IMG 20230211 WA0036

ಪಾವಗಡ:ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 22 ವರ್ಷ ನಂತರ ಮತ್ತೆ ಒಂದಾದ ಜೋಡಿ…!

ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 22 ವರ್ಷ ನಂತರ ಮತ್ತೆ ಒಂದಾದ ಜೋಡಿ.ಪಾವಗಡ: ವಿವಿಧ ಕಾರಣಗಳಿಂದ 22 ವರ್ಷಗಳ ಹಿಂದೆ ಬೇರೆ–ಬೇರೆಯಾಗಿದ್ದ ದಂಪತಿಗಳು ಮತ್ತೊಮ್ಮೆ ಒಂದಾಗಿರುವ ಘಟನೆ ಶನಿವಾರ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದಿದೆ.ತಾಲ್ಲೂಕಿನ ಹುಲಿಬೆಟ್ಟ ತಾಂಡದ ಚಿಟ್ಟಿಬಾಯಿ, ಶಿರಾದ ನಾಗರಾಜ ನಾಯ್ಕ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನಕ್ಕಾಗಿ ಪ್ರಕರಣ ದಾಖಲಿಸಿದ್ದರು,ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶರಾದ ಎಂ.ಎಸ್ ಹರಿಣಿ ಮದ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥವಾಗಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ […]

Continue Reading
IMG 20230210 WA0037

ಮಧುಗಿರಿ: ಸರ್ಕಾರಿ ನೌಕರರ ನೂತನ ಅಧ್ಯಕ್ಷರ ಪದಗ್ರಹಣ….!

ಮಧುಗಿರಿ. ಸರ್ಕಾರಿ ನೌಕರರ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ. ವಿಧ್ಯಾವಂತರಾನ್ನಾಗಿ ಸೃಷ್ಟಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ಹನುಮಂತನಾಥಸ್ವಾಮೀಜಿ ತಿಳಿಸಿದರು.ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರ ಪದಗ್ರಹಣ, ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ.ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಶ್ರೀಗಳು ಜಗತ್ತನ್ನು ಆಳುವ ನಾಯಕನನ್ನು ಸೃಷ್ಟಿಸಿದರೂ ಶಿಕ್ಷಕರು ತ್ಯಾಗಮಯಿಗಳಾಗುತ್ತಾರೆ. […]

Continue Reading
IMG 20230209 WA0002

ಕೊರಟಗೆರೆ: ಸರ್ಕಾರಿ ಶಾಲಾ ಮಕ್ಕಳ ದುಸ್ಥಿತಿ….!

ಕೊರಟಗೆರೆ : ಶಾಲಾ ವಿಧ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿವೇತನ , ಸಮವಸ್ತ್ರ. ಹಾಗೂ ಷೂಗಳನ್ನು ವಿತರಿಸಲು ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ .ಎಂದು ಕೊರಟಗೆರೆ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆರೋಪಿಸಿದರು. ಅವರು ತಾಲೂಕಿನ ಪುರವರ ಹೋಬಳಿಯ ರಘುನಹಳ್ಳಿಯಲ್ಲಿ 14 ಲಕ್ಷ ರೂ ವೆಚ್ಚದ ಶಾಲಾ ಕಟ್ಟಡ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡಿ ಮಾತನಾಡಿದರು. ಇತ್ತೀಚೆಗೆ ಕೇಂದ್ರ ಸರಕಾರ ಮಂಡಿಸಿದ ಬಜೆಟ್ ದೇಶದ ಜನರಿಗೆ ಪೂರಕವಾಗಿಲ್ಲ .ಮತ್ತೊಂದು ಬಜೆಟ್ ಮಂಡಿಸುವ ಅವಕಾಶವಿದೆ. ಕೇಂದ್ರದಲ್ಲಿ […]

Continue Reading
IMG 20230208 WA0062

ಪಾವಗಡ: ನರೇಗಾ ಯೋಜನೆಯಲ್ಲಿ ಅವ್ಯವಹಾರ,ಪ್ರತಿಭಟನೆ

ನರೇಗಾ ಯೋಜನೆಯಲ್ಲಿ ಅವ್ಯವಹಾರ,ಪ್ರತಿಭಟನೆ  . ಪಾವಗಡ: ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ನರೇಗಾದಲ್ಲಿ  ಅವ್ಯವಹಾರವಾಗಿದೆ ಎಂದು ತಾಲೂಕಿನ ಕನ್ನಮೇಡಿ ಗ್ರಾಮ ಪಂಚಾಯಿತಿ ಕಚೇರಿ ಬಳಿ ಕೂಲಿ ಕಾರ್ಮಿಕರು ಬುಧುವಾರ ಧರಣಿ ಸತ್ಯಾಗ್ರಹ ನಡೆಸಿದರು.    ನರೇಗಾ ಯೋಜನೆ ಅಡಿ ಕೆಲಸ ಮಾಡಿದ ತಮಗೆ ಇದುವರೆಗೂ ತಮ್ಮ ಖಾತೆಗೆ ಕೂಲಿ ಹಣ ಸಂದಾಯವಾಗಿಲ್ಲ, ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉತ್ತರ ನೀಡುತ್ತಿಲ್ಲ ಎಂದು, ಕಾರ್ಮಿಕರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿರು. ನರೇಗಾ ಯೋಜನೆಯ ಅಡಿ ಪ್ರಭಾವಿಗಳಿಗೆ   ವಿವಿಧ ಕಾಮಗಾರಿಗಳನ್ನು ಹಾಕಿ ಕೊಡಲಾಗುತ್ತಿದೆ. […]

Continue Reading
IMG 20230206 WA0069

ಮಧುಗಿರಿ:1.20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ…!

