15tmk02

Tumkur:ಜೆಡಿಎಸ್ ನಿಂದ ಬಿಜೆಪಿಗೆ ಸಾಮೂಹಿಕ ವಲಸೆ…!

DISTRICT NEWS ತುಮಕೂರು

ತುಮಕೂರು ಗ್ರಾಮಾಂತರ: ಜೆಡಿಎಸ್ ನಿಂದ ಬಿಜೆಪಿಗೆ ಸಾಮೂಹಿಕ ವಲಸೆ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ನ ಘಟಾನುಘಟಿ ಮುಖಂಡರು ಸಾಮೂಹಿಕವಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಮಾಜಿ ಶಾಸಕ ಬಿ.ಸುರೇಶಗೌಡ ಇದ್ದರು.

ಇಷ್ಟು ದೊಡ್ಡ ಪ್ರಮಾಣದ ನಾಯಕರ ವಲಸೆ ತುಮಕೂರು ರಾಜಕಾರಣದಲ್ಲಿ ಇದೇ ಮೊದಲು. ಜೆಡಿಎಸ್ ಬಹುತೇಕ ತನ್ನ ಎಲ್ಲ ಮುಖಂಡರನ್ನು ಕಳೆದುಕೊಂಡಂತಾಗಿದೆ.

ತುಮಕೂರು ಗ್ರಾಮಾಂತರದಲ್ಲಿ ಸುರೇಶ್ ಗೌಡ ಗೆಲುವಿಗೆ ಶ್ರಮಿಸಲು ಸಿಎಂ ಸೂಚನೆ

ಬೆಂಗಳೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಉತ್ತಮ‌ ಕೆಲಸ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಚಿಸಿದರು.
ತಮ್ಮನ್ನು ಭೇಟಿ ಮಾಡಿದ ಸುರೇಶಗೌಡ ನೇತೃತ್ವದ ತುಮಕೂರು ಗ್ರಾಮಾಂತರ ಕ್ಷೇತ್ರದ ಮುಖಂಡರಿಗೆ ಸೂಚನೆ ನೀಡಿದ ಮುಖ್ಯಮಂತ್ರಿ ಗಳು, ಸುರೇಶ್ ಗೌಡ ಒಳ್ಳೆಯ ಕೆಲಸಗಾರರಾಗಿದ್ದಾರೆ.
ಅವರು ಸದಾ ಜನರ ಪರವಾಗಿ ಕೆಲಸ ಮಾಡುವ ವ್ಯಕ್ತಿಯಾಗಿದ್ದು, ಕೆಲಸದ ಆಧಾರದಲ್ಲಿ ಚುನಾವಣೆಗಳು ನಡೆಯುವುದಾದರೆ ಸುರೇಶಗೌಡ ಅವರು ಸೋಲುವುದಿಲ್ಲ.
ರಾಜಕೀಯದಲ್ಲಿ ಏರುಪೇರುಗಳಾಗುತ್ತವೆ. ಈ ಬಾರಿ ಚುನಾವಣೆಯಲ್ಲಿ ಸುರೇಶ್ ಗೌಡ ಅವರು ಗೆಲ್ಲುತ್ತಾರೆ ಎಂಬ ವರದಿಗಳಿವೆ‌. ಎಲ್ಲರೂ ಸೇರಿ ಅವರನ್ನು ಗೆಲ್ಲಿಸುವಂತೆ ಸೂಚಿಸಿದರು.

ಜೆಡಿಎಸ್ ನ ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷ, ಕಳೆದ ಜಿ.ಪಂ. ಚುನಾವಣೆಯ ಪರಾರ್ಜಿತ ಅಭ್ಯರ್ಥಿ ವೈ.ಟಿ.ನಾಗರಾಜ್, ಬೆಳಗುಂಬ ಜಿ.ಪಂ.ನ ಪರಾರ್ಜಿತ ಅಭ್ಯರ್ಥಿ ಕೆಂಪರಾಜು, ಹೆಗ್ಗರೆ ಜಿ.ಪಂ. ಪರಾಜಿತ ಅಭ್ಯರ್ಥಿ ಜಿ.ವೆಂಕಟೇಶ್, ಹೊನ್ನುಡಿಕೆ ಜಿ.ಪಂ. ಪರಾಜಿತ ಅಭ್ಯರ್ಥಿ ಹನುಮಂತರಾಯಪ್ಪ, ಊರ್ಡಿಗೆರೆ ಜಿ.ಪಂ. ಪರಾಜಿತ ಅಭ್ಯರ್ಥಿ ವೆಂಕಟೇಶಬಾಬು, ತುಮಕೂರು ಗ್ರಾಮಾಂತರ ಜಿ.ಪಂ. ಮಾಜಿ ಸದಸ್ಯ ರಾಮಾಂಜಿನಪ್ಪ, ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷೆ ತಾರಾದೇವಿ, ತುಮಕೂರು ಗ್ರಾಮಾಂತರದ ಕಾರ್ಯಾಧ್ಯಕ್ಷ ಜಯಂತ್ ಗೌಡ, ತುಮಕೂರು ಪಾಲಿಕೆ ಮಾಜಿ ಸದಸ್ಯ ಜನಾರ್ದನ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಯೋಗೀಶ್ ಪ್ರಮುಖರು.

