IMG 20220531 124904 scaled

ತುಮಕೂರು:ಆಜಾಧಿ ಕಾ ಅಮೃತ್ ಮಹೋತ್ಸವ್ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ…!

ಆಜಾಧಿ ಕಾ ಅಮೃತ್ ಮಹೋತ್ಸವ್: ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ತುಮಕೂರು (ಕ.ವಾ) ಮೇ.31: ಕೇಂದ್ರ ಸರ್ಕಾರದ ವತಿಯಿಂದ ಪ್ರಾಯೋಜನೆಗೊಂಡ ವಿವಿಧ ಯೋಜನೆ/ ಕಾರ್ಯಕ್ರಮಗಳ ಕುರಿತಾದ ಗರೀಬ್ ಕಲ್ಯಾಣ ಸಮ್ಮೇಳನವನ್ನು ದೇಶಾದ್ಯಂತ ಇರುವ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಸಂವಾದ ನಡೆಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತ್ ಪ್ರಧಾನ ಮಂತ್ರಿಗಳ ನೇರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಭಾಂಗಣದಲ್ಲಿ ನೆರೆದಿದ್ದ ಫಲಾನುಭವಿಗಳೊಂದಿಗೆ ಮಾತನಾಡಿದ ಶಾಸಕ ಜಿ.ಬಿ ಜ್ಯೋತಿಗಣೇಶ್ ಅವರು ಸ್ವಾತಂತ್ರ್ಯ […]

Continue Reading
IMG 20220531 WA0025

ಆನೇಕಲ್: ಬೀಟ್ ಪೊಲೀಸ್ ರ ಕುಶಲೋಪಾರಿ…!

ಆನೇಕಲ್ ಪೊಲೀಸ್ ಠಾಣೆಯ ಹೊನ್ನಕಳಸಾಪುರ ಬೀಟ್ ಸಿಬ್ಬಂದಿ ಇಡೀ ಗ್ರಾಮಸ್ಥರನ್ನ ಕಂಡು ಉಭಯ ಕುಶಲೋಪಹರಿ ವಿಚಾರಿಸಿ ಗ್ರಾಮದ ಅಪರಾಧ ಇನ್ನಿತರೆ ಸಮಸ್ಯೆಗಳನ್ನು ವಿಚಾರಿಸಿದರು. ಬಹುವಾಗಿ ಹೊನ್ನಕಳಸಾಪುರದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಬೀಟ್ ಸಿಬ್ಬಂದಿ ಎಸ್ ಮೌಲ ಮಾಹಿತಿ ನೀಡಿದರು. ಅಪರಿಚಿತ, ಗುಮಾನಿ ವ್ಯಕ್ತಿಗಳ ಚಲನವಲನ ಅನುಮಾನ ಮೂಡಿದರೆ ಅವರ ಕುರಿತು ತಕ್ಷಣ ಆನೇಕಲ್ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿದರು.ದೇವಾಲುಗಳು, ಶಾಲೆ ಅಂಗಳ, ಅರಳೀಕಟ್ಟೆ, ಅಂಗನವಾಡಿ ಕೇಂದ್ರಗಳ ವಲಯಗಳಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು […]

Continue Reading
IMG 20220530 WA0000

ಪಾವಗಡ:ವಾಲೀಬಾಲ್ ಟೂರ್ನಮೆಂಟ್..!

ವಾಲೀಬಾಲ್ ಟೂರ್ನಮೆಂಟ್ ವೈ.ಎನ್. ಹೊಸಕೋಟೆ: ಗ್ರಾಮೀಣ ವಾಲೀಬಾಲ್ ಪ್ರತಿಭೆಗಳಿಗೆ ಉತ್ತಮ ಅವಕಾಶ ಒದಗಿಸಿಕೊಡುವಲ್ಲಿ ಗ್ರಾಮದ ಚಾಮುಂಡಿ ವಾಲಿಬಾಲ್ ಸ್ಫೋರ್ಟ್ಸ್ ಕ್ಲಬ್ ಸಹಕಾರಿಯಾಗಲಿದೆ ಎಂದು ಬಿಜೆಪಿ ಮುಖಂಡ ಕೃಷ್ಣ ನಾಯ್ಕ ತಿಳಿಸಿದ್ದಾರೆ. ಗ್ರಾಮದ ಚಾಮುಂಡೇಶ್ವರಿ ಹತ್ತಿ ಕೈಮಗ್ಗ ನೇಕಾರ ಸಹಕಾರಿ ಸಂಘ ಮೈದಾನದಲ್ಲಿ ಭಾನುವಾರದಂದು ಚಾಮುಂಡಿ ವಾಲಿಬಾಲ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಹೋಬಳಿ ಮಟ್ಟ ವಾಲಿಬಾಲ್ ಅಂತಿಮ ಪಂದ್ಯಾವಳಿ ಸಸಿ ನೆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಗ್ರಾಮೀಣ […]

