f152f26a 3768 4b37 9771 bea5a6e358ef

ಕೊರೋನಾ ವಾರಿಯರ್ಸ್ ಗಳಿಗೆ ಪುಷ್ಪವೃಷ್ಠಿ

DISTRICT NEWS ಬಿಬಿಎಂಪಿ

ಬೆಂಗಳೂರು ಮೇ ೬ :- ಕೊರೋನಾ ವಾರಿಯರ್ಸ್‌ಗಳಿಗೆ ಪುಷ್ಪವೃಷ್ಠಿ ಮಾಡುವ ಮೂಲಕ  ಕೆಎಸ್‌ ಆರ್‌ ಟಿಸಿ  ಗೌರವ ಸಮರ್ಪಿಸಿದರು.ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಾಗಿ ಕೆ ಎಸ್ ಆರ್ ಟಿ ಸಿ ಮತ್ತು ಇತರೆ ಸಾರಿಗೆ ನಿಗಮಗಳು ಬಸ್ ವ್ಯವಸ್ಥೆ ಮಾಡಿದ್ದು,  ಈ ಸಂದರ್ಭದಲ್ಲಿ ವೈದ್ಯರು, ಚಾಲಕರು, ನಿರ್ವಾಹಕರು ಪೋಲಿಸ್ ಸಿಬ್ಬಂದಿ,  ಬಿ ಬಿ ಎಂ ಪಿ ಪೌರ ಕಾರ್ಮಿಕರು , ಸಿವಿಲ್ ಡಿಪೆನ್ಸ್ ಸಿಬ್ಬಂದಿಗಳು,‌ನಿಗಮದ ಸಿಬ್ಬಂದಿಗಳು ಅವಿರತ ಸೇವೆ ಸಲ್ಲಿಸಿದ್ದು ಅವರನ್ನು ಉಪಮುಖ್ಯಮಂತ್ರಿಗಳು ಸಾರಿಗೆ ಇಲಾಖೆ ಶ್ರೀ. ಲಕ್ಷಣ ಸವದಿರವರು ಗೌರವಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಶ್ರೀ.ಶಿವಯೋಗಿ ಸಿ.ಕಳಸದ,ಭಾಆಸೇ,‌ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ, ಶ್ರೀಮತಿ. ಕವಿತಾ ಎಸ್.ಮನ್ನಿಕೇರಿ ಭಾಆಸೇ, ನಿರ್ದೇಶಕರು (ಸಿಬ್ಬಂದಿ & ಪರಿಸರ) ರವರು ಉಪಸ್ಥಿತರಿದ್ದರು.