IMG 20210121 WA0045

ಪಾವಗಡ: ಹಾದಿ ತಪ್ಪುತ್ತಿರುವ ಭದ್ರಾ ಯೋಜನೆ…?

ತುಮಕೂರು DISTRICT NEWS

ಹಾಲಿ ಶಾಸಕರು ಮತ್ತು ಸ್ಥಳೀಯ ಅಧಿಕಾರಿಗಳು ಆಮಿಷಕ್ಕೆ ಬಲಿಯಾಗುತ್ತಿದೆಯಾ ಈ ಯೋಜನೆ….?

ಭದ್ರಾ ಮೇಲ್ದಂಡೆ ಯೋಜನೆ, ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕ ವಾಗಿ ಸಾಗುತ್ತಿದೆ

ಪಾವಗಡ: –  ತುಂಗಭದ್ರಾ ಕುಡಿಯುವ ನೀರಿನ ಕಾಮಗಾರಿಯು ಮತ್ತು ಭದ್ರಾ ಮೇಲ್ದಂಡೆ ಯೋಜನೆ   ಅವೈಜ್ಞಾನಿಕ ವಾಗಿದೆ ಎಂದು  ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ ಆರೋಪಿಸಿದ್ದಾರೆ

ಚಿತ್ರದುರ್ಗ ಮಾರ್ಗದಿಂದ ಕುಮುಟ – ಕೊಡಮಡಗು ವರೆಗೂ ಸಾಗುತ್ತಿರುವ ಕುಡಿಯುವ ನೀರಿನ ಕಾಮಗಾರಿಯ ಸರ್ಕಾರದ ನಿಯಮಾವಳಿಗಳನ್ನು ಮೀರಿ ಸಾಗುತ್ತಿದೆ ಹಾಲಿ ಶಾಸಕರು ಮತ್ತು ಸ್ಥಳೀಯ ಅಧಿಕಾರಿಗಳು ಯಾವುದೋ ಒಂದು ಆಮಿಷಗಳಿಗೆ ಶಾಮೀಲಾಗಿ  ಈ ಯೋಜನೆಯ ಹಾದಿಯನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ತಿಮ್ಮರಾಯಪ್ಪ ಆರೋಪಿಸಿದ್ದಾರೆ.

ಕಾಮಗಾರಿಕೆಯು ರಸ್ತೆಯ ಬದಿಯಲ್ಲಿ  ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗಲಿದೆ ಎಂದರು .

ರಸ್ತೆ ಬದಿಯಲ್ಲಿ ಪೈಪ್ ಲೈನ್ ಮಾಡುವುದನ್ನು ನಿಲ್ಲಿಸಿ ರೈತರಿಗೆ ಪರಹಾರ ನೀಡಿ ರೈತ ರ ಜಮೀನಿನಲ್ಲಿ ಪೈಪ್ ಲೈನ್ ಕಾಮಗಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

ವರದಿ ಬುಲೆಟ್ ವೀರಸೇನ ಯಾದವ್