Continue Reading
IMG 20220524 WA0007

ಪಾವಗಡ:ದುರಸ್ತಿ ಕಾಣದ ಗುಂಡಾರ್ಲ ಹಳ್ಳಿಕೆರೆ……

ದುರಸ್ತಿ ಕಾಣದ ಗುಂಡಾರ್ಲ ಹಳ್ಳಿಕೆರೆ…… ಪಾವಗಡ.,…. ಬರದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಪಾವಗಡ ತಾಲೂಕಿಗೆ ಕಳೆದೆರಡು ವರ್ಷಗಳಿಂದ ಉತ್ತಮವಾದ ರೀತಿಯಲ್ಲಿ ಮಳೆಯಾಗುತ್ತಿದ್ದು. ಗುಂಡಾರ್ಲ ಹಳ್ಳಿಕೆರೆ ಕೆರೆ ದುರಸ್ತಿ ಮಾಡಿಸುವಂತೆ 2019 ರಿಂದಲೂ ಅನೇಕ ಪ್ರತಿಭಟನೆಗಳು ನಡೆದರೂ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ ಎಂದು ಇಂದು ತಾಲೂಕು ಪಂಚಾಯಿತಿ ಕಚೇರಿಯ ಮುಂದೆ ಕೆರೆ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನರಸಿಂಹ ರೆಡ್ಡಿ […]

Continue Reading
IMG 20220520 WA0022

ಪಾವಗಡ: ಎಸ್ ಎಸ್ ಎಲ್ ಸಿ ವಿಧ್ಯಾರ್ಥಿ ಗಳಿಗೆ ಸನ್ಮಾನ

ತಾಲೂಕಿಗೆ ಪ್ರಥಮ ಸ್ಥಾನ. ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ……. ಪಾವಗಡ….. 2021 -22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು. 1.ಪಟ್ಟಣದ ಗುರುಕುಲ ಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಚೌದರಿ 625 ಅಂಕಗಳಿಗೆ 624 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದ ಹಿನ್ನೆಲೆ ಇಂದು ಗುರುಕುಲ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿ ಪ್ರಜ್ವಲ್ ಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು. ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ. […]

Continue Reading
images 10

ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪಾವಗಡ ಪ್ರಥಮ ಸ್ಥಾನ…….

ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪಾವಗಡ ಪ್ರಥಮ ಸ್ಥಾನ……. ..ಪಾವಗಡ…. 2021- 22 ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು. ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪಾವಗಡ ಪ್ರಥಮ ಸ್ಥಾನ ಗಳಿಸಿದ್ದು. ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 2830 ವಿದ್ಯಾರ್ಥಿಗಳು ಹಾಜರಾಗಿದ್ದು, 2760 ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು. ತಾಲೂಕಿನ ಎಸ್ ಎಸ್ ಎಲ್ ಸಿ ಫಲಿತಾಂಶ ಶೇಕಡ 97.54% ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ತಾಲೂಕಿನ ಮುರಾರ್ಜಿ ದೇಸಾಯಿ ಕೊಡಿಗೇನಹಳ್ಳಿ […]

Continue Reading
IMG 20220516 WA0020

ಪಾವಗಡ:2022 -23 ನೇ ಸಾಲಿನ ಶಾಲೆ ಆರಂಭ…!

