IMG 20210718 WA0001 1

ಪಾವಗಡ: ಆಕ್ಸಿಜೆನ್ ಕಾನ್ಸಂಟೇಟರ್ ಹಸ್ತಾಂತರ….!

DISTRICT NEWS ತುಮಕೂರು

ಆಕ್ಸಿಜೆನ್ ಕಾನ್ಸಂಟೇಟರ್ 

ವೈ.ಎನ್.ಹೊಸಕೋಟೆ : ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮತ್ತು ವೆಸ್ಟರನ್ ಆಸ್ಟ್ರೇಲಿಯಾ ಕನ್ನಡ ಸಂಘದ ಸದಸ್ಯರು ಕರ್ನಾಟಕದಲ್ಲಿ ಕೋವಿಡ್ ಪರಿಹಾರ ಕಾರ್ಯಕ್ರಮದಡಿ ಆಕ್ಸಿಜೆನ್ ಕಾನ್ಸಂಟೇಟರ್ ಮತ್ತು ಮಾಸ್ಕ್ ಗಳನ್ನು ಶನಿವಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಲಿಂಗರಾಜು, ಗಡಿಪ್ರದೇಶವನ್ನು ಗುರ್ತಿಸಿ ಇಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಪರಿಕರಗಳನ್ನು ಕೊಟ್ಟಿರುವುದು ಶ್ಲಾಘನೀಯ. ೩ನೇ ಅಲೆ ಕೋವಿಡ್ ಬಂದರೆ ಮಕ್ಕಳಿಗೆ ಈ ಉಪಕರಣಗಳಿಂದ ಹೆಚ್ಚು ಹೆಚ್ಚು ಉಪಯೋಗವಾಗುತ್ತದೆ ಎಂದು ತಿಳಿಸಿದರು.

ಕೋಆರ್ಡಿನೇಟರ್ ಮೇಗಳಪಾಳ್ಯ ಕೃಷ್ಣನಾಯ್ಕ ಮಾತನಾಡಿ ನಾನು ಮೇಲ್ಕಂಡ ಎರಡು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದ ಜನತೆ ಪರಿಕರಗಳ ಅಗತ್ಯತೆ ಬಗ್ಗೆ ಕೋರಿದ್ದರು. ಹಾಗಾಗಿ ಹೋಬಳಿ ಕೇಂದ್ರದ ಆಸ್ಪತ್ರೆಗೆ ನಾಲ್ಕು ಆಕ್ಸಿಜೆನ್ ಕಾನ್ಸ್ಂಟೇಟರ್ ಗಳನ್ನು ಕೊಡಲಾಗಿದೆ. ತಿರುಮಣಿಗೆ ನಾಲ್ಕು ಪಾವಗಡಕ್ಕೆ ೧೦ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಪದ್ಮಕ್ಕಓಬಳೇಶ್, ಪೋತಗಾನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಜೋಡಿ ಅಚ್ಚಮ್ಮನಹಳ್ಳಿ ಅಧ್ಯಕ್ಷೆ ಮಾರಕ್ಕ, ವೈ.ಎನ್.ಹೊಸಕೋಟೆ ಪಿಎಸ್ಐ ಭಾರತಿ,ಎಸ್.ಸಿ, ಮುಖಂಡರಾದ ಎನ್.ಆರ್.ಅಶ್ವಥ್, ಕೀರ್ತಿನಾಯ್ಕ, ಕೆ.ಜಿ.ಮಂಜುನಾಥ, ಕಿಶೋರ್, ಶಿವಕುಮಾರ್, ಸುಮನ್, ಶಶಿ ಇತರರು ಹಾಜರಿದ್ದರು.

ವರದಿ: ಸತೀಶ್