ಭಯಾನಕ ಕೋವಿಡ್19 ಸೋಂಕಿನ ಆರ್ಭಟದ ಮಧ್ಯದಲ್ಲಿಯೂ ನಿರಂತರ ಸೇವಾ ಯಜ್ಞದಲ್ಲಿ ತೊಡಗಿದೆ ಈ ಸಂಸ್ಥೆ ಕಳೆದ ಆರು ತಿಂಗಳಿಗೂ ಮಿಗಿಲಾಗಿ ಕೋವಿಡ್19 ಕಾರಣದಿಂದಾಗಿ ಇತರೆ ಖಾಯಿಲೆಗಳಾದ ಕ್ಷಯ, ಕುಷ್ಠ ಇತ್ಯಾದಿಗಳಿಗೆ ಹೆಚ್ಚಿನ ಗಮನ ನೀಡಲು ಆಗುತ್ತಿಲ್ಲ. ಆದರೆ ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಯಾವುದೇ ರೀತಿಯ ಅಡೆತಡೆ ಇಲ್ಲದೆ ಕ್ಷಯರೋಗ, ಕುಷ್ಠರೋಗ, ಕಣ್ಣು, ಕಿವಿ, ಗಂಟಲು, ಮೂಗು, ಚರ್ಮ ಮತ್ತು ಇತರ ಖಾಯಿಲೆಗಳಿಗೆ ಸಂಬಂಧಪಟ್ಟ ನ್ಯೂನತೆಗಳಿಗೆ ಸೇವೆ ಸದಾ ದೊರೆಯುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾದ ವಿಚಾರವೇ ಸರಿ.ಎಲ್ಲಿ ನೋಡಿದರೂ ಕೋವಿಡ್19ನ ಭರಾಟೆಯಲ್ಲಿ ಇತರ ಸಾಮಾನ್ಯ ಖಾಯಿಲೆಗಳಿಗೆ ಗಮನ ಹೆಚ್ಚು ಕೊಡಲಾಗುತ್ತಿಲ್ಲ ಬೇರೆ ಆರೋಗ್ಯ ಕೇಂದ್ರಗಳಲ್ಲಿ. ಆದರೆ ಪಾವಗಡದ ಈ ಆಸ್ಪತ್ರೆಯಲ್ಲಿ ಯಥಾಪ್ರಕಾರ ಈ ತೆರನಾದ ಖಾಯಿಲೆಗಳಿಗೆ ಸರ್ವ ರೀತಿಯಲ್ಲಿ ಯಾವುದೇ ರೀತಿಯ ಗುಣಮಟ್ಟವನ್ನು ಕಡಿಮೆ ಮಾಡದೆ ಯಥಾಪ್ರಕಾರವಾಗಿ ಸೇವೆ ಸಲ್ಲಿಸಲಾಗುತ್ತಿದೆ. ಇದು ನಿಜಕ್ಕೂ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಸ್ಥೆಗೆ ಒಂದು ಮಹತ್ತರವಾದ ಅಂಶವೇ ಸರಿ. ಇದಕ್ಕೆ ಮೂಲ ಕಾರಣ ಸಂಪೂರ್ಣ ತಮ್ಮನ್ನೇ ತಾವು ತೊಡಗಿಸಿಕೊಂಡು ಸೇವಾ ತತ್ಪರತೆಯಲ್ಲಿ ಕಿಂಚಿತ್ತೂ ಲೋಪವಿಲ್ಲದೆ ಸೇವೆ ಸಲ್ಲಿಸುತ್ತಿರುವ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ, MBBS DLO DNB (ENT) ಕಿವಿ, ಮೂಗು ಮತ್ತು ಗಂಟಲು, ಅಲರ್ಜಿ ಮತ್ತು ಆಸ್ತಮಾ ತಜ್ಞರು ಹಾಗೂ ಶಸ್ತ್ರ ಚಿಕಿತ್ಸಕರು, ಡಾ.ಅಭಿಷೇಕ್ ಡಿ. MBBS MS Fellowship in Cornea […]
Continue Reading