15tmk01

ಇಷ್ಟೇ ಅಲ್ಲದೇ ಅರೆಯೂರು ತಾ.ಪಂ. ಸದಸ್ಯ ಮುನೇಶ್, ಕೆಸರುಮಡು ಗ್ರಾ.ಪಂ. ಮಾಜಿ ಅಧ್ಯಕ್ಷ ಮಾರೇಗೌಡ, ಪಿಎಲ್ ಡಿ ಬ್ಯಾಂಕ್  ನಿರ್ದೇಶಕ ಮುನಿರಾಜು, ಹೆಗ್ಗರೆ ಗ್ರಾ.ಪಂ‌ ಸದಸ್ಯ ಶಿವಣ್ಣ, ಮಾಜಿ ಸದಸ್ಯ ನಾಗರಾಜು, ಹೆಗ್ಗರೆಯ ಪ್ರಮುಖ ಮುಖಂಡರಾದ ರೇಣುಕಪ್ರಸಾದ್, ಸಿರಿವಾರದ ನಾರಾಯಣಪ್ಪ, ಹರಳೂರು ಗ್ರಾ.ಪಂ. ಸದಸ್ಯ ಕೃಷ್ಣಪ್ಪ, ವಡೆಯರಪುರದ ಸ್ವಾಮಿ, ಅರೆಯೂರು ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಹೆಗ್ಗರೆಯ ಅಲ್ಪ ಸಂಖ್ಯಾತರ ಘಟಕದ ಮುಖಂಡ ಮುಬಾರಕ್ ಪಾಷಾ ಸೇರ್ಪಡೆಗೊಂಡ ಪ್ರಮುಖರಾಗಿದ್ದಾರೆ.

ಜಿಲ್ಲಾ ಪಂಚಾಯತ್ ನ  ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಸದಸ್ಯರೇ ಇದ್ದರು.ಕಳೆದ ಜಿ.ಪಂ.ನಲ್ಲಿ ಜೆಡಿಎಸ್ ನಿಂದ  ಸೋತಿದ್ದ ಎಲ್ಲರೂ ಈಗ ಬಿಜೆಪಿ ಸೇರುವ ಮೂಲಕ ಗ್ರಾಮಾಂತರದಲ್ಲಿ ಜೆಡಿಎಸ್ ನ ಮನೆಯೇ ಖಾಲಿಯಾದಂತೆ ಆಗಿದೆ.

ಸಿಎಂ ಜತೆ ಸಭೆ: ಮುಖಂಡರು ಜೆಡಿಎಸ್ ತೊರೆದು ಬಿಜೆಪಿಗೆ ಸೇರುವ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಔಪಚಾರಿಕವಾಗಿ ಮಾತನಾಡಿದರು.

ಜೆಡಿಎಸ್ ನ ಬಹುತೇಕ ಉನ್ನತ, ಹಿರಿಯ ಮುಖಂಡರೇ ಬಿಜೆಪಿ ಸೇರುತ್ತಿರುವುದಕ್ಕೆ ಸಂಸತ ವ್ಯಕ್ತಪಡಿಸಿದರು.

ನಿಮ್ಮೆಲ್ಲರ ಸೇರ್ಪಡೆಯಿಂದ ಗ್ರಾಮಾಂತರದಲ್ಲಿ ಬಿಜೆಪಿಯ ದೊಡ್ಡ ಅಲೆಯೇ ಹೇಳಲಿದೆ. ಸುರೇಶಗೌಡರು ಅತಿ ಹೆಚ್ಚು ಅಂತರದಿಂದ ಗೆಲುವುದು ಖಚಿತ ಎಂದರು.

ನಾನು ಮಾಡಿರುವುದಕ್ಕಿಂತಲೂ ಹೆಚ್ಚು ಕೆಲಸ ಸುರೇಶಗೌಡರು ಮಾಡಿದ್ದಾರೆ. ಹೆಬ್ಬೂರು- ಗೂಳೂರು ಏತ ನೀರಾವರಿ ಯೋಜನೆಯನ್ನು ವರ್ಷದಲ್ಲೇ ಮುಗಿಸಿದರು. ಈ ಸಲ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ನಂತರ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿ ಗ್ರಾಮಾಂತರ ಘಟಕದ ಕಾರ್ಯಾಧ್ಯಕ್ಷ ಶಂಕರಣ್ಣ, ಹಿರಿಯ ಮುಖಂಡರಾದ ವೈ.ಎಚ್.ಹುಚ್ಚಯ್ಯ, ಜಿ.ಪಂ.ಮಾಜಿ ಸದಸ್ಯರಾದ ಸಿದ್ದೇಗೌಡ, ನರಸಿಂಹಮೂರ್ತಿ, ಗೂಳೂರು ಶಿವಕುಮಾರ್, ನರಸಿಂಹಮೂರ್ತಿ ಸಹಿತ ಹಲವು ಬಿಜೆಪಿ ಮುಖಂಡರು ಇದ್ದರು