IMG 20230426 WA0002

ಪಾವಗಡ: ಸಿದ್ದಾಪುರ ಗ್ರಾಮಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆ…!

DISTRICT NEWS ತುಮಕೂರು


ವೈ.ಎನ್.ಹೊಸಕೋಟೆ : ಸಿದ್ದಾಪುರ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೂಪಕಿಶೋರ್ ಬುಧವಾರದಂದು ಅವಿರೋಧವಾಗಿ ಆಯ್ಕೆಯಾದರು.
ಇತ್ತೀಚೆಗೆ ಅಧ್ಯಕ್ಷರ ರಾಜಿನಾಮೆಯಿಂದ ಸ್ಥಾನ ತೆರವಾಗಿತ್ತು.

ಇಂದು ಅಧ್ಯಕ್ಷರ ಸ್ಥಾನಕ್ಕ ಚುನಾವಣೆ ನಡೆಯಿತು . ರೂಪಕಿಶೋರ್ ಹೊರತಾಗಿ ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ಕಾಂಗ್ರೆಸ್ ಬೆಂಬಲಿತ ರೂಪಕಿಶೋರ್ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಸಿ.ಸುಮತಿ ಘೋಷಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಈರಾರೆಡ್ಡಿ, ಅಂಜಿನಪ್ಪ, ತಿಮ್ಮಪ್ಪ, ಭಗವಂತಯ್ಯ, ಸೀಗಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಪಾತಲಿಂಗಪ್ಪ, ಪಿ.ಸಿ.ನಾಗರಾಜು, ಎಸ್.ಟಿ.ನಾಗರಾಜು, ಟಿ.ಉಮೇಶ್, ಹೆಚ್.ಪಿ.ಕೃಷ್ಣ, ಟಿ.ವಿ.ವೆಂಕಟೇಶಪ್ಪ, ಎನ್.ಆರ್.ಅಶ್ವಥಕುಮಾರ್, ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ವಿವಿಧ ಪಕ್ಷಗಳ ಮುಖಂಡರು, ಗ್ರಾ.ಪಂ ಸದಸ್ಯರು ಹಾಜರಿದ್ದರು.