ಪಾವಗಡ…ಇಂದು ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ 2022 -23 ನೇ ಸಾಲಿನ ಶಾಲೆಯ ಪ್ರಾರಂಭೋತ್ಸವನ್ನು ವಿಜೃಂಭಣೆಯಿಂದಾಗಿ ಮಾಡಲಾಯಿತು. ಸರ್ಕಾರಿ ಆದರ್ಶ ಶಾಲೆಯಲ್ಲಿ ಇಂದು ಸೋಲಾರ್ ಹೈಟೆಕ್ ಗ್ರಾಂಟ್ ನಡಿ ನವೀಕರಣಗೊಂಡ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಯಿತೆಂದು , ವಿದ್ಯಾರ್ಥಿಗಳು ತುಂಬಾ ಖುಷಿಯಿಂದ ಶಾಲೆಗೆ ಆಗಮಿಸಿದ್ದ ರೆಂದು, ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ ಎಂದು ಮುಖ್ಯಶಿಕ್ಷಕ ಜಿ ವೆಂಕಟೇಶ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು. ( ಪ್ರೌಢಶಾಲಾ ವಿಭಾಗ) ದ ಉಪ ಪ್ರಾಂಶುಪಾಲರಾದ ಓ.ಧನಂಜಯ ಅವರು […]

Continue Reading
IMG 20220516 WA0007

ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ…!

ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ: ಬಸವರಾಜ ಬೊಮ್ಮಾಯಿತುಮಕೂರು, ಮೇ 16: ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಆಲದ ಮರದ ಪಾರ್ಕ್ ನ ನಿರ್ವಹಣಾ ಜವಾಬ್ದಾರಿಯನ್ನು ತುಮಕೂರಿನ ಪ್ರೆಸ್ ಕ್ಲಬ್ ಇವರಿಗೆ ಹಸ್ತಾಂತರಿಸಿ ಮಾತನಾಡಿದರು. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕ್ ನಿರ್ವಹಣೆಯ ಹೊಣೆಯನ್ನು ಪ್ರೆಸ್ ಕ್ಲಬ್‍ ಹೊತ್ತಿರುವುದು ದಿಟ್ಟ ಹೆಜ್ಜೆಯಾಗಿದೆ. ಸ್ಮಾರ್ಟ್ ಸಿಟಿ […]

Continue Reading
IMG 20220513 WA0037

ಪಾವಗಡ: ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರ ಸಮಾವೇಶ….!

ಭ್ರಾತೃತ್ವದ ಬದಲು ಕೋಮುವಾದ ಸೃಷ್ಟಿಸುತ್ತಿರುವ ಬಿಜೆಪಿ ಸರ್ಕಾರ ,ಅಲ್ಪಸಂಖ್ಯಾತರ ಜಿಲ್ಲಾ ಘಟಕ ಅಧ್ಯಕ್ಷ ಅತಿಕ್ ಅಹಮದ ಪಾವಗಡ: ಭಾರತ ದೇಶದ ಜಾತ್ಯಾತೀತ ತತ್ವವನ್ನು ಬದಿಗೊತ್ತಿ ಹಿಂದೂ-ಮುಸ್ಲಿಂ ನಡುವೆ ದ್ವೇಷ ಬೀಜವನ್ನು ಬಿತ್ತಿ , ದುರುದ್ದೇಶದಿಂದ ಅಲ್ಪಸಂಖ್ಯಾತ ಯುವಕರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳದಿರಲು ಹುನ್ನಾರ ನಡೆಯುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುವುದಾಗಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಸರ್ಕಾರಕ್ಕೆ ಎಚ್ಚರಿಸಿದರು. ಪಟ್ಟಣದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರ […]

Continue Reading
IMG 20220513 WA0015

ಪಾವಗಡ: ಗುರುವಂದನೆ ಕಾರ್ಯಕ್ರಮ….!

RVPHS :ಗುರುವಂದನೆ ಕಾರ್ಯಕ್ರಮ ವೈ.ಎನ್.ಹೊಸಕೋಟೆ : ಗ್ರಾಮದ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯ 1988-89 ನೇ ಸಾಲಿನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿ ಬಳಗವು ಪ್ರೌಢಶಾಲೆಯಲ್ಲಿ ದಿನಾಂಕ 14 ಮೇ ಮತ್ತು 15 ರ ಎರಡು ದಿನಗಳ ಕಾಲ ಗುರುವಂದನೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮವನ್ನು ಆಯೋಸಿದೆ. ಮೇ 14 ರ ಶನಿವಾರದಂದು ಕ್ರೀಡೋತ್ಸವ, ಉದ್ಘಾಟನೆ, ಶಿಕ್ಷಕರು, ಶಾಲೆ ಮತ್ತು ಗ್ರಾಮದ ಮಾಹಿತಿಯ ಕೃತಿ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೇ 15 ರ ಭಾನುವಾರ ಗುರುಗಳ […]

Continue Reading