76f2c7e7 ee69 451c 9271 f690e79d57fb

ಪಾವಗಡ: ಗೃಹರಕ್ಷಕ ದಳದವರಿಗೆ ದಿನಸಿ ಕಿಟ್ ವಿತರಣೆ

DISTRICT NEWS ತುಮಕೂರು

ಪಾವಗಡ.ಸಿದ್ದಾರ್ಥ ಕನ್ಸ್ಟ್ರಕ್ಷನ್ ರವರಿಂದ ಮತ್ತು ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ

ಪಾವಗಡ:ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷರಾದ ಚನ್ನಕೇಶವ ಮೂರ್ತಿಯವರು ನಾಗಲಮಡಿಕೆ ಹೋಬಳಿಯ ವೆಂಕಟಮ್ಮನಹಳ್ಳಿಯ ಪ್ರಭಾವಿ ರಾಜಕೀಯ ಮುಖಂಡರು ಹಾಗೂ ಸಿದ್ದಾರ್ಥ ಕನ್ಸ್ಟ್ರಕ್ಷನ್ ಜನರಲ್ ಮ್ಯಾನೇಜರ್ ನಾನಿಯವರು ಶಾಸಕರಾದ ವೆಂಕಟರಮಣಪ್ಪ ರವರ ನೇತೃತ್ವದಲ್ಲಿ ತಾಲೂಕಿನ ಗೃಹರಕ್ಷಕ ದಳದವರಿಗೆ ಮತ್ತು ಪತ್ರಕರ್ತರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು

ಆಹಾರದ ಕಿಟ್ ಮತ್ತು ತರಕಾರಿಗಳನ್ನು ವಿತರಿಸಿ ಮಾತನಾಡಿದ ಶಾಸಕರಾದ ವೆಂಕಟರಮಣಪ್ಪರವರು ನಮ್ಮ ತಾಲೂಕಿನಲ್ಲಿ ಗೃಹರಕ್ಷಕ ದಳದವರು ಮತ್ತು ಮಾಧ್ಯಮ ಸ್ನೇಹಿತರು ಕಷ್ಟಕಾಲದಲ್ಲಿ ಇದ್ದಾರೆ ಅವರ ಕಷ್ಟವನ್ನು ಅರಿತ ಸಿದ್ದಾರ್ಥ ಕನ್ಸ್ಟ್ರಕ್ಷನ್ ರವರುಗಳು ಆಹಾರದ ಕಿಟ್ ಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಶ್ಲಾಘನೀಯವಾಗಿದೆ  ಅವರಿಗೆ ದೇವರು ಒಳ್ಳೆಯ ಆರೋಗ್ಯ ಕೊಡಲಿ, ಮತ್ತು ಅವರಿಗೆ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆಎಂದರು

ಮಹಾಮಾರಿ ಕೊರೋನ ವೈರಸ್ ನ ಬಿಸಿ ಎಲ್ಲಾ ವರ್ಗದವರಿಗೂ ತಟ್ಟಿದೆ. ಈ ವೈರಸ್ ವಿರುದ್ಧದ ಹೋರಾಟದಲ್ಲಿ ಗೃಹ ರಕ್ಷ ದಳದ ಮತ್ತು ಪತ್ರಕರ್ತ ಸೇವೆ ಶ್ಲಾಘನೀಯವಾದದ್ದು. ತಮ್ಮ ಜೀವವನ್ನು ಲೆಕ್ಕಿಸದೆ ನಿತ್ಯ ಕಾಯಕವೇ ಕೈಲಾಸವೆಂದು ದುಡಿಯುವ ವರ್ಗ ಇವರದು. ಹಾಗಾಗಿ ಇವರ ಸೇವೆಯನ್ನು ಗುರುತಿಸಿ ಪಡಿತರ ಮತ್ತು ತರಕಾರಿಯ ಕಿಟ್ಟು ನೀಡುತ್ತಿರುವುದು ಸ್ವಾಗತ ಅರ್ಹ ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ರಲ್ಲಿ ಪತ್ರಕರ್ತರು ಒಬ್ಬರಾಗಿದ್ದಾರೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ವಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೆನ್ನಕೇಶವ ಮೂರ್ತಿ. ಬೋಮಯ್ಯ.ಪುರಸಭಾ ಸದಸ್ಯರಾದ ಸುದೇಶ್ ಬಾಬು ರವಿ, ರಾಜೇಶ್, , ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷರಾದ ಶೇಷಗಿರಿ, ಷಾ ಬಾಬು. ಸೇರಿದಂತೆ ಹಲವಾರು ಪತ್ರಕರ್ತರು ಗೃಹರಕ್ಷಕ ದಳದ ಸಿಬ್ಬಂದಿ ಹಾಜರಿದ್ದರು..

ವರದಿ -‌ ಬುಲೆಟ್‌ ವೀರಸೇನಯಾದವ್