IMG 20201226 WA0004

ಪಾವಗಡ: ಉದ್ದಗಟ್ಟೆ ಗ್ರಾಮದಲ್ಲಿ ಎರಡು ಹುಲ್ಲು ಬಣವೆಗಳಿಗೆ ಬೆಂಕಿ….!

DISTRICT NEWS ತುಮಕೂರು

 

ಪಾವಗಡ: ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಉದ್ದಗಟ್ಟೆ ಗ್ರಾಮದಲ್ಲಿ ಎರಡು ಹುಲ್ಲು ಬಣವೆಗಳಿಗೆ ಬೆಂಕಿ ತಗುಲಿ ಸರ್ವನಾಶವಾದ ಘಟನೆ ಶುಕ್ರವಾರ ಮುಸ್ಸಂಜೆ ನಡೆದಿದೆ.

ಉದ್ದಗಟ್ಟೆ ಗ್ರಾಮದ ರೈತ ರಂಗನಾಯಕ ಎಂಬುವರಿಗೆ ಸೇರಿದ್ದ ಈ ಬಣವೆಗಳು ಎಂದು ತಿಳಿದು ಬಂದಿದೆ.

ಶುಕ್ರವಾರ ಸಂಜೆ ನಡೆದ ಈ ದುರ್ಘಟನೆಯಲ್ಲಿ ಅಧಿಕ ಮೌಲ್ಯದ ಬಣವೆಗಳು ಅಗ್ನಿಗೆ ಆಹುತಿಯಾಗಿ ಅತೀವ ದುಖದ ಜೊತೆಗೆ ಅಪಾರ ನಷ್ಟವಾಗಿದೆ ಎಂದು ನೊಂದ ರೈತ ಕುಟುಂಬಸ್ಥರು ಅಳಲನ್ನು ಹೊರ ಹಾಕಿದ್ದಾರೆ.

IMG 20201226 WA0002
ಕೊರೊನಾ ಭಯ ಒಂದೆಡೆಯಾದ್ರೆ ಮತ್ತೊಂದೆಡೆ ಬೆಳೆ ನಷ್ಟದ ಸಂಕಷ್ಟದ ನಡುವೆಯೂ ಮೂಕ ಪ್ರಾಣಿಗಳಿಗೆ ಆಹಾರವಾಗಿದ್ದ ಈ ಎರಡು ಹುಲ್ಲು ಬಣವೆಗಳು ಸುಟ್ಟು ಬೂದಿಯಾಗಿರುವ ಘಟನೆ ರೈತ ಕುಟುಂಬದಲ್ಲಿ ತುಂಬಾನೇ ನೋವು ತಂದಿದೆ. ಆಗಾಗಿ ಸಂಬಂಧಿಸಿದ ಆಡಳಿತ ವರ್ಗ ಇತ್ತ ಕಡೆ ಗಮನಹರಿಸಿ ನೊಂದವರಿಗೆ ಪರಿಹಾರ ಕಲ್ಪಿಸೋ ಅನಿವಾರ್ಯತೆಯಿದೆ.

ವರದಿ: ನವೀನ್ ಕಿಲಾರ್ಲಹಳ್ಳಿ