IMG 20211103 WA0023

ಪಾವಗಡ ಪುರಸಭೆಯ ಹನ್ನೆರಡನೆಯ ವಾರ್ಡಿಗೆ ಭೇಟಿ ನೀಡುವಂತೆ ಮನವಿ….!

DISTRICT NEWS ತುಮಕೂರು

ಪಾವಗಡ ಪುರಸಭೆಯ ಹನ್ನೆರಡನೆಯ ವಾರ್ಡಿಗೆ ಭೇಟಿ ನೀಡುವಂತೆ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ.

ಪಾವಗಡ ಪುರಸಭೆಯ 12 ನೇ ವಾರ್ಡಿನಲ್ಲಿ ಗೆದ್ದಂತಹ ಸದಸ್ಯರು ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ. ಜನರಿಗೆ ಸ್ಪಂದಿಸದೆ ಕಾಣೆಯಾಗಿದ್ದಾರೆ ಎಂದು ಜೆ.ಡಿ.ಎಸ್ ಐಟಿ ಘಟಕದ ಕಾರ್ಯಕರ್ತರು ಆರೋಪಿಸಿದ್ದಾರೆ.

ಆಡಳಿತ ಪಕ್ಷದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಕೋಟಿಗಟ್ಟಲೆ ಹಣ ತಂದು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿದ್ದು ಸರಿಯಷ್ಟೇ ಆದರೆ 2 .11. 2021ರಂದು ಜೆಡಿಎಸ್ ಐಟಿ ಘಟಕದ ಸದಸ್ಯರು ಭೇಟಿ ನೀಡಿದಾಗ ಸದರಿ ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಕಂಡು ಬಂದಿರುವುದಿಲ್ಲ. ಸದರಿ ವಾರ್ಡಿನಲ್ಲಿ ಚರಂಡಿ ಸ್ವಚ್ಛಗೊಳಿಸದೆ ಇರುವುದು ಬಹಿರ್ದೆಸೆಗೆ ಇರುವ ಶೌಚಾಲಯಗಳು ಸ್ವಚ್ಛವಾಗದೆ ಇರುವುದುಕಂಡುಬಂದಿತು.

ಕಸಕಡ್ಡಿಗಳಿಂದ ಚರಂಡಿ ತುಂಬಿದ್ದು ಗಬ್ಬುವಾಸನೆ ಬರುತ್ತಿವೆ. ಸದರಿ ವಾರ್ಡಿನಲ್ಲಿ ಪಾಳುಬಿದ್ದ ಮನೆಗಳು ಅತಿ ಹೆಚ್ಚಾಗಿ ಕಂಡು ಬಂದಿದೆ ಆದ್ದರಿಂದ ಪುರಸಭೆಯ ಮುಖ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಬೇಕೆಂದುಜೆಡಿಎಸ್ ಐಟಿ ಘಟಕದ ಸದಸ್ಯರಾದ ರಾಮಾಂಜಿನಪ್ಪ ತಿಮ್ಮರಾಜು ಮಂಜುನಾಥ ಅಜಯ್ ಕುಮಾರ್ ಹರಾಜು ಅನಿಲ್ ಓಂಕಾರ್ ಮತ್ತಿತರರು ಮುಖ್ಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ವರದಿ: ಎ ಶ್ರೀನಿವಾಸುಲು.