IMG 20210521 WA0016

ತುಮಕೂರು : ಕೋವಿಡ್ ಬಾಧಿತ ಅನಾಥ ಮಕ್ಕಳ ಪಾಲನೆ ಗೆ: ಅರ್ಜಿ ಆಹ್ವಾನ

ಕೋವಿಡ್ ಬಾಧಿತ ಅನಾಥ ಮಕ್ಕಳ ಪಾಲನೆ: ಆಸಕ್ತ ಪೋಷಕರಿಂದ ಅರ್ಜಿ ಆಹ್ವಾನತುಮಕೂರು(ಕವಾ)ಮೇ21: ಕೋವಿಡ್-19ರ 2ನೇ ಅಲೆಯ ಹಿನ್ನೆಲೆಯಲ್ಲಿ ಕೆಲವು ಕುಟುಂಬಗಳಲ್ಲಿ ಮಕ್ಕಳ ತಂದೆ-ತಾಯಿಗಳಿಬ್ಬರು ಕೋವಿಡ್-19 ಸೋಂಕಿಗೆ ಒಳಗಾಗಿ ಮರಣ ಹೊಂದುವ ಸಂದರ್ಭಗಳು ಎದುರಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದಾದರೂ ಕುಟುಂಬದಲ್ಲಿ ತಂದೆ-ತಾಯಿಗಳಿಬ್ಬರು ಕೋವಿಡ್ ಸೋಂಕಿಗೆ ಒಳಗಾಗಿ ಮರಣ ಹೊಂದಿ ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದಂತಹ ಪರಿಸ್ಥಿತಿ ಒದಗಿಬಂದಲ್ಲಿ ಅಂತಹ ಮಕ್ಕಳನ್ನು ಪಾಲನೆ ಮಾಡುವ ಆಸಕ್ತ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಕೋವಿಡ್ ಬಾಧಿತ 0-6 ವರ್ಷದೊಳಗಿನ ಹಾಗೂ […]

Continue Reading
21 5 21 Medicine distribution scaled

ಪಾವಗಡ: ಉಚಿತವಾಗಿ ಔಷಧಿಗಳ ಕಿಟ್‍ ವಿತರಣೆ…!

ಕ್ವಾರಂಟೈನ್‍ನಲ್ಲಿರಬೇಕಾದ ವ್ಯಕ್ತಿಗಳಿ ಗೆ ವೈದ್ಯರ ಸಲಹೆ ಮೇರೆಗೆ ಉಚಿತ ಔಷಧಿ ವಿತರಣೆ ಪಾವಗಡ: – ನೂತನವಾಗಿ ಪತ್ತೆಯಾದ ಕೋವಿಡ್ ಸೋಂಕು ತಗುಲಿದ ವ್ಯಕ್ತಿಯು ಮನೆಯಲ್ಲಿಯೇ ಔಷಧೋಪಚಾರವನ್ನು ಪಡೆಯುವಂತಹ (Home Quarantine) ವ್ಯಕ್ತಿಗಳಿಗೆ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಉಚಿತವಾಗಿ ಔಷಧಿಗಳ ಕಿಟ್‍ನ್ನು ನೀಡಲಾಗುತ್ತದೆ. ಈ ಔಷಧಿಗಳ ಕಿಟ್‍ಗಳನ್ನು ಖರೀದಿಸಿ ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಲು ನಮ್ಮ ಸಂಸ್ಥೆ ಮುಂದೆ ಬಂದಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜಿ ರವರು ವಿವರಿಸಿದ್ದಾರೆ. ಈ ಯೋಜನೆಯ ಮೂಲಕ ಹೋಂ […]

Continue Reading
IMG 20210521 WA0015

ತುಮಕೂರು : ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ

ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ* ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು ತುಮಕೂರು(ಕವಾ)ಮೇ.21: ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ 18-44 ವರ್ಷದ ಒಳಗಿನ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಮಂಚೂಣಿ ಕಾರ್ಯಕರ್ತರ ಇಲಾಖಾ ಮುಖ್ಯಸ್ಥರೊಂದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸಭೆ ನಡೆಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಕೋವಿಡ್ ನಿಗ್ರಹಕ್ಕೆ ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಇಲಾಖೆ ಮುಖ್ಯಸ್ಥರು ನೋಡಲ್ ಅಧಿಕಾರಿಗಳಾಗಿ ಕಾರ್ಯ […]

Continue Reading
IMG 20210520 WA0023

ತುಮಕೂರು: ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ….!