ಮಧುಗಿರಿ : ಮುಂದಿನ ದಿನಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರೈತಪರ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಪಂಚರತ್ನ ಯೋಜನೆ ಅನುಷ್ಠಾನಗೊಂಡು ನಾಡಿನ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ತಾಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯಲ್ಲಿ ನೂತನ ಗ್ರಾ.ಪಂ.ಕಟ್ಟಡ, ಸತ್ತಿಗೇನಹಳ್ಳಿ ಹಾಗೂ ಬೆನಕನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಅಂಬೇಡ್ಕರ್ ಭವನ, ಲಕ್ಲಿಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವಸೇತುವೆ ಕಾಮಗಾರಿ ಸೇರಿದಂತೆ. ಕಡಗತ್ತೂರಿನಲ್ಲಿ ಸೇತುವೆಯ ಒಟ್ಟು 1.20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾಡಿನಲ್ಲಿ […]

Continue Reading
05.ynh .01 scaled

ಪಾವಗಡ: ಕಳಪೆ ಬೀಜ ಮಾರಾಟ- ಸಂಕಷ್ಟದಲ್ಲಿ ಅನ್ನದಾತ…!

ಕಳಪೆ ಬೀಜ ಮಾರಾಟ : ರೈತರ ಆಕ್ರೋಶವೈ.ಎನ್.ಹೊಸಕೋಟೆ : ಕಲಬೆರಕೆ ಬಿತ್ತನೆ ಬೀಜ ನೀಡಿದ ಪರಿಣಾಮ ಫಸಲು ಕಲಬೆರಕೆಯಾಗಿ ಮಾರಾಟವಾಗದೆ ನಷ್ಟ ಸಂಭವಿಸಿದೆ ಎಂದು ತಿಪ್ಪಗಾನಹಳ್ಳಿಯ ರೈತ ಚಿರಂಜೀವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.YNH ಹೋಬಳಿ ಕೇಂದ್ರದ ಭಾಗಲಕ್ಷ್ಮಿ ಏಜೆನ್ಸೀಸ್‍ನಲ್ಲಿ ರೈತ ಈರುಳ್ಳಿ ಬೀಜ ಖರೀದಿಸಿ ಬಿತ್ತನ ಮಾಡಿದ್ದಾರೆ. ಪಸ್ತುತ ಫಸಲು ಕಟಾವಿಗೆ ಬಂದಿದೆ. ಕಟಾವು ಮಾಡಿ ನೋಡಿದಾಗ ಫಸಲಿನಲ್ಲಿ ಜಾತಿಗೊಂದು ತಳಿಗೊಂದು ಈರುಳ್ಳಿ ಇರುವುದು ಕಂಡುಬಂದಿದೆ. ಇದನ್ನು ಕಂಡ ವ್ಯಾಪಾರಸ್ಥರು ಯಾರೊಬ್ಬರೂ ಫಸಲನ್ನು ಖರೀದಿ ಮಾಡುತ್ತಿಲ್ಲ. ಇದರಿಂದ ನಮಗೆ […]

Continue Reading
IMG 20230205 WA0054

ಮಧುಗಿರಿ:ಪಕ್ಷಾತೀತಾವಾಗಿ ಸೌಲಭ್ಯಗಳನ್ನು ಆರ್ಹ ಜನರಿಗೆ ಪ್ರಮಾಣಿಕವಾಗಿ ತಲುಪಿಸಿದ್ದೇನೆ….!

ಮಧುಗಿರಿ : ಪಕ್ಷಾತೀತಾವಾಗಿ ಸೌಲಭ್ಯಗಳನ್ನು ಆರ್ಹ ಜನರಿಗೆ ಪ್ರಮಾಣಿಕವಾಗಿ ತಲುಪಿಸಿದ್ದೇನೆ ಇದರಲ್ಲಿ ಯಾವುದೇ ರೀತಿಯ ರಾಜಕೀಯ ಉದ್ದೇಶ ಹೊಂದಿರಲ್ಲಿಲ್ಲವೆಂದು ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ತಿಳಿಸಿದರು. ಅವರು ಐ ಡಿ ಹಳ್ಳಿ ಹೋಬಳಿಯ ಚೆನ್ನ ಮಲ್ಲೇನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ನವರು ರಾಜ್ಯದ ಎಲ್ಲಾ ವರ್ಗದವರ ಅನೂಕೂಲಕ್ಕಾಗಿ ಅನ್ನ ಭಾಗ್ಯ ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡಿದರು. ನನ್ನ ಅಧಿಕಾರಾವಧಿಯಲ್ಲಿ ಬರಗಾಲ ಪೀಡಿತ ಪ್ರದೇಶವಾದ ಈ ತಾಲೂಕಿನ ಸರ್ಕಾರಿ ನೌಕರರನ್ನು ಹೊರತು […]

Continue Reading
IMG 20230203 WA0008

ಪಾವಗಡ:ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ..!

ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ.ಪಾವಗಡ. ಪಟ್ಟಣದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆರೋಗ್ಯ ಇಲಾಖೆಯು ಶುಕ್ರವಾರ ತಂಬಾಕು ನಿಯಂತ್ರಣ ಕಾಯ್ದೆಯ ಜಾಗೃತಿ ಮೂಡಿಸುವ ಸಲುವಾಗಿ ಗುಲಾಬಿ ಆಂದೋಲನ ಕಾರ್ಯಕ್ರಮಕ್ಕೆ ತಹಶೀಲ್ದಾರ್ ವರದರಾಜು ಚಾಲನೆ ನೀಡಿದರು.ಕಾರ್ಯಕ್ರಮ ಉದ್ದೇಶಿಸಿ ತಹಶೀಲ್ದಾರ್ ವರದರಾಜ ಮಾತನಾಡಿ, ಸಾರ್ವಜನಿಕರಿಗೆ ತಂಬಾಕು ಕಡಿಮೆ ಬಳಸುವಂತೆ ಗುಲಾಬಿ ಹೂಗಳನ್ನು ನೀಡುವ ಮೂಲಕ ಜಾಗೃತಿ ಉಂಟು ಮಾಡುವುದು ಒಂದು ವಿನೂತನ ಕಾರ್ಯಕ್ರಮವಾಗಿದೆ ಎಂದು, ತಂಬಾಕಿನಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ, ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ […]

Continue Reading
30.ynh .01 scaled

ಪಾವಗಡ: ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ನೂತನ ಅಧ್ಯಕ್ಷರ ಆಯ್ಕೆ…!

ನೂತನ ಅಧ್ಯಕ್ಷರ ಆಯ್ಕೆವೈ.ಎನ್.ಹೊಸಕೋಟೆ : ಗ್ರಾಮದ ಗ್ರಾಮಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ತಿಪ್ಪೇಸ್ವಾಮಿಯವರು ಸೋಮವಾರ ಅವಿರೋದವಾಗಿ ಆಯ್ಕೆಯಾದರು.ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು, ಜೆಡಿಎಸ್ ಬೆಂಬಲಿತ ಸದಸ್ಯೆ ಲೀಲಾವತಿ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ವರದರಾಜು ತಿಳಿಸಿದರು . ವೈ ಎನ್ ಹೊಸಕೋಟೆ ಗ್ರಾಮ ಪಂಚಯತಿ ಅಧ್ಯಕ್ಷ ಸ್ಥಾನ ಎಸ್ ಟಿ ಮಹಿಳೆಗೆ ಮೀಸಲಾಗಿತ್ತು, ಜೆಡಿ ಎಸ್ ಬೆಂಬಲಿತ ಮೂರು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲವು ಸಾದಿಸಿದ್ದರಿಂದ ಮೂವರಿಗೆ […]

Continue Reading
IMG 20230129 WA0008

ಪಾವಗಡ: ಸ್ಮಶಾನ ಕ್ಕಾಗಿ ‘ಶವ’ವಿಟ್ಟು ಪ್ರತಿಭಟನೆ…!

ಪಾವಗಡ: ತಾಲೂಕಿನ ರೊಪ್ಪ ಗ್ರಾಮದಲ್ಲಿ ಮಧ್ಯಾಹ್ನ ರಂಗಪ್ಪ ಎನ್ನುವ ಅನಾಥ ವ್ಯಕ್ತಿ ಸಾವನ್ನಪ್ಪಿದ್ದು ಸತ್ತ ವ್ಯಕ್ತಿಯನ್ನು ಹೂಳಲು ಸ್ಮಶಾನ ವ್ಯವಸ್ಥೆ ಇಲ್ಲದಿರುವುದರಿಂದ ಸಂಜೆಯ ವೇಳೆಗೆ ಸಾವಿರ ಜನರು ಸೇರಿ ಪಾವಗಡ ಪೆನುಗೊಂಡ ಮುಖ್ಯ ರಸ್ತೆ ಬಂದ್ ಮಾಡಿ , ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು, ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು, ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು .ತಮ್ಮ ಊರಿಗೆ ಸ್ಮಶಾನ ಇಲ್ಲವೆಂದು ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿ ಪ್ರತಿಭಟನಾ ನಿರತರು […]

Continue Reading