IMG 20220818 WA0039

ಆನೇಕಲ್ : ಬಿಎಂಟಿಸಿ ಚಾಲಕರಿಗೆ ಸನ್ಮಾನ…!

DISTRICT NEWS ಬೆಂಗಳೂರು

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಆನೇಕಲ್ ಪಟ್ಟಣದ ವಾಸಿ ಜಿ ವೆಂಕಟೇಶ್ ರವರು ಬಿಎಂಟಿಸಿಯಲ್ಲಿ ಉತ್ತಮ ಚಾಲಕರೆಂದು ಬಂಗಾರ ಪದಕ ಪಡೆದದ್ದಕ್ಕಾಗಿ ಅವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಆದೂರು ಪ್ರಕಾಶ್ ಅರೇಹಳ್ಳಿ ಮಂಜು ಪೂಜಾರಿ ನಾಗರಾಜ್ ಸನಾವುಲ್ಲಾ ಇಲಿಯಾಜ್ ಖಾನ್ ಇದ್ದರು
ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಪ್ರಶಸ್ತಿಗಳು ವ್ಯಕ್ತಿಯನ್ನ ಮೌಲ್ಯಮಾಪನ ಮಾಡುತ್ತವೆ ನಿರೀಕ್ಷೆಯಿಲ್ಲದೆ ನಿಸ್ವಾರ್ಥ ಸೇವೆಗೆ ಬರುವ ಪ್ರಶಸ್ತಿಗಳೇ ನೈಜವಾದ ಪ್ರಶಸ್ತಿಗಳು ಎಂದು ಹೇಳಿದರು
ಅಪಘಾತವಿಲ್ಲದೆ ಸಂಸ್ಥೆಯ ಪ್ರಷಾಂಶೆಗಳ ಮೂಲಕ ಪ್ರಶಸ್ತಿ ಪಡೆದಿರುವ ವೆಂಕಟೇಶ್ ರವರು ನಿಜವಾದ ಸಾಧಕರಾಗಿ ಹೊರ ಹೊಮ್ಮಿರುವುದು ಶ್ಲಾಘನೀಯ ಅವರು ಆನೇಕಲ್ ಪಟ್ಟಣಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು
ಪುರಸಭೆ ಮಾಜಿ ಉಪಾಧ್ಯಕ್ಷರಾದ ಬಿ ಪಿ ಮರಿಯಪ್ಪ ಮಾತನಾಡಿ ಚಾಲಕರೆಂದರೆ ಸಮಾಜವನ್ನು ಸುರಕ್ಷತೆಯ ದಡಕ್ಕೆ ಮುಟ್ಟಿಸುವುದಾಗಿದೆ ಅವನು ತನ್ನ ಪ್ರಾಣವನ್ನು ಲೆಕ್ಕಿಸದೆ ಹಲವರ ಪ್ರಾಣ ಉಳಿಸುತ್ತಾನೆ ಇಂತಹ ವಿಷೇಶ ವ್ಯಕ್ತಿಗಳನ್ನು ಸಮಾಜ ಗೌರವಿಸಬೇಕು ಎಂದು ಹೇಳಿದರು
ಕರಾವೇ ತಾಲೂಕು ಅದ್ಯಕ್ಷ ಅರೇಹಳ್ಳಿ ಮಂಜು ಮಾತನಾಡಿ ಚಾಲಕ ಪ್ರಯಾಣಿಕರ ಪ್ರಾಣವನ್ನು ರಕ್ಷಿಸುವ ಆಪದ್ಬಾಂಧವ ಅವನು ದೇವರಿಗೆ ಸಮನಾಗಿದ್ದಾನೆ . ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಅರೇಹಳ್ಳಿ ಮಂಜು ಜಯಣ್ಣ ಸನಾವುಲ್ಲಾ ಇಲಿಯಾಜ್ ಖಾನ್ ರವಿ ಬಹದ್ದೂರ್ ಪುರ ಕನಮನಹಳ್ಳಿ ಕುಮಾರ್ ಪೂಜಾರಿ ನಾಗರಾಜ್ ರಾಜು ಬಹದ್ದೂರ್ ಪುರ ಸೈಯದ್ ಸಾಗರ್ ಸಂಪಂಗಿರಾಮಯ್ಯ ಹಾರಿಫ್ ರಾಮಚಂದ್ರ ಅಸ್ಲಾಂ ಪಾಷ ಕಸಾಪ ಪದಾಧಿಕಾರಿಗಳಾದ ಎಂ ಗೋವಿಂದರಾಜು ಅಪ್ಸರ್ ಆಲಿಖಾನ್ ಡಾ. ನಾಗರಾಜ್ ಮಿಲಿಟರಿ ಕುಮಾರ್ ಚುಟುಕುಶಂಕರ್ ಹಾಜರಿದ್ದರು