ತುಮಕೂರು ಜಿಲ್ಲೆಯ ಕೋವಿಡ್‌ ಪರಿಸ್ಥಿತಿ ಪರಾಮರ್ಶಿಸಿದ ಸಚಿವ ಸುಧಾಕರ್‌ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವುದು ಸಮಾಧಾನಕರ ಅಂಶ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ಅರಂಭಿಸಲು ಜಿಲ್ಲಾಡಳಿತಕ್ಕೆ ತಾಕೀತು ತುಮಕೂರು : ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಗೋಚರಿಸಿದ್ದು ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತುಮಕೂರು ಜಿಲ್ಲೆಯ ಕೋವಿಡ್‌ ಪರಿಸ್ಥಿತಿಯನ್ನು […]

Continue Reading
IMG 20210520 WA0017

ಪಾವಗಡ: ಜಾಡಮಾಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ವಿತರಣೆ…!

ಪಾವಗಡ. ಗ್ರಾಮೀಣ ಭಾಗದ ಜಾಡಮಾಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ವಿತರಣೆ”ತಮಟೆ ಗ್ರಾಮೀಣ ಸಬಲೀಕರಣ ಕೇಂದ್ರ (ರಿ) ಹಾಗೂ ಸಫಾಯಿ ಕರ್ಮಚಾರಿ ಕಾವಲು ಸಮಿತಿ – ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ ಪಾವಗಡ ತಮಟೆ ಕಛೇರಿಯ ಆವರಣದಲ್ಲಿ ಗ್ರಾಮೀಣ ಭಾಗದ ಸ್ವಚ್ಚತಾಗಾರರಿಗೆ ಆಹಾರದ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು, ತಮಟೆ ಸಂಸ್ಥೆಯು ತುಮಕೂರು ಜಿಲ್ಲೆಯಾದ್ಯಂತ ಇರುವ ಮ್ಯಾನುಯಲ್ ಸ್ಕಾವೆಂಜರ್ಸ್ ಗಳು, ಸ್ಯಾನಿಟರಿ ವರ್ಕರ್ಸ್ ಹಾಗೂ ಜಾಡಮಾಲಿ ಕಾರ್ಮಿಕರ ಆರೋಗ್ಯ, ಶಿಕ್ಷಣ, ಹಾಗೂ ಅವರ ಅಭಿವೃದ್ದಿಗಾಗಿ ಸುಮಾರು 15 […]

Continue Reading
IMG 20210520 WA0013

ಪಾವಗಡ: ನೊಂದವರ ನೆರವಿಗೆ ಬಂದ ಟ್ರಸ್ಟ್….!

ಪಾವಗಡ : ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ನೊಂದವರ ನೆರವಿಗೆ ಸದಾ ಧಾವಿಸುವುದೇ ನಮ್ಮ ಟ್ರಸ್ಟಿನ ಮೂಲ ಉದ್ದೇಶ ಎಂದು ತಾಲ್ಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಬಿಕೆ ಮುನಿಸ್ವಾಮಿಯವರು ತಿಳಿಸಿದರು. ನಗರದ ಪ್ರಮುಖ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಶಾರದಾ ವಿದ್ಯಾಪೀಠದಲ್ಲಿ ನಮ್ಮ ತಾಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟಿನ ಅಧ್ಯಕ್ಷರಾದ ಬಿಕೆ ಮುನಿಸ್ವಾಮಿಯವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ಟ್ರಸ್ಟಿನ ಮೂಲ ಉದ್ದೇಶವೇ ತಾಲೂಕಿನ ಸರ್ವತೋಮುಖ ಅಭಿವೃದ್ಧಿ‌. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವಾಮನೋಭಾವದಿಂದ ಎಲ್ಲರೂ […]

Continue Reading
039139d2 389c 4520 81b1 8abbab3f8abf

ಪಾವಗಡ: ದಿನಸಿ ಕಿಟ್ ವಿತರಿಸಿದ ಶಾಸಕರು…!

ಪಾವಗಡ . ಜನ ಸೇವೆ ಜನಾರ್ಧನ ಸೇವೆ ಶಾಸಕ ವೆಂಕಟರವಣಪ್ಪ . ಶಾಸಕರಾದ ವೆಂಕಟರವಣಪ್ಪ ಹಾಗೂ ಜಿ.ಪಂ ಸದಸ್ಯರಾದ ಹೆಚ್ ವಿ ವೆಂಕಟೇಶ್ ರವರ ತಮ್ಮ ವೈಯಕ್ತಿಕ ಹಣದಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳ ಉಪಯೋಗಕ್ಕಾಗಿ ಸುಸಜ್ಜಿತವಾದ ಎರಡು ಆಂಬುಲೆನ್ಸ್ ಗಳನ್ನು ಮತ್ತು ಒಂದು ಜೆಸಿಬಿ ಯಂತ್ರವನ್ನು ಇಂದು ಪಾವಗಡ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ಉಚಿತ ಸೇವೆಗೆಂದು ಕೊಡುಗೆಯಾಗಿ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಧಿಕಾರ ಯಾವಾಗಲು ಶಾಶ್ವತವಲ್ಲ ಅಧಿಕಾರದ ಅವಧಿಯಲ್ಲಿ ಜನರಿಗೆ ನೀಡುವ ಸೇವೆ […]

Continue Reading
IMG 20210518 WA0018

ಪಾವಗಡ: ಹಳ್ಳಿಗಳಲ್ಲಿ ಸ್ಯಾನಿಟೈಜರ್ ….!

