ವಾಲ್ಮೀಕಿ ಜಯಂತಿ ಆಚರಣೆ….!

ಆದರ್ಶ ವ್ಯಕ್ತಿ ವಾಲ್ಮೀಕಿ. ತಹಶೀಲ್ದಾರ್ ವೈ.ರವಿ. ಪಾವಗಡ: ಆದಿ ಕವಿ ಮಹರ್ಷಿ ವಾಲ್ಮೀಕಿ ಸೂಚಿಸಿದ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ತಹಶೀಲ್ದಾರ್ ವೈ ರವಿ ತಿಳಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ವಾಲ್ಮೀಕಿ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ವಾಲ್ಮೀಕಿ ಬರೆದ ಮಹಾ ಗ್ರಂಥ ರಾಮಾಯಣವು ಮಾನವನ ಜೀವನದ ಮಾರ್ಗದರ್ಶಕ ಗ್ರಂಥವೆಂದರು. ವಾಲ್ಮೀಕಿಯವರ ತತ್ವ, ಆದರ್ಶಗಳು […]

Continue Reading