IMG 20220111 WA0058

ಪಾವಗಡ: ಕುರಿಗಾಹಿ ಸಾವು…         

DISTRICT NEWS ತುಮಕೂರು

ಕುರಿಗಾಹಿ ಸಾವು                                     

ಪಾವಗಡ: ತಾಲ್ಲೂಕಿನ ರಾಜವಂತಿ ಬಳಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗಾಗಿ ನಿರ್ಮಿಸಿದ್ದ ಗುಂಡಿಯಲ್ಲಿ ಬಿದ್ದು ರಾಜವಂತಿ ಗ್ರಾಮದ  ಕುರಿಗಾಹಿ ರಾಮಾಂಜಿನಪ್ಪ (35) ಎಂಬುವವರು ಮಂಗಳವಾರ  ಮೃತಪಟ್ಟಿದ್ದಾರೆ.ಮೃತ ರಾಮಾಂಜಿನಪ್ಪ ರಾಜವಂತಿ ಗ್ರಾಮದ ಬಳಿ ಕುರಿ ಮೇಯಿಸಲು ಹೋದಾಗ ರೈಲ್ವೆ ಕಾಮಗಾರಿಗಾಗಿ ನಿರ್ಮಿಸಿದ್ದ ಬೃಹತ್ ಗುಂಡಿಯಲ್ಲಿ ನೀರು ತುಂಬಿದ್ದು,ಕುರಿಗಾಹಿ ರಾಮಾಂಜಿನಪ್ಪ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ ಈಜು ಬರುತ್ತಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ವರದಿ: ಶ್ರೀನಿವಾಸುಲು ಎ