ಪಾವಗಡ ಪಶತಾಲ್ಲೂಕಿನ ಸಮಗ್ರ ಸೇವಾಭಿವೃದ್ಧಿ _ಟ್ರಸ್ಟ್ ವತಿಯಿಂದ ಇಂದು ಡ್ರೋನ್ _ಮತ್ತು _ಬ್ಲೋವರ್ ಮುಖಾಂತರ ಸುಗರಾಧನ ಸಂಸ್ಥೆಯ ಸಹಭಾಗಿತ್ವದಲ್ಲಿ _ ಇಡೀ ಪಾವಗಡ ನಗರ_ ಮತ್ತು _ತಾಲ್ಲೂಕಿನ_ ಹಳ್ಳಿಗಳಲ್ಲಿ ಹಂತ ಹಂತವಾಗಿ ಸ್ಯಾನಿಟೈಜರ್ ಮಾಡಿಸಲಾಗುತ್ತಿದೆ ಈ ಸ್ಯಾನಿಟೈಸರ್ ರಸಯನ ಮುಕ್ತ ಆಲ್ಕೋಹಾಲ್ ಮುಕ್ತವಾದದ್ದು ಹಾಗೆ ಇದನ್ನ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಮುತುವರ್ಜಿವಹಿಸಿ ಇದನ್ನ ಬಳಸಿದ ಮೇಲೆ ಅಲ್ಲಿ ಕರೋನ ಕೇಸ್ಗಳು ತಗ್ಗಿದೆ ಅದೇತರ ಪಾವಗಡ ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಮಾರ್ಗದರ್ಶಕರಾದ ಚಿಕ್ಕಜಾಲ ಅರಕ್ಷಕ ಠಾಣೆಯ ವೃತ್ತನಿರೀಕ್ಷಕರು […]

Continue Reading
IMG 20210517 WA0018 1

ಪಾವಗಡ: ಬಡವರ ನೆರವಿಗೆ ಬಂದ ಶಾಸಕರು….!

ಪಾವಗಡ .‌ ಲಾಕ್ ಡೌನ್ ಕೊನೆಗೊಳ್ಳುವವರೆಗೂ ಅನ್ನದಾನ ಕೈ ಹಿಡಿದ ಪಾವಗಡ ಶಾಸಕ ವೆಂಕಟರಮಣಪ್ಪ. ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇಡೀ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದೆ. ಜನ ಮತ್ತು ವಾಹನ ಸಂಚಾರವಿಲ್ಲದೇ ಬಹುತೇಕ ಸ್ತಬ್ದಗೊಂಡಿದೆ. ಸರ್ಕಾರದ ಆದೇಶದ ಮೇರೆಗೆ ಕೆಲ ಅಂಗಡಿ-ಮುಂಗಟ್ಟುಗಳಷ್ಟೇ ಬಾಗಿಲು ತೆರೆದಿವೆ. ರಸ್ತೆ ಬದಿ ಹೋಟೆಲ್​ಗಳೆಲ್ಲವೂ ಬಂದ್ ಆಗಿವೆ. ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಎಲ್ಲಾ ಅವಕಾಶಗಳು ಮುಚ್ಚಿವೆ. ರಸ್ತೆಬದಿ ಹೋಟೆಲ್​ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರು […]

Continue Reading
IMG 20210514 WA0002

ಪಾವಗಡ: ರಂಜಾನ್ ಆಚರಣೆ…!

ಪಾವಗಡ ಟೌನಿನ ಮುಸ್ಲಿಂ ಸಮುದಾಯದ ಮುಖಂಡರು ಸರಳದಿಂದ ರಂಜಾನ್ ಹಬ್ಬವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕಿನ ದಂಡಾಧಿಕಾರಿಗಳಾದ ನಾಗರಾಜು ಹಾಗೂ ಪಾವಗಡ ಸರ್ಕಲ್ ಇನ್ಸ್ ಪೆಕ್ಟರ್ ಹನುಮಂತರಾಯ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಮುತುವಲ್ಲಿ ಮಹಮ್ಮದ್ ಫಜಲುಲ್ಲಾ ಸಾಬ್ ಮಾತನಾಡಿ ಈ ತಿಂಗಳಲ್ಲಿ ದಾನ ಧರ್ಮ ಪ್ರಮುಖವಾದುದು. ಆದಾಯ ಗಳಿಸುವ ಪ್ರತಿಯೊಬ್ಬರು ಕಷ್ಟದಲ್ಲಿ ಇರುವವರಿಗೆ ನೆರವಾಗಿ ಸಂತೃಪ್ತಿ ಕಾಣಬೇಕು. ಹಸಿವು ಎಂದರೆ ಏನು ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕಾಗಿಯೇ 30 […]

Continue Reading